<p><strong>ನವದೆಹಲಿ</strong>: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್ಎಸ್) ತೆರಳಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಗಗನಯಾನಿ ಶುಭಾಂಶು ಶುಕ್ಲಾ ಅವರು, ಅಂತರಿಕ್ಷದಿಂದ ಭೂಮಿ ಕಾಣಿಸುವ ಬಗೆ ಕುರಿತು ನೀಡಿದ ಹೇಳಿಕೆಯು ಈಗ ಎನ್ಸಿಇಆರ್ಟಿಯ ಹೊಸ ಪಠ್ಯಪುಸ್ತಕದಲ್ಲಿ ಸ್ಥಾನ ಪಡೆದಿದೆ.</p><p>ಐಎಸ್ಎಸ್ ತಲುಪಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಂಭಾಷಣೆ ನಡೆಸಿದ್ದರು. ಈ ವೇಳೆ ಅವರು, ಭೂಮಿ ಕುರಿತಂತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದರು.</p><p>‘ಭೂಮಿ ಒಂದು ಪರಿಪೂರ್ಣ ಗೋಳ. ಅಂತರಿಕ್ಷದಿಂದ ನೋಡಿದಾಗ ಭೂಮಿಯಲ್ಲಿರುವ ಗಡಿಗಳು ಗೋಚರಿಸುವುದಿಲ್ಲ. ಬಾಹ್ಯಾಕಾಶದಿಂದ ಭೂಮಿಯನ್ನು ನೋಡಿದ ತಕ್ಷಣ ನನ್ನ ಮನಸಿನಲ್ಲಿ ಮೂಡಿದ ಭಾವನೆ ಇದು’ ಎಂದು ಶುಭಾಂಶು ಶುಕ್ಲಾ ಹೇಳಿದ್ದರು.</p><p>‘ಯಾವ ಗಡಿಗಳೂ ಇಲ್ಲ, ರಾಜ್ಯಗಳು ಹಾಗೂ ದೇಶಗಳೂ ಇಲ್ಲ. ನಾವೆಲ್ಲ ಮಾನವಕುಲದ ಭಾಗವೇ ಆಗಿದ್ದೇವೆ. ಭೂಮಿಯು ನಮ್ಮ ಏಕೈಕ ಮನೆಯಾಗಿದ್ದು, ನಾವೆಲ್ಲ ಇಲ್ಲಿ ಜೀವಿಸುತ್ತಿದ್ಧೇವೆ’ ಎಂದೂ ಶುಕ್ಲಾ ಹೇಳಿದ್ದರು.</p><p>ಎನ್ಸಿಇಆರ್ಟಿ ಪ್ರಕಟಿಸಿರುವ 5ನೇ ತರಗತಿಯ ಪರಿಸರ ಅಧ್ಯಯನ (ಅವರ ವಂಡ್ರಸ್ ವರ್ಲ್ಡ್) ಪಠ್ಯಪುಸ್ತಕದಲ್ಲಿನ ‘ಅರ್ಥ್, ಅವರ್ ಶೇರ್ಡ್ ಹೋಮ್’ ಎಂಬ ಅಧ್ಯಾಯದಲ್ಲಿ ಶುಕ್ಲಾ ಅವರ ಈ ಅಭಿಪ್ರಾಯವನ್ನು ಅಳವಡಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್ಎಸ್) ತೆರಳಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಗಗನಯಾನಿ ಶುಭಾಂಶು ಶುಕ್ಲಾ ಅವರು, ಅಂತರಿಕ್ಷದಿಂದ ಭೂಮಿ ಕಾಣಿಸುವ ಬಗೆ ಕುರಿತು ನೀಡಿದ ಹೇಳಿಕೆಯು ಈಗ ಎನ್ಸಿಇಆರ್ಟಿಯ ಹೊಸ ಪಠ್ಯಪುಸ್ತಕದಲ್ಲಿ ಸ್ಥಾನ ಪಡೆದಿದೆ.</p><p>ಐಎಸ್ಎಸ್ ತಲುಪಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಂಭಾಷಣೆ ನಡೆಸಿದ್ದರು. ಈ ವೇಳೆ ಅವರು, ಭೂಮಿ ಕುರಿತಂತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದರು.</p><p>‘ಭೂಮಿ ಒಂದು ಪರಿಪೂರ್ಣ ಗೋಳ. ಅಂತರಿಕ್ಷದಿಂದ ನೋಡಿದಾಗ ಭೂಮಿಯಲ್ಲಿರುವ ಗಡಿಗಳು ಗೋಚರಿಸುವುದಿಲ್ಲ. ಬಾಹ್ಯಾಕಾಶದಿಂದ ಭೂಮಿಯನ್ನು ನೋಡಿದ ತಕ್ಷಣ ನನ್ನ ಮನಸಿನಲ್ಲಿ ಮೂಡಿದ ಭಾವನೆ ಇದು’ ಎಂದು ಶುಭಾಂಶು ಶುಕ್ಲಾ ಹೇಳಿದ್ದರು.</p><p>‘ಯಾವ ಗಡಿಗಳೂ ಇಲ್ಲ, ರಾಜ್ಯಗಳು ಹಾಗೂ ದೇಶಗಳೂ ಇಲ್ಲ. ನಾವೆಲ್ಲ ಮಾನವಕುಲದ ಭಾಗವೇ ಆಗಿದ್ದೇವೆ. ಭೂಮಿಯು ನಮ್ಮ ಏಕೈಕ ಮನೆಯಾಗಿದ್ದು, ನಾವೆಲ್ಲ ಇಲ್ಲಿ ಜೀವಿಸುತ್ತಿದ್ಧೇವೆ’ ಎಂದೂ ಶುಕ್ಲಾ ಹೇಳಿದ್ದರು.</p><p>ಎನ್ಸಿಇಆರ್ಟಿ ಪ್ರಕಟಿಸಿರುವ 5ನೇ ತರಗತಿಯ ಪರಿಸರ ಅಧ್ಯಯನ (ಅವರ ವಂಡ್ರಸ್ ವರ್ಲ್ಡ್) ಪಠ್ಯಪುಸ್ತಕದಲ್ಲಿನ ‘ಅರ್ಥ್, ಅವರ್ ಶೇರ್ಡ್ ಹೋಮ್’ ಎಂಬ ಅಧ್ಯಾಯದಲ್ಲಿ ಶುಕ್ಲಾ ಅವರ ಈ ಅಭಿಪ್ರಾಯವನ್ನು ಅಳವಡಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>