<p><strong>ನವದೆಹಲಿ:</strong> ಪತಂಜಲಿ ಸಂಸ್ಥೆಯು ತನ್ನ ಚ್ಯವನಪ್ರಾಶ್ ಉತ್ಪನ್ನಕ್ಕೆ ಸಂಬಂಧಿಸಿದ ಜಾಹಿರಾತಿನಲ್ಲಿ ‘ಡಾಬರ್ ಚ್ಯವನಪ್ರಾಶ್’ ಕುರಿತ ಅವಹೇಳನಕಾರಿ ಅಂಶವನ್ನು ತೆಗದುಹಾಕುವಂತೆ ದೆಹಲಿ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ. </p>.<p>ಪತಂಜಲಿ ಚ್ಯವನಪ್ರಾಶ್ ಉತ್ಪನ್ನದ ಜಾಹಿರಾತಿನಲ್ಲಿ, ‘40 ಗಿಡಮೂಲಿಕೆಗಳಿಂದ ಉತ್ಪಾದಿಸಿರುವ ಸಾಮಾನ್ಯ ಚ್ಯವನ್ಪ್ರಾಶ್ ಅನ್ನು ಏಕೆ ಬಳಸುವಿರಿ’ ಎಂಬ ವಾಕ್ಯವನ್ನು ಬಳಸಲಾಗಿತ್ತು.</p>.<p>ಡಾಬರ್ ಸಂಸ್ಥೆಯ ಉತ್ಪನ್ನದ ಕುರಿತು ಉಲ್ಲೇಖಿಸಿರುವ ‘40 ಗಿಡಮೂಲಿಕೆಗಳಿಂದ ಉತ್ಪಾದಿಸಿರುವ’ ಎಂಬ ಪದಗಳನ್ನು ತೆಗೆದುಹಾಕುವಂತೆ ನ್ಯಾಯಮೂರ್ತಿಗಳಾದ ಹರಿ ಶಂಕರ್ ಹಾಗೂ ಓಂ ಪ್ರಕಾಶ್ ಶುಕ್ಲಾ ಅವರ ಪೀಠವು ಪತಂಜಲಿಗೆ ನಿರ್ದೇಶಿಸಿದೆ.</p>.<p class="title">ಜತೆಗೆ ‘ಸಾಮಾನ್ಯ ಡಾಬರ್ ಚ್ಯವನ್ಪ್ರಾಶ್ ಅನ್ನು ಏಕೆ ಬಳಸುವಿರಿ’ ಎಂಬ ಸಾಲನ್ನು ಬೇಕಿದ್ದರೆ ಬಳಸಿಕೊಳ್ಳಬಹುದು ಎಂದಿದೆ. </p>.<p class="title">ಡಾಬರ್ ಸಂಸ್ಥೆಯು ಸಂಪೂರ್ಣ ಜಾಹಿರಾತಿಗೆ ತಡೆ ಕೋರಿದ್ದ ಅರ್ಜಿಯನ್ನು ಈ ಹಿಂದೆ ಹೈಕೋರ್ಟ್ನ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಪತಂಜಲಿ ಸಂಸ್ಥೆಯು ಮೇಲ್ಮನವಿ ಸಲ್ಲಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಪತಂಜಲಿ ಸಂಸ್ಥೆಯು ತನ್ನ ಚ್ಯವನಪ್ರಾಶ್ ಉತ್ಪನ್ನಕ್ಕೆ ಸಂಬಂಧಿಸಿದ ಜಾಹಿರಾತಿನಲ್ಲಿ ‘ಡಾಬರ್ ಚ್ಯವನಪ್ರಾಶ್’ ಕುರಿತ ಅವಹೇಳನಕಾರಿ ಅಂಶವನ್ನು ತೆಗದುಹಾಕುವಂತೆ ದೆಹಲಿ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ. </p>.<p>ಪತಂಜಲಿ ಚ್ಯವನಪ್ರಾಶ್ ಉತ್ಪನ್ನದ ಜಾಹಿರಾತಿನಲ್ಲಿ, ‘40 ಗಿಡಮೂಲಿಕೆಗಳಿಂದ ಉತ್ಪಾದಿಸಿರುವ ಸಾಮಾನ್ಯ ಚ್ಯವನ್ಪ್ರಾಶ್ ಅನ್ನು ಏಕೆ ಬಳಸುವಿರಿ’ ಎಂಬ ವಾಕ್ಯವನ್ನು ಬಳಸಲಾಗಿತ್ತು.</p>.<p>ಡಾಬರ್ ಸಂಸ್ಥೆಯ ಉತ್ಪನ್ನದ ಕುರಿತು ಉಲ್ಲೇಖಿಸಿರುವ ‘40 ಗಿಡಮೂಲಿಕೆಗಳಿಂದ ಉತ್ಪಾದಿಸಿರುವ’ ಎಂಬ ಪದಗಳನ್ನು ತೆಗೆದುಹಾಕುವಂತೆ ನ್ಯಾಯಮೂರ್ತಿಗಳಾದ ಹರಿ ಶಂಕರ್ ಹಾಗೂ ಓಂ ಪ್ರಕಾಶ್ ಶುಕ್ಲಾ ಅವರ ಪೀಠವು ಪತಂಜಲಿಗೆ ನಿರ್ದೇಶಿಸಿದೆ.</p>.<p class="title">ಜತೆಗೆ ‘ಸಾಮಾನ್ಯ ಡಾಬರ್ ಚ್ಯವನ್ಪ್ರಾಶ್ ಅನ್ನು ಏಕೆ ಬಳಸುವಿರಿ’ ಎಂಬ ಸಾಲನ್ನು ಬೇಕಿದ್ದರೆ ಬಳಸಿಕೊಳ್ಳಬಹುದು ಎಂದಿದೆ. </p>.<p class="title">ಡಾಬರ್ ಸಂಸ್ಥೆಯು ಸಂಪೂರ್ಣ ಜಾಹಿರಾತಿಗೆ ತಡೆ ಕೋರಿದ್ದ ಅರ್ಜಿಯನ್ನು ಈ ಹಿಂದೆ ಹೈಕೋರ್ಟ್ನ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಪತಂಜಲಿ ಸಂಸ್ಥೆಯು ಮೇಲ್ಮನವಿ ಸಲ್ಲಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>