ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Republic Of Bharath | ಇಂಡಿಯಾ, ಭಾರತ್: ಚರ್ಚೆ ಅನಂತ

Published 5 ಸೆಪ್ಟೆಂಬರ್ 2023, 16:20 IST
Last Updated 5 ಸೆಪ್ಟೆಂಬರ್ 2023, 16:20 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯಾ ಹೆಸರನ್ನು ಭಾರತ ಎಂದು ಬದಲಿಸಲು ಸಂಸತ್ತಿನ ವಿಶೇಷ ಅಧಿವೇಶನದಲ್ಲಿಯೇ ನಿರ್ಣಯ ಮಂಡಿಸಬಹುದು ಎಂಬ ವದಂತಿ ಕೇಳಿಬರುತ್ತಿದ್ದು, ಹೀಗೆ ಹೆಸರು ಬದಲಿಸಲು ಸಂವಿಧಾನದ ತಿದ್ದುಪಡಿ ಅಗತ್ಯವಿದೆಯೇ? ಇದು, ಸಂವಿಧಾನದ ಮೂಲ ಆಶಯಕ್ಕೆ ಪೂರಕವಾಗಿರಲಿದೆಯೇ ಎಂಬ ಪ್ರಶ್ನೆಗಳು ಮೂಡಿವೆ.

ಈ ವಿಷಯದಲ್ಲಿ ಪರಿಣತರು ಮತ್ತು ರಾಜಕೀಯ ವಿಶ್ಲೇಷಕರ ಅಭಿಪ್ರಾಯಗಳು ಭಿನ್ನವಾಗಿವೆ. ಸಂವಿಧಾನದ 1ನೇ ವಿಧಿಯಲ್ಲಿ, ‘ಇಂಡಿಯಾ, ಅಂದರೆ ಭಾರತ, ರಾಜ್ಯಗಳ ಒಕ್ಕೂಟ’ ಎಂದು ಸ್ಪಷ್ಟವಾಗಿ ಹೇಳಲಾಗಿದೆ. 

ಸುಪ್ರೀಂ ಕೋರ್ಟ್‌ ವಕೀಲ, ಕಾಂಗ್ರೆಸ್‌ನ ರಾಜ್ಯಸಭೆ ಸದಸ್ಯ ವಿವೇಕ್‌ ತಂಖಾ, ಸಂವಿಧಾನದಲ್ಲಿ ಎರಡೂ ಹೆಸರಿನ ಉಲ್ಲೇಖವಿದೆ. ರಾಷ್ಟ್ರಮಟ್ಟದಲ್ಲಿ ‘ಇಂಡಿಯಾ’ ಹೆಸರಾಗಿದೆ. ರಾಷ್ಟ್ರವನ್ನು ನಾವು ಹೇಗೆ ಗುರುತಿಸುತ್ತೇವೆ ಎಂಬುದನ್ನು ಬಿಂಬಿಸಲಿದೆ. ರಾಜತಾಂತ್ರಿಕ ಕ್ರಮದಲ್ಲೂ ಭಾರತ ಎಂದೇ ಉಲ್ಲೇಖಿಸಲಾಗುತ್ತದೆ. ಈ ಎಲ್ಲ ಹೋಗಲಿವೆ’ ಎನ್ನುತ್ತಾರೆ.

‘ಈಗಿನ ಬಿಜೆಪಿ ನೇತೃತ್ವದ ಸರ್ಕಾರ ವಸಾಹತುಶಾಹಿ ಕಾಲಘಟ್ಟದ ಎಲ್ಲವನ್ನು ಬದಲಿಸಲು ಒತ್ತುನೀಡಿದೆ. ಇಂಡಿಯಾ ಉಲ್ಲೇಖವುಳ್ಳ ಎಲ್ಲವೂ ಈ ಸರ್ಕಾರಕ್ಕೆ ಅಹಿತವಾಗಿವೆ. ಇದು ನಂಬಿಕೆ. ಹೆಸರಿನ ಬದಲಾವಣೆ ದೇಶವನ್ನು ರೂಪಿಸುವುದಿಲ್ಲ. ಆದರೆ, ಉದ್ಯೋಗ, ಶಿಕ್ಷಣ, ಗುಣಮಟ್ಟದ ಆರೋಗ್ಯ ಸೇವೆ ರೂಪಿಸುತ್ತದೆ’ ಎಂದು ಹೇಳುತ್ತಾರೆ.

ಇಂಡಿಯಾ ಬದಲಾಗಿ ಭಾರತ ಎಂದೇ ಹೆಸರಿಸಬೇಕು ಎಂಬ ಬೇಡಿಕೆಯು ಪ್ರಮುಖವಾದುದೇನಲ್ಲ. ದೆಹಲಿಯ ಉದ್ಯಮಿಯೊಬ್ಬರು 2020ರಲ್ಲಿ ಇಂಡಿಯಾ ಅನ್ನು ಭಾರತ ಎಂದೇ ಕರೆಯಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ಅದನ್ನು ವಜಾ ಮಾಡಿತ್ತು. ಇಂತದೇ ಬೇಡಿಕೆಯಿದ್ದ ಅರ್ಜಿಯನ್ನು 2016ರಲ್ಲಿಯೂ ತಿರಸ್ಕರಿಸಿತ್ತು.

ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ‘ಎಕ್ಸ್‌’ ವೇದಿಕೆಯಲ್ಲಿ ಸಂದೇಶ ಪೋಸ್ಟ್ ಮಾಡಿದ್ದು, ‘ಇಂಡಿಯಾವನ್ನು ‘ಭಾರತ್‌’ ಎಂದು ಕರೆಯಲು ಸಾಂವಿಧಾನಿಕ ಆಕ್ಷೇಪವೇನೂ ಇಲ್ಲ’ ಎಂದು ಹೇಳಿದ್ದಾರೆ. ‘ಇಂಡಿಯಾ ಮತ್ತು ಭಾರತ್ ಎರಡೂ ಅಧಿಕೃತ ಹೆಸರುಗಳೇ. ಇಂಡಿಯಾ ಅನ್ನು ಸಂಪೂರ್ಣ ಕೈಬಿಡುವಷ್ಟು ಕೇಂದ್ರ ಸರ್ಕಾರ ಮೂರ್ಖತನದ್ದಲ್ಲ ಎಂದು ಭಾವಿಸುತ್ತೇನೆ’ ಎಂದಿದ್ದಾರೆ.

‘ಇಂಡಿಯಾ ಎಂಬುದಕ್ಕೆ ಲೆಕ್ಕ ಹಾಕಲಾಗದಷ್ಟು ಬ್ರ್ಯಾಂಡ್‌ ಮೌಲ್ಯವಿದೆ. ಇದು, ಶತಮಾನಗಳಿಂದ ನಿರ್ಮಾಣವಾಗಿದ್ದಾಗಿದೆ. ನಾವು ಎರಡೂ ಹೆಸರು ಬಳಸುವುದನ್ನು ಮುಂದುವರಿಸಬೇಕು’ ಎಂದು ಶಶಿ ತರೂರ್ ಅವರು ಪ್ರತಿಪಾದಿಸುತ್ತಾರೆ. 

ಇಂಡಿಯಾ ಅಧಿಕೃತ ಹೆಸರು
ನವದೆಹಲಿ: ‘ವಿಶ್ವಸಂಸ್ಥೆ ದಾಖಲೆಯಲ್ಲಿ ‘ರಿಪಬ್ಲಿಕ್ ಆಫ್‌ ಇಂಡಿಯಾ’ ಎಂದಿದೆ. ಇದನ್ನು ‘ರಿಪಬ್ಲಿಕ್‌ ಆಫ್ ಭಾರತ್’ ಎಂದು ಬದಲಿಸಲು ಸಂವಿಧಾನಕ್ಕೆ ತಿದ್ದುಪಡಿ ಅಗತ್ಯ. ಅಲ್ಲದೆ ಸಂಬಂಧಿತ ರಾಷ್ಟ್ರಗಳಿಗೆ ಈ ಬಗ್ಗೆ ಮಾಹಿತಿ ಕಳುಹಿಸಬೇಕು’ ಎಂದು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರಿ ಹೇಳುತ್ತಾರೆ. ‘ಹೆಸರಿನ ಬದಲಾವಣೆಯನ್ನು ಸಂವಿಧಾನಕ್ಕೆ ತಿದ್ದುಪಡಿ ಮೂಲಕವೇ ಮಾಡಬೇಕು. ಅದಾಗದಿದ್ದರೆ ಹೆಸರು ಇಂಡಿಯಾ ಎಂದಷ್ಟೇ ಇರಲಿದೆ. ಸಂವಿಧಾನದ ವಿಧಿ 1ರಲ್ಲಿ ಭಾರತ ಮತ್ತು ಇಂಡಿಯಾ ಎರಡರ ಉಲ್ಲೇಖವಿರುವುದು ವಿಶ್ಲೇಷಣಾತ್ಮಕವಷ್ಟೇ. ಅದರರ್ಥ ಅದಲು–ಬದಲಾಗಿ ಎರಡನ್ನೂ ಬಳಸಬಹುದು ಎಂಬುದಲ್ಲ. ಹಾಗೇ ಮಾಡಿದರೆ ಅದು ಆತ್ಮಹತ್ಯಾ ಕ್ರಮವಾಗಲಿದೆ. ಒಂದು ದೇಶಕ್ಕೆ ಒಂದು ಹೆಸರಷ್ಟೇ ಇರಬೇಕು’ ಎಂದು ಅವರು ಪ್ರತಿಪಾದಿಸುತ್ತಾರೆ.  ಸಂವಿಧಾನದ ಹಿಂದಿ ಅವತರಣಿಕೆಯಲ್ಲಿಯೂ ‘ಭಾರತ್‌.. ಅರ್ಥಾತ್‌ ಇಂಡಿಯಾ...’ ಎಂದೇ ಉಲ್ಲೇಖವಾಗಿದೆ. ಇಂಡಿಯಾ ಎಂಬುದು ದೇಶದ ಅಧಿಕೃತ ಹೆಸರು. ಇದನ್ನು ಬದಲಿಸಲು ಸಂವಿಧಾನದ ತಿದ್ದುಪಡಿ ಅಗತ್ಯ. ಇದಕ್ಕಾಗಿ ಉಭಯ ಸದನಗಳಲ್ಲಿಯೂ ಮೂರನೇ ಎರಡರಷ್ಟು ಸದಸ್ಯರ ಬೆಂಬಲ ಬೇಕು‘ ಎಂದು ಹೇಳುತ್ತಾರೆ. ಹೀಗೆ ಹೆಸರು ಬದಲಿಸುವುದರಿಂದ ಸಂವಿಧಾನದ ಮೂಲ ಸ್ವರೂಪ ಬದಲಾಗುವುದಿಲ್ಲ ಎಂದು ಆಚಾರಿ ಪ್ರತಿಪಾದಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT