<p><strong>ನವದೆಹಲಿ</strong>: ಎಎಪಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ದೆಹಲಿಯ ಶಾಲೆಗಳು ಇತ್ತೀಚೆಗೆ ಎದುರಿಸಿದ ಹುಸಿ ಬಾಂಬ್ ಬೆದರಿಕೆಗಳ ಕುರಿತು ಸೋಮವಾರ ಪ್ರಶ್ನೆಗಳನ್ನು ಎತ್ತಿದೆ. </p><p>‘ಕಾಂಗ್ರೆಸ್ ಮತ್ತು ಎಎಪಿ ಹೊರನೋಟಕ್ಕೆ ಭಿನ್ನವಾಗಿ ಕಂಡುಬಂದರೂ ಒಳಗೆ ಒಂದೇ’ ಎಂದು ಬಿಜೆಪಿ ನಾಯಕ ಅನುರಾಗ್ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p><p>‘ಕಾಂಗ್ರೆಸ್ನ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ ಎಎಪಿ ಅಧಿಕಾರಕ್ಕೆ ಬಂದಿತು. ಆದರೆ ಈಗ ಎಎಪಿಯಲ್ಲಿ ಅರಾಜಕತೆ, ಪ್ರತ್ಯೇಕತೆ, ಭಯೋತ್ಪಾದನೆ, ವದಂತಿ ಹರಡುವಿಕೆ ಹಾಗೂ ಅಪರಾಧಿಗಳು ತುಂಬಿದ್ದಾರೆ’ ಎಂದು ಅವರು ಆರೋಪಿಸಿದರು.</p><p>‘ಕೆಲವರು ಬಾಂಬ್ ಸ್ಫೋಟದ ವದಂತಿಗಳನ್ನು ಹರಡಿ, ದೆಹಲಿಯ ಶಾಲಾ ಮಕ್ಕಳ ಪೋಷಕರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ವದಂತಿ ಹರಡುವರ ಜತೆ ಯಾರು ಸಂಪರ್ಕದಲ್ಲಿದ್ದಾರೆ ಎನ್ನುವುದಕ್ಕೆ ಆತಿಶಿ ಮತ್ತು ಕೇಜ್ರಿವಾಲ್ ಉತ್ತರ ನೀಡುತ್ತಾರಾ? ಅರಾಜಕತೆ ಸೃಷ್ಟಿಸುವುದರಲ್ಲಿ ಈ ಇಬ್ಬರು ಹಳೆ ಆಟಗಾರರು’ ಎಂದು ಠಾಕೂರ್ ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಎಎಪಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ದೆಹಲಿಯ ಶಾಲೆಗಳು ಇತ್ತೀಚೆಗೆ ಎದುರಿಸಿದ ಹುಸಿ ಬಾಂಬ್ ಬೆದರಿಕೆಗಳ ಕುರಿತು ಸೋಮವಾರ ಪ್ರಶ್ನೆಗಳನ್ನು ಎತ್ತಿದೆ. </p><p>‘ಕಾಂಗ್ರೆಸ್ ಮತ್ತು ಎಎಪಿ ಹೊರನೋಟಕ್ಕೆ ಭಿನ್ನವಾಗಿ ಕಂಡುಬಂದರೂ ಒಳಗೆ ಒಂದೇ’ ಎಂದು ಬಿಜೆಪಿ ನಾಯಕ ಅನುರಾಗ್ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p><p>‘ಕಾಂಗ್ರೆಸ್ನ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ ಎಎಪಿ ಅಧಿಕಾರಕ್ಕೆ ಬಂದಿತು. ಆದರೆ ಈಗ ಎಎಪಿಯಲ್ಲಿ ಅರಾಜಕತೆ, ಪ್ರತ್ಯೇಕತೆ, ಭಯೋತ್ಪಾದನೆ, ವದಂತಿ ಹರಡುವಿಕೆ ಹಾಗೂ ಅಪರಾಧಿಗಳು ತುಂಬಿದ್ದಾರೆ’ ಎಂದು ಅವರು ಆರೋಪಿಸಿದರು.</p><p>‘ಕೆಲವರು ಬಾಂಬ್ ಸ್ಫೋಟದ ವದಂತಿಗಳನ್ನು ಹರಡಿ, ದೆಹಲಿಯ ಶಾಲಾ ಮಕ್ಕಳ ಪೋಷಕರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ವದಂತಿ ಹರಡುವರ ಜತೆ ಯಾರು ಸಂಪರ್ಕದಲ್ಲಿದ್ದಾರೆ ಎನ್ನುವುದಕ್ಕೆ ಆತಿಶಿ ಮತ್ತು ಕೇಜ್ರಿವಾಲ್ ಉತ್ತರ ನೀಡುತ್ತಾರಾ? ಅರಾಜಕತೆ ಸೃಷ್ಟಿಸುವುದರಲ್ಲಿ ಈ ಇಬ್ಬರು ಹಳೆ ಆಟಗಾರರು’ ಎಂದು ಠಾಕೂರ್ ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>