<p><strong>ನವದೆಹಲಿ</strong>: ಚುನಾವಣಾ ಬಾಂಡ್ ಮೂಲಕ ದೇಣಿಗೆ ಪಡೆದ ಪ್ರಮುಖ ಪಕ್ಷಗಳು, ಕಾನೂನಿನ ಹಲವು ಅಂಶಗಳನ್ನು ಉಲ್ಲೇಖಿಸುವ ಮೂಲಕ ತಮಗೆ ದೇಣಿಗೆ ನೀಡಿದವರ ಹೆಸರನ್ನು ಬಹಿರಂಗಪಡಿಸಿಲ್ಲ. ಇನ್ನು ಕೆಲವು ಪಕ್ಷಗಳು, ‘ನಾವು ಅನಾಮಧೇಯ’ ಮೂಲಗಳಿಂದ ದೇಣಿಗೆ ಪಡೆದಿದ್ದೇವೆ ಎಂದು ಹೇಳಿವೆ.</p>.<p>ಬಿಜೆಪಿಯು 1951ರ ಪ್ರಜಾಪ್ರಾತಿನಿಧ್ಯ ಕಾಯ್ದೆಯಲ್ಲಿನ ತಿದ್ದುಪಡಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಆದಾಯ ತೆರಿಗೆ ಇಲಾಖೆ ಕಾಯ್ದೆಯ ಅಂಶಗಳನ್ನು ಉಲ್ಲೇಖಿಸಿ, ದೇಣಿಗೆ ನೀಡಿದವರ ವಿವರಗಳನ್ನು ಬಹಿರಂಗಪಡಿಸಿಲ್ಲ.</p>.<p>ಕಾಂಗ್ರೆಸ್ ಪಕ್ಷವು ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡಿದವರ ವಿವರ, ದೇಣಿಗೆಯ ಮೊತ್ತ, ಜಮಾ ಆಗಿರುವ ಬ್ಯಾಂಕ್ ಖಾತೆ ಮತ್ತು ದಿನಾಂಕದ ವಿವರಗಳನ್ನು ಕೋರಿ ಎಸ್ಬಿ ಪತ್ರ ಬರೆದಿದೆ.</p>.<p>ಅದಕ್ಕೆ ಪ್ರತಿಕ್ರಿಯಿಸಿರುವ ಬ್ಯಾಂಕ್, ಚುನಾವಣಾ ಬಾಂಡ್ಗಳ ವಿವರಗಳು ರಾಜಕೀಯ ಪಕ್ಷಗಳ ಬಳಿಯೇ ಇವೆ. ದೇಣಿಗೆಗೆ ಸಂಬಂಧಿಸಿದ ಬ್ಯಾಂಕ್ ಖಾತೆ ವಿವರಗಳನ್ನು ಚುನಾವಣಾ ಆಯೋಗದ ಜತೆ ಹಂಚಿಕೊಳ್ಳಲಾಗಿದೆ ಎಂದಿದೆ.</p>.<p>ಸಮಾಜವಾದಿ ಪಕ್ಷವು ತನಗೆ ದೊರೆತ ಕಡಿಮೆ ಮೊತ್ತದ ದೇಣಿಗೆಯ ವಿವರಗಳನ್ನು (₹ 1 ಲಕ್ಷದಿಂದ ₹ 10 ಲಕ್ಷದವರೆಗಿನ) ಮಾತ್ರ ಬಹಿರಂಗಪಡಿಸಿದೆ. ತಲಾ ₹ 1 ಕೋಟಿ ಮೊತ್ತದ 10 ಬಾಂಡ್ಗಳು ಅಂಚೆ ಮೂಲಕ ಪಡೆದಿದ್ದು, ಅದರಲ್ಲಿ ದೇಣಿಗೆ ನೀಡಿದವರ ಹೆಸರು ನಮೂದಿಸಿರಲಿಲ್ಲ ಎಂದಿದೆ.</p>.<p>ಬಾಂಡ್ ಮೂಲಕ ಎಷ್ಟು ಮೊತ್ತದ ದೇಣಿಗೆ ನೀಡಿದ್ದೀರಿ ಎಂಬ ಮಾಹಿತಿಯನ್ನು ದೇಣಿಗೆ ನೀಡಿದವರನ್ನು ಸಂಪರ್ಕಿಸಿ ಕಲೆಹಾಕಿರುವುದಾಗಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷ ತಿಳಿಸಿದೆ. </p>.