<p><strong>ಮಲಪ್ಪುರಂ (ಕೇರಳ):</strong> ಜಿಲ್ಲೆಯ ಉರಂಗಟ್ಟಿರಿಯಲ್ಲಿ ಆನೆಯೊಂದು ಬಾವಿಗೆ ಬಿದ್ದಿದೆ. ಅದನ್ನು ರಕ್ಷಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗೆ ಸ್ಥಳೀಯರಿಂದಲೇ ತೊಡಕು ಎದುರಾಗಿದೆ.</p><p>‘ರಕ್ಷಣೆ ಬಳಿಕ ಆನೆಯನ್ನು ಇಲ್ಲಿಯೇ ಬಿಡಬಾರದು. ಈ ಬಗ್ಗೆ ಸ್ಪಷ್ಟ ಭರವಸೆ ನೀಡದೇ ರಕ್ಷಣೆಗೆ ಅವಕಾಶ ನೀಡೆವು’ ಎಂದು ಬಾವಿಯುಳ್ಳ ಭೂಮಿ ಮಾಲೀಕ, ಸ್ಥಳೀಯರು ಪಟ್ಟುಹಿಡಿದಿದ್ದಾರೆ.</p><p>ನಿಲಾಂಬುರ್ ವಲಯದ ಡಿಎಫ್ಒ ಅವರಿಗೆ ಈ ಕುರಿತು ಅಹವಾಲು ಸಲ್ಲಿಸಿರುವ ಸ್ಥಳೀಯರು, ‘ಆನೆಯ ನಿರಂತರ ದಾಳಿಯಿಂದ ಬೆಳೆಗಳು ಹಾಳಾಗಿವೆ. ನಷ್ಟ ಭರಿಸಬೇಕು’ ಎಂದೂ ಒತ್ತಾಯಿಸಿದರು.</p><p>ಬಾವಿಗೆ ಬಿದ್ದಿರುವ ಆನೆಯನ್ನು ರಕ್ಷಿಸಿದ ಬಳಿಕ ದಟ್ಟಕಾಡಿಗೆ ಬಿಡಿ ಎಂದು ಸ್ಥಳೀಯರು ಆಗ್ರಹಪಡಿಸಿದ್ದಾರೆ. ಆದರೆ, ‘ಆನೆ ರಕ್ಷಣೆ, ಸ್ಥಳಾಂತರ ಸುಲಭವಲ್ಲ’ ಎಂದು ಡಿಎಫ್ಒ ಪ್ರತಿಕ್ರಿಯಿಸಿದ್ದಾರೆ.</p><p>‘ಬದಲಾಗಿ ಬಾವಿಯ ಒಂದು ಭಾಗವನ್ನು ಒಡೆದು, ಆನೆ ಸರಾಗವಾಗಿ ನಿರ್ಗಮಿಸುವಂತೆ ಮಾಡುವುದೇ ಪರಿಹಾರ’ ಎಂದು ಜನರ ಮನವೊಲಿಸಲು ಡಿಎಫ್ಒ ಯತ್ನಿಸಿದರು. ಆದರೆ, ‘ಆನೆ ಮತ್ತೆ, ಮತ್ತೆ ಬಂದು ಬೆಳೆಯನ್ನು ಹಾನಿ ಮಾಡಲಿದೆ. ದಟ್ಟಕಾಡಿಗೆ ಬಿಡುವುದಿದ್ದರೆ ರಕ್ಷಿಸಿ’ ಎಂದೂ ಜನರು ಒತ್ತಾಯಿಸಿದ್ದಾರೆ.</p><p>ಈ ಕುರಿತು ಸಂಬಂಧಿಸಿದವರ ಜೊತೆಗೆ ಚರ್ಚಿಸಿದ ನಂತರವಷ್ಟೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಡಿಎಫ್ಒ ಹೇಳಿದ್ದಾರೆ. ಆನೆ ಬಾವಿಯಲ್ಲೇ ಉಳಿದಿದೆ.</p>.ನರಸಿಂಹರಾಜಪುರ: ಆನೆ–ಮಾನವ ಸಂಘರ್ಷ ತಡೆಗೆ ಸೌರವಿದ್ಯುತ್ ಚಾಲಿತ ಯಂತ್ರ ಅಳವಡಿಕೆ .ವಿಡಿಯೊ: ಕಾಡಾನೆಯ ನೆರವಿಗೆ ಬಂದ ಮತ್ತೊಂದು ಆನೆ; ಪೊನ್ನಂಪೇಟೆಯಲ್ಲಿ ನಡೆದ ಘಟನೆ.VIDEO | ಕೇರಳದ ಮಸೀದಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಚ್ಚಿದ ಆನೆ: 23 ಜನರಿಗೆ ಗಾಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲಪ್ಪುರಂ (ಕೇರಳ):</strong> ಜಿಲ್ಲೆಯ ಉರಂಗಟ್ಟಿರಿಯಲ್ಲಿ ಆನೆಯೊಂದು ಬಾವಿಗೆ ಬಿದ್ದಿದೆ. ಅದನ್ನು ರಕ್ಷಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗೆ ಸ್ಥಳೀಯರಿಂದಲೇ ತೊಡಕು ಎದುರಾಗಿದೆ.