<p><strong>ನವದೆಹಲಿ</strong>: ಹಸಿವಿನಿಂದ ಜನರು ಸಾವನ್ನಪ್ಪುವ ಪ್ರಕರಣಗಳನ್ನು ತಪ್ಪಿಸುವುದಕ್ಕಾಗಿ ಗರಿಷ್ಠ ಸಹಾಯಧನದಲ್ಲಿ ನೀಡುವ ಆಹಾರಧಾನ್ಯಗಳನ್ನು ಫಲಾನುಭವಿಯ ಮನೆಗೇ ತಲುಪಿಸುವಂತೆ ಕೇಂದ್ರ ಸರ್ಕಾರವು ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.</p>.<p>ಸಾರ್ವಜನಿಕ ವಿತರಣೆ ವ್ಯವಸ್ಥೆಯನ್ನು (ಪಿಡಿಎಸ್– ನ್ಯಾಯಬೆಲೆ ಅಂಗಡಿಗಳ ಮೂಲಕ ಆಹಾರ ಧಾನ್ಯ ವಿತರಣೆ) ಬಲಪಡಿಸಲು ತುರ್ತಾಗಿ ಕೈಗೊಳ್ಳಬೇಕಾದ ಹಲವು ಕ್ರಮಗಳನ್ನು ದೆಹಲಿಯಲ್ಲಿ ನಡೆದ ರಾಜ್ಯಗಳ ಆಹಾರ ಸಚಿವರ ಸಭೆಯಲ್ಲಿ ಚರ್ಚಿಸಲಾಗಿದೆ.</p>.<p>‘ಯಾರೂ ಹಸಿವಿನಿಂದ ಸಾಯಬಾರದು ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಮಾರ್ಗದರ್ಶಿ ಸೂತ್ರವನ್ನು ರಾಜ್ಯಗಳಿಗೆ ನೀಡಲಾಗಿದೆ. ಅದರಲ್ಲಿ ಮನೆ ಬಾಗಿಲಿಗೆ ಆಹಾರ ಪೂರೈಕೆಯೂ ಸೇರಿದೆ’ ಎಂದು ಕೇಂದ್ರ ಆಹಾರ ಸಚಿವ ರಾಮ್ವಿಲಾಸ್ ಪಾಸ್ವಾನ್ ಸಭೆಯ ಬಳಿಕ ತಿಳಿಸಿದ್ದಾರೆ.</p>.<p>ಮೂರು ತಿಂಗಳಿಂದ ಪಡಿತರ ಆಹಾರ ಧಾನ್ಯವನ್ನು ಪಡೆದುಕೊಳ್ಳದ ಫಲಾನುಭವಿಗಳ ಮೇಲೆ ನಿಗಾ ಇರಿಸಬೇಕು. ಈ ಫಲಾನುಭವಿಗಳು ಪಡಿತರ ಧಾನ್ಯ ಅಗತ್ಯ ಇಲ್ಲದಷ್ಟು ಶ್ರೀಮಂತರಾಗಿರಬಹುದು. ಅಂಥವರ ಪಡಿತರ ಚೀಟಿಯನ್ನು ರದ್ದುಪಡಿಸಬೇಕು ಎಂದು ಅವರು ಹೇಳಿದ್ದಾರೆ.</p>.<p>ಮೂರು ತಿಂಗಳಿಂದ ಫಲಾನುಭವಿ ನ್ಯಾಯಬೆಲೆ ಅಂಗಡಿಗೆ ಬಂದಿಲ್ಲ ಎಂದಾದರೆ ಅವರಿಗೆ ಅಂಗಡಿಗೆ ಬರಲು ಸಾಧ್ಯವಿಲ್ಲದಷ್ಟು ಅನಾರೋಗ್ಯ ಅಥವಾ ನಿಶ್ಶಕ್ತಿಯೂ ಇರಬಹುದು. ಅಂಥವರಿಗೆ ಧಾನ್ಯವನ್ನು ಮನೆಗೇ ತಲುಪಿಸುವುದು ಅಗತ್ಯ ಎಂದೂ ಪಾಸ್ವಾನ್ ಸೂಚಿಸಿದ್ದಾರೆ.</p>.<p>2013ರ ಜುಲೈನಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಯಾದ ಬಳಿಕ ಪಡಿತರ ಆಹಾರ ಧಾನ್ಯಗಳ ದರವನ್ನು ಏರಿಕೆ ಮಾಡಿಯೇ ಇಲ್ಲ. ಪಿಡಿಎಸ್ ವಿತರಣೆ ವ್ಯವಸ್ಥೆ ಸುಧಾರಣೆ ನಿಧಾನಗತಿಯಲ್ಲಿರುವ ರಾಜ್ಯಗಳು ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದೂ ಅವರು ಹೇಳಿದ್ದಾರೆ.