ಲಿಖಿತ ಪರೀಕ್ಷೆ ನಂತರ, ಸಂದರ್ಶನ ನಡೆಸುವುದಕ್ಕಾಗಿ ಕೋಚಿಮುಲ್ ಅಧ್ಯಕ್ಷರೂ ಆದ ಶಾಸಕ ನಂಜೇಗೌಡ ನೇತೃತ್ವದಲ್ಲಿ ನೇಮಕಾತಿ ಸಮಿತಿ ರಚಿಸಲಾಗಿತ್ತು. ಕೋಚಿಮುಲ್ ನಿರ್ದೇಶಕ ಕೆ.ಎನ್.ನಾಗರಾಜ, ಸಹಕಾರ ಇಲಾಖೆಯ ಹೆಚ್ಚುವರಿ ರಿಜಿಸ್ಟ್ರಾರ್ ಲಿಂಗರಾಜು, ಕೆಎಂಎಫ್ ಪ್ರತಿನಿಧಿ ಬಿ.ಪಿ.ರಾಜು ಹಾಗೂ ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲ ಮೂರ್ತಿ ಈ ಸಮಿತಿಯಲ್ಲಿದ್ದರು.