<p>‘ಬಾಂಡ್ ಯೋಜನೆಯಡಿ ದೇಣಿಗೆ ಪಡೆದವರು ದೇಣಿಗೆ ನೀಡಿದವರ ವಿವರ ಒದಗಿಸುವ ಅಗತ್ಯವಿಲ್ಲ. ಆದರೂ ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ ನಾವು ದಾನಿಗಳನ್ನು ಸಂಪರ್ಕಿಸಿ ಅವರಿಂದ ಮಾಹಿತಿ ಕಲೆಹಾಕಿದ್ದೇವೆ’ ಎಂದು ಪಕ್ಷದ ಹೇಳಿದೆ.</p>.ಚುನಾವಣಾ ಬಾಂಡ್: BJPಗೆ ₹6,060.51 ಕೋಟಿ, ಪ್ರಾದೇಶಿಕ ಪಕ್ಷಗಳಿಗೆ ₹5,221 ಕೋಟಿ.PM ಹಫ್ತಾ ವಸೂಲಿ ಯೋಜನೆ: ಚುನಾವಣಾ ಬಾಂಡ್ ವಿಷಯವಾಗಿ ಸರ್ಕಾರದ ವಿರುದ್ಧ 'ಕೈ' ಕಿಡಿ.<p>‘ಲಾಟರಿ ಕಿಂಗ್’ ಸ್ಯಾಂಟಿಯಾಗೊ ಮಾರ್ಟಿನ್ ಮಾಲೀಕತ್ವದ ಫ್ಯೂಚರ್ ಗೇಮಿಂಗ್ ಆ್ಯಂಡ್ ಹೋಟೆಲ್ ಸರ್ವೀಸಸ್ ಸಂಸ್ಥೆಯು, ತಾನು ಖರೀದಿಸಿದ ₹1,368 ಕೋಟಿ ಮೊತ್ತದ ಚುನಾವಣಾ ಬಾಂಡ್ನಲ್ಲಿ ₹509 ಕೋಟಿಯನ್ನು ಡಿಎಂಕೆಗೆ ದೇಣಿಗೆ ನೀಡಿದೆ.</p>.<p>‘ನಮ್ಮ ಕಚೇರಿಯ ಸಿಬ್ಬಂದಿ ಚುನಾವಣಾ ಪ್ರಚಾರ ಸೇರಿದಂತೆ ಇತರ ಕೆಲಸಗಳಲ್ಲಿ ಮಗ್ನರಾಗಿದ್ದರು. ಆದ್ದರಿಂದ ದೇಣಿಗೆ ನೀಡಿದ ಪ್ರತಿಯೊಬ್ಬರ ಮಾಹಿತಿಯನ್ನು ಸಮೂದಿಸಲು ಸಾಧ್ಯವಾಗಿಲ್ಲ’ ಎಂಬ ಕಾರಣವನ್ನು ಎನ್ಸಿಪಿ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಚುನಾವಣಾ ಬಾಂಡ್ ಮೂಲಕ ದೇಣಿಗೆ ಪಡೆದ ಪ್ರಮುಖ ಪಕ್ಷಗಳು, ಕಾನೂನಿನ ಹಲವು ಅಂಶಗಳನ್ನು ಉಲ್ಲೇಖಿಸುವ ಮೂಲಕ ತಮಗೆ ದೇಣಿಗೆ ನೀಡಿದವರ ಹೆಸರನ್ನು ಬಹಿರಂಗಪಡಿಸಿಲ್ಲ. ಇನ್ನು ಕೆಲವು ಪಕ್ಷಗಳು, ‘ನಾವು ಅನಾಮಧೇಯ’ ಮೂಲಗಳಿಂದ ದೇಣಿಗೆ ಪಡೆದಿದ್ದೇವೆ ಎಂದು ಹೇಳಿವೆ.</p>.<p>ಬಿಜೆಪಿಯು 1951ರ ಪ್ರಜಾಪ್ರಾತಿನಿಧ್ಯ ಕಾಯ್ದೆಯಲ್ಲಿನ ತಿದ್ದುಪಡಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಆದಾಯ ತೆರಿಗೆ ಇಲಾಖೆ ಕಾಯ್ದೆಯ ಅಂಶಗಳನ್ನು ಉಲ್ಲೇಖಿಸಿ, ದೇಣಿಗೆ ನೀಡಿದವರ ವಿವರಗಳನ್ನು ಬಹಿರಂಗಪಡಿಸಿಲ್ಲ.</p>.<p>ಕಾಂಗ್ರೆಸ್ ಪಕ್ಷವು ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡಿದವರ ವಿವರ, ದೇಣಿಗೆಯ ಮೊತ್ತ, ಜಮಾ ಆಗಿರುವ ಬ್ಯಾಂಕ್ ಖಾತೆ ಮತ್ತು ದಿನಾಂಕದ ವಿವರಗಳನ್ನು ಕೋರಿ ಎಸ್ಬಿ ಪತ್ರ ಬರೆದಿದೆ.</p>.