</p>.<p>ಸಭೆಯಲ್ಲಿ 15 ರಾಜ್ಯಗಳ ಆಹಾರ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.</p>.<p><strong>ಬಾಕಿ ಅನುದಾನ ಬಿಡುಗಡೆ ಕೇಂದ್ರಕ್ಕೆ ಮನವಿ</strong></p>.<p>ನವದೆಹಲಿ: ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ 2013ರಿಂದ ಮೂರು ವರ್ಷಗಳ ಕಾಲ ವಿವಿಧ ರೀತಿಯ ಕೃಷಿ ಉತ್ಪನ್ನಗಳನ್ನು ಖರೀದಿಸಲಾಗಿದ್ದು, ಈ ಸಂಬಂಧ ಬಾಕಿ ಇರಿಸಿಕೊಂಡಿರುವ ₹ 1000 ಕೋಟಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರವನ್ನು ಕೋರಿದೆ.</p>.<p>ಕೇಂದ್ರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮ್ವಿಲಾಸ್ ಪಾಸ್ವಾನ್ ನೇತೃತ್ವದಲ್ಲಿ ಶುಕ್ರವಾರ ಇಲ್ಲಿ ನಡೆದ ಎಲ್ಲ ರಾಜ್ಯಗಳ ಆಹಾರ ಸಚಿವರ ಸಭೆಯಲ್ಲಿ ಈ ಬೇಡಿಕೆಯೂ ಒಳಗೊಂಡ ಮನವಿಯನ್ನು ಸಲ್ಲಿಸಲಾಗಿದೆ.</p>.<p>ರಾಜ್ಯದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ರೈತರಿಂದ ಗೋವಿನಜೋಳ, ರಾಗಿ ಮತ್ತು ಭತ್ತವನ್ನು ಖರೀದಿಸಿದೆ. ಕೇಂದ್ರ ಸರ್ಕಾರದಿಂದ ₹ 1000 ಕೋಟಿ ಅನುದಾನ ಬಿಡುಗಡೆ ಬಾಕಿ ಇದೆ ಎಂದು ಸಚಿವ ಜಮೀರ್ ಅಹಮದ್ ಸಭೆಗೆ ತಿಳಿಸಿದರು.</p>.<p>ರಾಜ್ಯದಲ್ಲಿ ನ್ಯಾಯಬೆಲೆ ಅಂಗಡಿ ನಡೆಸುವವರಿಗೆ ಪ್ರಸ್ತುತ ಪ್ರತಿ ಕ್ವಿಂಟಲ್ಗೆ ₹ 87 ಕಮಿಷನ್ ನೀಡಲಾಗುತ್ತಿದೆ. ಈ ಮೊತ್ತವನ್ನು ₹ 150ಕ್ಕೆ ಹೆಚ್ಚಿಸಬೇಕು. ಗೋದಾಮುಗಳಿಂದ ಅಂಗಡಿಗಳಿಗೆ ಸಾಗಣೆ ಮಾಡುವ ಸರಕಿಗೆ ಪ್ರತಿ ಕ್ವಿಂಟಲ್ಗೆ ₹ 90 ನೀಡಲಾಗುತ್ತಿದ್ದು, ಅದನ್ನು ₹ 110ಕ್ಕೆ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.</p>.<p>ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನ್ವಯ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸಾಮಾಜಿಕ ಆಡಿಟ್ ಕಾರ್ಯ ಕೈಗೆತ್ತಿಕೊಳ್ಳಲು ಅನುಕೂಲವಾಗುವಂತೆ ರಾಜ್ಯಗಳಿಗೆ ವಾರ್ಷಿಕ ₹ 8ರಿಂದ 10 ಕೋಟಿ ಅನುದಾನ ಮಂಜೂರು ಮಾಡುವಂತೆಯೂ ಅವರು ಒತ್ತಾಯಿಸಿದರು.