ಪಟ್ನಾದಲ್ಲಿ ಮಾತನಾಡಿರುವ ಅವರು, ‘ರಾಷ್ಟ್ರಪತಿ ಭವನದಲ್ಲಿ ಇರಬೇಕಾದ್ದು 'ಮೂರ್ತಿ' (ಪ್ರತಿಮೆ)ಯಲ್ಲ. ಯಶವಂತ್ ಸಿನ್ಹಾ ಅವರು ಮಾತನಾಡುವುದನ್ನು ನೀವು ಕೇಳಿರಬಹುದು. ಆದರೆ ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ಮಾತನಾಡಿಯೇ ಇಲ್ಲ. ಅವರ ಉಮೇದುವಾರಿಕೆ ಘೋಷಣೆಯಾದಾಗಿನಿಂದ ಈ ವರೆಗೆ ಒಂದೇ ಒಂದು ಬಾರಿಯೂ ಅವರು ಮಾಧ್ಯಮಗಳೊಂದಿಗೆ ಮಾತನಾಡಿಲ್ಲ’ ಎಂದು ತೇಜಸ್ವಿ ಹೇಳಿದ್ದಾರೆ.