<p>ಅದಕ್ಕೆ ಪ್ರತಿಕ್ರಿಯಿಸಿರುವ ಬ್ಯಾಂಕ್, ಚುನಾವಣಾ ಬಾಂಡ್ಗಳ ವಿವರಗಳು ರಾಜಕೀಯ ಪಕ್ಷಗಳ ಬಳಿಯೇ ಇವೆ. ದೇಣಿಗೆಗೆ ಸಂಬಂಧಿಸಿದ ಬ್ಯಾಂಕ್ ಖಾತೆ ವಿವರಗಳನ್ನು ಚುನಾವಣಾ ಆಯೋಗದ ಜತೆ ಹಂಚಿಕೊಳ್ಳಲಾಗಿದೆ ಎಂದಿದೆ.</p>.<p>ಸಮಾಜವಾದಿ ಪಕ್ಷವು ತನಗೆ ದೊರೆತ ಕಡಿಮೆ ಮೊತ್ತದ ದೇಣಿಗೆಯ ವಿವರಗಳನ್ನು (₹ 1 ಲಕ್ಷದಿಂದ ₹ 10 ಲಕ್ಷದವರೆಗಿನ) ಮಾತ್ರ ಬಹಿರಂಗಪಡಿಸಿದೆ. ತಲಾ ₹ 1 ಕೋಟಿ ಮೊತ್ತದ 10 ಬಾಂಡ್ಗಳು ಅಂಚೆ ಮೂಲಕ ಪಡೆದಿದ್ದು, ಅದರಲ್ಲಿ ದೇಣಿಗೆ ನೀಡಿದವರ ಹೆಸರು ನಮೂದಿಸಿರಲಿಲ್ಲ ಎಂದಿದೆ.</p>.<p>ಬಾಂಡ್ ಮೂಲಕ ಎಷ್ಟು ಮೊತ್ತದ ದೇಣಿಗೆ ನೀಡಿದ್ದೀರಿ ಎಂಬ ಮಾಹಿತಿಯನ್ನು ದೇಣಿಗೆ ನೀಡಿದವರನ್ನು ಸಂಪರ್ಕಿಸಿ ಕಲೆಹಾಕಿರುವುದಾಗಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷ ತಿಳಿಸಿದೆ. </p>.<p>‘ಬಾಂಡ್ ಯೋಜನೆಯಡಿ ದೇಣಿಗೆ ಪಡೆದವರು ದೇಣಿಗೆ ನೀಡಿದವರ ವಿವರ ಒದಗಿಸುವ ಅಗತ್ಯವಿಲ್ಲ. ಆದರೂ ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ ನಾವು ದಾನಿಗಳನ್ನು ಸಂಪರ್ಕಿಸಿ ಅವರಿಂದ ಮಾಹಿತಿ ಕಲೆಹಾಕಿದ್ದೇವೆ’ ಎಂದು ಪಕ್ಷದ ಹೇಳಿದೆ.</p>.ಚುನಾವಣಾ ಬಾಂಡ್: BJPಗೆ ₹6,060.51 ಕೋಟಿ, ಪ್ರಾದೇಶಿಕ ಪಕ್ಷಗಳಿಗೆ ₹5,221 ಕೋಟಿ.PM ಹಫ್ತಾ ವಸೂಲಿ ಯೋಜನೆ: ಚುನಾವಣಾ ಬಾಂಡ್ ವಿಷಯವಾಗಿ ಸರ್ಕಾರದ ವಿರುದ್ಧ 'ಕೈ' ಕಿಡಿ.<p>‘ಲಾಟರಿ ಕಿಂಗ್’ ಸ್ಯಾಂಟಿಯಾಗೊ ಮಾರ್ಟಿನ್ ಮಾಲೀಕತ್ವದ ಫ್ಯೂಚರ್ ಗೇಮಿಂಗ್ ಆ್ಯಂಡ್ ಹೋಟೆಲ್ ಸರ್ವೀಸಸ್ ಸಂಸ್ಥೆಯು, ತಾನು ಖರೀದಿಸಿದ ₹1,368 ಕೋಟಿ ಮೊತ್ತದ ಚುನಾವಣಾ ಬಾಂಡ್ನಲ್ಲಿ ₹509 ಕೋಟಿಯನ್ನು ಡಿಎಂಕೆಗೆ ದೇಣಿಗೆ ನೀಡಿದೆ.</p>.<p>‘ನಮ್ಮ ಕಚೇರಿಯ ಸಿಬ್ಬಂದಿ ಚುನಾವಣಾ ಪ್ರಚಾರ ಸೇರಿದಂತೆ ಇತರ ಕೆಲಸಗಳಲ್ಲಿ ಮಗ್ನರಾಗಿದ್ದರು. ಆದ್ದರಿಂದ ದೇಣಿಗೆ ನೀಡಿದ ಪ್ರತಿಯೊಬ್ಬರ ಮಾಹಿತಿಯನ್ನು ಸಮೂದಿಸಲು ಸಾಧ್ಯವಾಗಿಲ್ಲ’ ಎಂಬ ಕಾರಣವನ್ನು ಎನ್ಸಿಪಿ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>