</p>.<p>ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಬೆಂಬಲಬೆಲೆ ಯೋಜನೆ ಅಡಿ 6.50 ಲಕ್ಷ ಟನ್ ತೊಗರಿ ಖರೀದಿಸಲಾಗಿದ್ದು, ಹೆಚ್ಚಿನ ಪ್ರಮಾಣದ ದಾಸ್ತಾನು ಇದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ ಅಡಿ ತೊಗರಿ ಬೇಳೆ ವಿತರಣೆಗೆ ಕೇಂದ್ರ ಅನುಮತಿ ನೀಡಬೇಕು.<br /><br />ಈಗಾಗಲೇ ರಾಜ್ಯ ಸರ್ಕಾರ ಈವ್ಯವಸ್ಥೆ ಅಡಿ ಸಾರ್ವಜನಿಕರಿಗೆ ತೊಗರಿ ಬೇಳೆ ವಿತರಿಸುತ್ತಿದ್ದು, ವಾರ್ಷಿಕ ₹ 400 ಕೋಟಿ ಖರ್ಚಾಗುತ್ತಿದೆ. ಕೇಂದ್ರವೇ ಈ ವೆಚ್ಚವನ್ನು ಭರಿಸಬೇಕು ಎಂದು ಸಚಿವರು ಕೋರಿದರು. ಇಲಾಖೆಯ ಕಾರ್ಯದರ್ಶಿ ಪಂಕಜ್ ಪಾಂಡೆ ಈ ಸಂದರ್ಭ ಹಾಜರಿದ್ದರು.ಈ ಬೇಡಿಕೆ ಈಡೇರಿಸುವುದಾಗಿ ಸಚಿವ ಪಾಸ್ವಾನ್ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಹಸಿವಿನಿಂದ ಜನರು ಸಾವನ್ನಪ್ಪುವ ಪ್ರಕರಣಗಳನ್ನು ತಪ್ಪಿಸುವುದಕ್ಕಾಗಿ ಗರಿಷ್ಠ ಸಹಾಯಧನದಲ್ಲಿ ನೀಡುವ ಆಹಾರಧಾನ್ಯಗಳನ್ನು ಫಲಾನುಭವಿಯ ಮನೆಗೇ ತಲುಪಿಸುವಂತೆ ಕೇಂದ್ರ ಸರ್ಕಾರವು ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.</p>.<p>ಸಾರ್ವಜನಿಕ ವಿತರಣೆ ವ್ಯವಸ್ಥೆಯನ್ನು (ಪಿಡಿಎಸ್– ನ್ಯಾಯಬೆಲೆ ಅಂಗಡಿಗಳ ಮೂಲಕ ಆಹಾರ ಧಾನ್ಯ ವಿತರಣೆ) ಬಲಪಡಿಸಲು ತುರ್ತಾಗಿ ಕೈಗೊಳ್ಳಬೇಕಾದ ಹಲವು ಕ್ರಮಗಳನ್ನು ದೆಹಲಿಯಲ್ಲಿ ನಡೆದ ರಾಜ್ಯಗಳ ಆಹಾರ ಸಚಿವರ ಸಭೆಯಲ್ಲಿ ಚರ್ಚಿಸಲಾಗಿದೆ.</p>.<p>‘ಯಾರೂ ಹಸಿವಿನಿಂದ ಸಾಯಬಾರದು ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಮಾರ್ಗದರ್ಶಿ ಸೂತ್ರವನ್ನು ರಾಜ್ಯಗಳಿಗೆ ನೀಡಲಾಗಿದೆ. ಅದರಲ್ಲಿ ಮನೆ ಬಾಗಿಲಿಗೆ ಆಹಾರ ಪೂರೈಕೆಯೂ ಸೇರಿದೆ’ ಎಂದು ಕೇಂದ್ರ ಆಹಾರ ಸಚಿವ ರಾಮ್ವಿಲಾಸ್ ಪಾಸ್ವಾನ್ ಸಭೆಯ ಬಳಿಕ ತಿಳಿಸಿದ್ದಾರೆ.