ವಕೀಲರ ಸಂಘಗಳ ಸಹಾಯದಿಂದಾಗಿ, ಹೊಸ ಅರ್ಜಿಗಳನ್ನು ಸಲ್ಲಿಸಿದ ನಂತರದಲ್ಲಿ ಅವುಗಳನ್ನು ವಿಚಾರಣೆಗೆ ಪಟ್ಟಿ ಮಾಡಿಕೊಳ್ಳುವುದರವರೆಗಿನ ಅವಧಿಯನ್ನು ಗಣನೀಯವಾಗಿ ತಗ್ಗಿಸಲಾಗಿದೆ ಎಂದು ಸಿಜೆಐ ಹೇಳಿದರು. ಆದರೆ ಪ್ರಕರಣಗಳು ನ್ಯಾಯಾಲಯಗಳ ಮುಂದೆ ವಿಚಾರಣೆಗೆ ನಿಗದಿಯಾದ ನಂತರದಲ್ಲಿ, ವಕೀಲರು ದಿನಾಂಕ ಮುಂದೂಡುವಂತೆ ಕೋರುತ್ತಿರುವುದು ಹೊರಜಗತ್ತಿಗೆ ಬಹಳ ಕೆಟ್ಟ ಸಂದೇಶವನ್ನು ರವಾನಿಸುತ್ತಿದೆ ಎಂದು ಸಿಜೆಐ ಬೇಸರ ವ್ಯಕ್ತಪಡಿಸಿದರು.