ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಯುದ್ಧವನ್ನು ಭಾರತದ ಜನರು ಒಟ್ಟಾಗಿ ಗೆಲ್ಲುತ್ತಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.
ಈ ಯುದ್ಧವು ಧರ್ಮ, ಜಾತಿ ಮತ್ತು ವರ್ಗಗಳ ನಡುವಿನ ಭಿನ್ನತೆಗಳನ್ನು ದೂರ ಮಾಡಿ ಜನರನ್ನು ಒಂದುಗೂಡಿಸಲು ಅವಕಾಶ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಮಾರಣಾಂತಿಕ ವೈರಸ್ ಅನ್ನು ಸೋಲಿಸುವುದು ಜನರ ಸಾಮೂಹಿಕ ಉದ್ದೇಶವಾಗಿದೆ. ಸಹಾನುಭೂತಿ, ಪರಾನುಭೂತಿ ಮತ್ತು ಸ್ವಯಂ ಸೇವೆ ಈ ಉದ್ದೇಶದಕೇಂದ್ರ ಕಲ್ಪನೆಯಾಗಿದೆ ಎಂದು ರಾಹುಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
The #Coronavirus is an opportunity for India to unite as one people, putting aside differences of religion, caste & class; to forge one common purpose: the defeat of this deadly virus. Compassion, empathy& self sacrifice are central to this idea. Together we will win this battle. pic.twitter.com/rVmJg6tan2
ಈ ಏಕತೆಯ ಸಂದೇಶವನ್ನು ನೀಡುವುದರ ಮೂಲಕ ರಾಹುಲ್ ಗಾಂಧಿಯವರು ಅನ್ಯ ಧರ್ಮಗಳಿಗೆ ಸೇರಿದ ಇಬ್ಬರುಮಕ್ಕಳು ಪರಸ್ಪರ ಒಂದಾಗಿ ನಡೆದುಕೊಂಡು ಹೋಗುತ್ತಿರುವ ಚಿತ್ರವನ್ನೂ ಪೋಸ್ಟ್ ಮಾಡಿದ್ದಾರೆ.