</p>.<p>ಮೂರು ತಿಂಗಳಿಂದ ಪಡಿತರ ಆಹಾರ ಧಾನ್ಯವನ್ನು ಪಡೆದುಕೊಳ್ಳದ ಫಲಾನುಭವಿಗಳ ಮೇಲೆ ನಿಗಾ ಇರಿಸಬೇಕು. ಈ ಫಲಾನುಭವಿಗಳು ಪಡಿತರ ಧಾನ್ಯ ಅಗತ್ಯ ಇಲ್ಲದಷ್ಟು ಶ್ರೀಮಂತರಾಗಿರಬಹುದು. ಅಂಥವರ ಪಡಿತರ ಚೀಟಿಯನ್ನು ರದ್ದುಪಡಿಸಬೇಕು ಎಂದು ಅವರು ಹೇಳಿದ್ದಾರೆ.</p>.<p>ಮೂರು ತಿಂಗಳಿಂದ ಫಲಾನುಭವಿ ನ್ಯಾಯಬೆಲೆ ಅಂಗಡಿಗೆ ಬಂದಿಲ್ಲ ಎಂದಾದರೆ ಅವರಿಗೆ ಅಂಗಡಿಗೆ ಬರಲು ಸಾಧ್ಯವಿಲ್ಲದಷ್ಟು ಅನಾರೋಗ್ಯ ಅಥವಾ ನಿಶ್ಶಕ್ತಿಯೂ ಇರಬಹುದು. ಅಂಥವರಿಗೆ ಧಾನ್ಯವನ್ನು ಮನೆಗೇ ತಲುಪಿಸುವುದು ಅಗತ್ಯ ಎಂದೂ ಪಾಸ್ವಾನ್ ಸೂಚಿಸಿದ್ದಾರೆ.</p>.<p>2013ರ ಜುಲೈನಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಯಾದ ಬಳಿಕ ಪಡಿತರ ಆಹಾರ ಧಾನ್ಯಗಳ ದರವನ್ನು ಏರಿಕೆ ಮಾಡಿಯೇ ಇಲ್ಲ. ಪಿಡಿಎಸ್ ವಿತರಣೆ ವ್ಯವಸ್ಥೆ ಸುಧಾರಣೆ ನಿಧಾನಗತಿಯಲ್ಲಿರುವ ರಾಜ್ಯಗಳು ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದೂ ಅವರು ಹೇಳಿದ್ದಾರೆ.</p>.<p>ಸಭೆಯಲ್ಲಿ 15 ರಾಜ್ಯಗಳ ಆಹಾರ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.</p>.<p><strong>ಬಾಕಿ ಅನುದಾನ ಬಿಡುಗಡೆ ಕೇಂದ್ರಕ್ಕೆ ಮನವಿ</strong></p>.<p>ನವದೆಹಲಿ: ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ 2013ರಿಂದ ಮೂರು ವರ್ಷಗಳ ಕಾಲ ವಿವಿಧ ರೀತಿಯ ಕೃಷಿ ಉತ್ಪನ್ನಗಳನ್ನು ಖರೀದಿಸಲಾಗಿದ್ದು, ಈ ಸಂಬಂಧ ಬಾಕಿ ಇರಿಸಿಕೊಂಡಿರುವ ₹ 1000 ಕೋಟಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರವನ್ನು ಕೋರಿದೆ.</p>.<p>ಕೇಂದ್ರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮ್ವಿಲಾಸ್ ಪಾಸ್ವಾನ್ ನೇತೃತ್ವದಲ್ಲಿ ಶುಕ್ರವಾರ ಇಲ್ಲಿ ನಡೆದ ಎಲ್ಲ ರಾಜ್ಯಗಳ ಆಹಾರ ಸಚಿವರ ಸಭೆಯಲ್ಲಿ ಈ ಬೇಡಿಕೆಯೂ ಒಳಗೊಂಡ ಮನವಿಯನ್ನು ಸಲ್ಲಿಸಲಾಗಿದೆ.</p>.