<p><strong>ನವದೆಹಲಿ:</strong> ಮುಂದಿನ ಬಿಹಾರ ವಿಧಾನಸಭೆ ಚುನಾವಣೆಗೆ ತಂತ್ರ ರೂಪಿಸಲು ಕಾಂಗ್ರೆಸ್ನ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ಸೆಪ್ಟೆಂಬರ್ 24ರಂದು ಪಟ್ನಾದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. </p>.ಮಣಿಪುರಕ್ಕೆ PM ಮೋದಿ: ಪಿಟ್ ಸ್ಟಾಪ್ ಪ್ರವಾಸ, ನೊಂದವರಿಗೆ ಅವಮಾನ ಎಂದ ಕಾಂಗ್ರೆಸ್.<p>ಇದು ವಿಸ್ತರಿತ ಸಿಡಬ್ಲ್ಯುಸಿ ಸಭೆಯಾಗಿರಲಿದ್ದು, ಶಾಶ್ವತ ಹಾಗೂ ವಿಶೇಷ ಆಹ್ವಾನಿತ ಪ್ರತಿನಿಧಿಗಳು, ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಭಾಗಿಯಾಗಲಿದ್ದಾರೆ.</p><p>ಈ ಸಭೆಯಲ್ಲಿ ಬಿಹಾರ ಚುನಾವಣೆ, ಪಕ್ಷದ ಪ್ರಚಾರ ಕಾರ್ಯ ವೈಖರಿ, ಭವಿಷ್ಯದ ಚುನಾವಣೆಗಳು ಹಾಗೂ ಮತಗಳ್ಳತನ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.</p><p>ಸೆಪ್ಟೆಂಬರ್ 24 ರಂದು ಬೆಳಿಗ್ಗೆ 10ರಿಂದ ಸಭೆ ನಡೆಯಲಿದ್ದು, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ನ ಪ್ರಮುಖರು ಭಾಗಿಯಾಗಲಿದ್ದಾರೆ.</p>.ಚರ್ಚೆ | ಮತ ಪತ್ರ ಬಳಕೆ: ಚುನಾವಣಾ ವೈಫಲ್ಯ ಮುಚ್ಚಿಡುವ ಕಾಂಗ್ರೆಸ್ ಯತ್ನ.<p>ಮತಗಳ್ಳತನ ವಿರೋಧಿಸಿ ಮತದಾರರ ಅಧಿಕಾರ ಯಾತ್ರೆ ಬಳಿಕ ಆರ್ಜೆಡಿ ಜೊತೆಗೆ ಸೀಟು ಹಂಚಿಕೆ ಚರ್ಚೆ ಪ್ರಗತಿಯಲ್ಲಿ ಇರುವಾಗಲೇ ಈ ಸಭೆ ನಡೆಯಲಿದೆ.</p><p>ಚುನಾವಣೆಗೂ ಮುನ್ನ ಪ್ರದೇಶ ಚುನಾವಣೆ ಸಮಿತಿಯನ್ನು ಕಾಂಗ್ರೆಸ್ ಮಂಗಳವಾರ ರಚಿಸಿದೆ. ಇದರಲ್ಲಿ ಪ್ರಮುಖ ನಾಯಕರಾದ ರಾಕೇಶ್ ರಾಮ್, ಶಕೀಲ್ ಅಹಮದ್ ಖಾನ್, ಮದನ್ ಮೋಹನ್ ಝಾ ಇದ್ದಾರೆ.</p><p>39 ಸದಸ್ಯರ ಈ ಸಮಿತಿಯಲ್ಲಿ ಬಿಹಾರದ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಎಐಸಿಸಿ ಕಾರ್ಯದರ್ಶಿಗಳು ಹಾಗೂ ಸಿಡಬ್ಲ್ಯುಸಿ ಸದಸ್ಯರು ಇದ್ದಾರೆ.</p><p>ಈ ವರ್ಷ ನವೆಂಬರ್ನಲ್ಲಿ ಬಿಹಾರದಲ್ಲಿ ಚುನಾವಣೆ ನಡೆಯಲಿದೆ.</p> .