</p><p>‘ರಕ್ಷಣೆ ಬಳಿಕ ಆನೆಯನ್ನು ಇಲ್ಲಿಯೇ ಬಿಡಬಾರದು. ಈ ಬಗ್ಗೆ ಸ್ಪಷ್ಟ ಭರವಸೆ ನೀಡದೇ ರಕ್ಷಣೆಗೆ ಅವಕಾಶ ನೀಡೆವು’ ಎಂದು ಬಾವಿಯುಳ್ಳ ಭೂಮಿ ಮಾಲೀಕ, ಸ್ಥಳೀಯರು ಪಟ್ಟುಹಿಡಿದಿದ್ದಾರೆ.</p><p>ನಿಲಾಂಬುರ್ ವಲಯದ ಡಿಎಫ್ಒ ಅವರಿಗೆ ಈ ಕುರಿತು ಅಹವಾಲು ಸಲ್ಲಿಸಿರುವ ಸ್ಥಳೀಯರು, ‘ಆನೆಯ ನಿರಂತರ ದಾಳಿಯಿಂದ ಬೆಳೆಗಳು ಹಾಳಾಗಿವೆ. ನಷ್ಟ ಭರಿಸಬೇಕು’ ಎಂದೂ ಒತ್ತಾಯಿಸಿದರು.</p><p>ಬಾವಿಗೆ ಬಿದ್ದಿರುವ ಆನೆಯನ್ನು ರಕ್ಷಿಸಿದ ಬಳಿಕ ದಟ್ಟಕಾಡಿಗೆ ಬಿಡಿ ಎಂದು ಸ್ಥಳೀಯರು ಆಗ್ರಹಪಡಿಸಿದ್ದಾರೆ. ಆದರೆ, ‘ಆನೆ ರಕ್ಷಣೆ, ಸ್ಥಳಾಂತರ ಸುಲಭವಲ್ಲ’ ಎಂದು ಡಿಎಫ್ಒ ಪ್ರತಿಕ್ರಿಯಿಸಿದ್ದಾರೆ.</p><p>‘ಬದಲಾಗಿ ಬಾವಿಯ ಒಂದು ಭಾಗವನ್ನು ಒಡೆದು, ಆನೆ ಸರಾಗವಾಗಿ ನಿರ್ಗಮಿಸುವಂತೆ ಮಾಡುವುದೇ ಪರಿಹಾರ’ ಎಂದು ಜನರ ಮನವೊಲಿಸಲು ಡಿಎಫ್ಒ ಯತ್ನಿಸಿದರು. ಆದರೆ, ‘ಆನೆ ಮತ್ತೆ, ಮತ್ತೆ ಬಂದು ಬೆಳೆಯನ್ನು ಹಾನಿ ಮಾಡಲಿದೆ. ದಟ್ಟಕಾಡಿಗೆ ಬಿಡುವುದಿದ್ದರೆ ರಕ್ಷಿಸಿ’ ಎಂದೂ ಜನರು ಒತ್ತಾಯಿಸಿದ್ದಾರೆ.</p><p>ಈ ಕುರಿತು ಸಂಬಂಧಿಸಿದವರ ಜೊತೆಗೆ ಚರ್ಚಿಸಿದ ನಂತರವಷ್ಟೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಡಿಎಫ್ಒ ಹೇಳಿದ್ದಾರೆ. ಆನೆ ಬಾವಿಯಲ್ಲೇ ಉಳಿದಿದೆ.</p>.ನರಸಿಂಹರಾಜಪುರ: ಆನೆ–ಮಾನವ ಸಂಘರ್ಷ ತಡೆಗೆ ಸೌರವಿದ್ಯುತ್ ಚಾಲಿತ ಯಂತ್ರ ಅಳವಡಿಕೆ .ವಿಡಿಯೊ: ಕಾಡಾನೆಯ ನೆರವಿಗೆ ಬಂದ ಮತ್ತೊಂದು ಆನೆ; ಪೊನ್ನಂಪೇಟೆಯಲ್ಲಿ ನಡೆದ ಘಟನೆ.VIDEO | ಕೇರಳದ ಮಸೀದಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಚ್ಚಿದ ಆನೆ: 23 ಜನರಿಗೆ ಗಾಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>