<p>ರಾಜ್ಯದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ರೈತರಿಂದ ಗೋವಿನಜೋಳ, ರಾಗಿ ಮತ್ತು ಭತ್ತವನ್ನು ಖರೀದಿಸಿದೆ. ಕೇಂದ್ರ ಸರ್ಕಾರದಿಂದ ₹ 1000 ಕೋಟಿ ಅನುದಾನ ಬಿಡುಗಡೆ ಬಾಕಿ ಇದೆ ಎಂದು ಸಚಿವ ಜಮೀರ್ ಅಹಮದ್ ಸಭೆಗೆ ತಿಳಿಸಿದರು.</p>.<p>ರಾಜ್ಯದಲ್ಲಿ ನ್ಯಾಯಬೆಲೆ ಅಂಗಡಿ ನಡೆಸುವವರಿಗೆ ಪ್ರಸ್ತುತ ಪ್ರತಿ ಕ್ವಿಂಟಲ್ಗೆ ₹ 87 ಕಮಿಷನ್ ನೀಡಲಾಗುತ್ತಿದೆ. ಈ ಮೊತ್ತವನ್ನು ₹ 150ಕ್ಕೆ ಹೆಚ್ಚಿಸಬೇಕು. ಗೋದಾಮುಗಳಿಂದ ಅಂಗಡಿಗಳಿಗೆ ಸಾಗಣೆ ಮಾಡುವ ಸರಕಿಗೆ ಪ್ರತಿ ಕ್ವಿಂಟಲ್ಗೆ ₹ 90 ನೀಡಲಾಗುತ್ತಿದ್ದು, ಅದನ್ನು ₹ 110ಕ್ಕೆ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.</p>.<p>ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನ್ವಯ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸಾಮಾಜಿಕ ಆಡಿಟ್ ಕಾರ್ಯ ಕೈಗೆತ್ತಿಕೊಳ್ಳಲು ಅನುಕೂಲವಾಗುವಂತೆ ರಾಜ್ಯಗಳಿಗೆ ವಾರ್ಷಿಕ ₹ 8ರಿಂದ 10 ಕೋಟಿ ಅನುದಾನ ಮಂಜೂರು ಮಾಡುವಂತೆಯೂ ಅವರು ಒತ್ತಾಯಿಸಿದರು.</p>.<p>ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಬೆಂಬಲಬೆಲೆ ಯೋಜನೆ ಅಡಿ 6.50 ಲಕ್ಷ ಟನ್ ತೊಗರಿ ಖರೀದಿಸಲಾಗಿದ್ದು, ಹೆಚ್ಚಿನ ಪ್ರಮಾಣದ ದಾಸ್ತಾನು ಇದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ ಅಡಿ ತೊಗರಿ ಬೇಳೆ ವಿತರಣೆಗೆ ಕೇಂದ್ರ ಅನುಮತಿ ನೀಡಬೇಕು.<br /><br />ಈಗಾಗಲೇ ರಾಜ್ಯ ಸರ್ಕಾರ ಈವ್ಯವಸ್ಥೆ ಅಡಿ ಸಾರ್ವಜನಿಕರಿಗೆ ತೊಗರಿ ಬೇಳೆ ವಿತರಿಸುತ್ತಿದ್ದು, ವಾರ್ಷಿಕ ₹ 400 ಕೋಟಿ ಖರ್ಚಾಗುತ್ತಿದೆ. ಕೇಂದ್ರವೇ ಈ ವೆಚ್ಚವನ್ನು ಭರಿಸಬೇಕು ಎಂದು ಸಚಿವರು ಕೋರಿದರು. ಇಲಾಖೆಯ ಕಾರ್ಯದರ್ಶಿ ಪಂಕಜ್ ಪಾಂಡೆ ಈ ಸಂದರ್ಭ ಹಾಜರಿದ್ದರು.ಈ ಬೇಡಿಕೆ ಈಡೇರಿಸುವುದಾಗಿ ಸಚಿವ ಪಾಸ್ವಾನ್ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>