ನವದೆಹಲಿ: ‘ಮಧ್ಯಪ್ರಾಚ್ಯ ಪ್ರದೇಶದ ವಾಯು ಪ್ರದೇಶದಲ್ಲಿ ಜಾಗತಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆ (ಜಿಎನ್ಎಸ್ಎಸ್) ನಿಷ್ಕ್ರಿಯೆಗೊಳ್ಳುತ್ತಿರುವ ಹಾಗೂ ವಂಚಿಸುತ್ತಿರುವ ಕುರಿತು ವರದಿಗಳಾಗುತ್ತಿದೆ. ಇದರಿಂದ ವಿಮಾನಗಳು ಕುರುಡಾಗಿ ಹಾರಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ’ ಎಂದಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಪ್ರಮುಖ ವಿಮಾನಯಾನ ಸಂಸ್ಥೆಗಳಿಗೆ ಎಚ್ಚರಿಕೆ ವಹಿಸುವಂತೆ ಸುತ್ತೋಲೆ ಹೊರಡಿಸಿದೆ.
ಎದುರಾಗಿರುವ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ವಿಮಾನ ನಿರ್ವಹಣೆ ಮಾಡುವವರಿಗೆ, ಪೈಲೆಟ್ಗಳಿಗೆ ಹಾಗೂ ವಾಯುಯಾನ ದಿಕ್ಸೂಚಿ ಸೇವಾ ಪೂರೈಕೆದಾರರಿಗೆ ಹಾಗೂ ವಾಯು ಸಂಚಾರ ನಿಯಂತ್ರಿಕರಿಗೆ ಸುತ್ತೋಲೆಯಲ್ಲಿ ಹೇಳಲಾಗಿದೆ. ಸುರಕ್ಷಿತ ವಾಯುಯಾನಕ್ಕೆ ಅನುಕೂಲವಾಗುವ ಸಾಧನಗಳ ತಯಾರಕರು ಮತ್ತು ಅವುಗಳ ನಿರ್ವಹಿಸುವವರೊಂದಿಗೆ ಸಮನ್ವಯ ಸಾಧಿಸುವಂತೆ ಹೇಳಲಾಗಿದೆ.