‘ಕೇಜ್ರಿವಾಲ್ ತಮ್ಮ ವಿರುದ್ಧ ಹಾದಿ ತಪ್ಪಿಸುವ ಮತ್ತು ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದಾರೆ’ ಎಂದು ಲೆಫ್ಟಿನೆಂಟ್ ಗವರ್ನರ್ ಆರೋಪಿಸಿದ್ದರೆ, ದೇಶದ ರಾಜಧಾನಿಯಲ್ಲಿ ‘ಕಾಂಝಾವಾಲಾ’ದಂತಹ ಮತ್ತೊಂದು ಘಟನೆ ನಡೆಯದಿರಲು ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸುವತ್ತ ರಾಜ್ಯಪಾಲರು ಗಮನ ಕೊಡಲಿ ಎಂದು ಕೇಜ್ರಿವಾಲ್ ಮಾತಿನಲ್ಲೇ ಕುಟುಕಿದ್ದಾರೆ.