ಶಿಷ್ಟಾಚಾರ ಉಲ್ಲಂಘಿಸಿದ ರಾಹುಲ್: CRPF ಪತ್ರ; ಬೆದರಿಕೆ ಯತ್ನ ಎಂದ ಕಾಂಗ್ರೆಸ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಮುಂದಿನ ಬಿಹಾರ ವಿಧಾನಸಭೆ ಚುನಾವಣೆಗೆ ತಂತ್ರ ರೂಪಿಸಲು ಕಾಂಗ್ರೆಸ್ನ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ಸೆಪ್ಟೆಂಬರ್ 24ರಂದು ಪಟ್ನಾದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. </p>.ಮಣಿಪುರಕ್ಕೆ PM ಮೋದಿ: ಪಿಟ್ ಸ್ಟಾಪ್ ಪ್ರವಾಸ, ನೊಂದವರಿಗೆ ಅವಮಾನ ಎಂದ ಕಾಂಗ್ರೆಸ್.<p>ಇದು ವಿಸ್ತರಿತ ಸಿಡಬ್ಲ್ಯುಸಿ ಸಭೆಯಾಗಿರಲಿದ್ದು, ಶಾಶ್ವತ ಹಾಗೂ ವಿಶೇಷ ಆಹ್ವಾನಿತ ಪ್ರತಿನಿಧಿಗಳು, ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಭಾಗಿಯಾಗಲಿದ್ದಾರೆ.</p><p>ಈ ಸಭೆಯಲ್ಲಿ ಬಿಹಾರ ಚುನಾವಣೆ, ಪಕ್ಷದ ಪ್ರಚಾರ ಕಾರ್ಯ ವೈಖರಿ, ಭವಿಷ್ಯದ ಚುನಾವಣೆಗಳು ಹಾಗೂ ಮತಗಳ್ಳತನ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.</p><p>ಸೆಪ್ಟೆಂಬರ್ 24 ರಂದು ಬೆಳಿಗ್ಗೆ 10ರಿಂದ ಸಭೆ ನಡೆಯಲಿದ್ದು, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ನ ಪ್ರಮುಖರು ಭಾಗಿಯಾಗಲಿದ್ದಾರೆ.</p>.ಚರ್ಚೆ | ಮತ ಪತ್ರ ಬಳಕೆ: ಚುನಾವಣಾ ವೈಫಲ್ಯ ಮುಚ್ಚಿಡುವ ಕಾಂಗ್ರೆಸ್ ಯತ್ನ.<p>ಮತಗಳ್ಳತನ ವಿರೋಧಿಸಿ ಮತದಾರರ ಅಧಿಕಾರ ಯಾತ್ರೆ ಬಳಿಕ ಆರ್ಜೆಡಿ ಜೊತೆಗೆ ಸೀಟು ಹಂಚಿಕೆ ಚರ್ಚೆ ಪ್ರಗತಿಯಲ್ಲಿ ಇರುವಾಗಲೇ ಈ ಸಭೆ ನಡೆಯಲಿದೆ.</p><p>ಚುನಾವಣೆಗೂ ಮುನ್ನ ಪ್ರದೇಶ ಚುನಾವಣೆ ಸಮಿತಿಯನ್ನು ಕಾಂಗ್ರೆಸ್ ಮಂಗಳವಾರ ರಚಿಸಿದೆ. ಇದರಲ್ಲಿ ಪ್ರಮುಖ ನಾಯಕರಾದ ರಾಕೇಶ್ ರಾಮ್, ಶಕೀಲ್ ಅಹಮದ್ ಖಾನ್, ಮದನ್ ಮೋಹನ್ ಝಾ ಇದ್ದಾರೆ.</p><p>39 ಸದಸ್ಯರ ಈ ಸಮಿತಿಯಲ್ಲಿ ಬಿಹಾರದ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಎಐಸಿಸಿ ಕಾರ್ಯದರ್ಶಿಗಳು ಹಾಗೂ ಸಿಡಬ್ಲ್ಯುಸಿ ಸದಸ್ಯರು ಇದ್ದಾರೆ.</p><p>ಈ ವರ್ಷ ನವೆಂಬರ್ನಲ್ಲಿ ಬಿಹಾರದಲ್ಲಿ ಚುನಾವಣೆ ನಡೆಯಲಿದೆ.</p> .ಶಿಷ್ಟಾಚಾರ ಉಲ್ಲಂಘಿಸಿದ ರಾಹುಲ್: CRPF ಪತ್ರ; ಬೆದರಿಕೆ ಯತ್ನ ಎಂದ ಕಾಂಗ್ರೆಸ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>