<p><strong>ನವದೆಹಲಿ:</strong> ರಾಜ್ಯ ವಿಧಾನಸಭೆಗಳಲ್ಲಿ ಅಂಗೀಕಾರಗೊಂಡ ಮಸೂದೆಗಳಿಗೆ ರಾಷ್ಟ್ರಪತಿಯವರು ಕಾಲಮಿತಿಯೊಳಗೆ ಅಂಕಿತ ಹಾಕಬೇಕು ಎಂದು ಏಪ್ರಿಲ್ 8ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ಗೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 14 ಮಹತ್ವದ ಪ್ರಶ್ನೆಗಳನ್ನು ಕೇಳಿದ್ದಾರೆ.</p><p>ಸಂವಿಧಾನದ 143(1)ನೇ ವಿಧಿಯಡಿ ದತ್ತವಾದ ಅಧಿಕಾರವನ್ನು ಅಪರೂಪವೆಂಬಂತೆ ಬಳಸಿ, ಅವರು ಈ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.</p><p>‘ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದಾಗಿ, ಕಾನೂನಿಗೆ ಸಂಬಂಧಿಸಿ ಈ ಪ್ರಶ್ನೆಗಳು ಉದ್ಭವಿಸಿವೆ. ಸಾರ್ವಜನಿಕ ಮಹತ್ವದ ಈ ಪ್ರಶ್ನೆಗಳಿಗೆ ಸುಪ್ರೀಂ ಕೋರ್ಟ್ ಅಭಿಪ್ರಾಯ ಪಡೆಯುವುದು ಸೂಕ್ತ ಎಂದು ಭಾವಿಸಿದ್ದೇನೆ’ ಎಂದು ರಾಷ್ಟ್ರಪತಿ ಮುರ್ಮು ಹೇಳಿದ್ದಾರೆ.</p><p>ಸಂವಿಧಾನದ 143(1) ವಿಧಿಯು, ಸುಪ್ರೀಂ ಕೋರ್ಟ್ನೊಂದಿಗೆ ಸಮಾಲೋಚನೆ ನಡೆಸುವುದಕ್ಕೆ ರಾಷ್ಟ್ರಪತಿ ಹೊಂದಿರುವ ಅಧಿಕಾರಕ್ಕೆ ಸಂಬಂಧಿಸಿದ್ದಾಗಿದೆ.</p><p>‘ಸಾರ್ವಜನಿಕ ಮಹತ್ವದ ಹಾಗೂ ಅಂತಹ ಸ್ವರೂಪದ ಯಾವುದೇ ಕಾನೂನು ಅಥವಾ ವಿಚಾರ ಕುರಿತು ಪ್ರಶ್ನೆಗಳು ಉದ್ಭವಿಸಿದಾಗ ಇಲ್ಲವೇ ಉದ್ಭವಿಸುವ ಸಾಧ್ಯತೆ ಇದ್ದಾಗ, ಸುಪ್ರೀಂ ಕೋರ್ಟ್ನ ಅಭಿಪ್ರಾಯ ಪಡೆಯುವುದು ಸೂಕ್ತ ಎಂದು ರಾಷ್ಟ್ರಪತಿಗಳು ಭಾವಿಸಿದಾಗ, ಅಂತಹ ಪ್ರಶ್ನೆಯನ್ನು ಅವರು ನ್ಯಾಯಾಲಯಕ್ಕೆ ಕೇಳಬಹುದು. ಈ ಪ್ರಶ್ನೆಗಳ ಕುರಿತು ಸುಪ್ರೀಂ ಕೋರ್ಟ್, ರಾಷ್ಟ್ರಪತಿ ಅವರಿಗೆ ತನ್ನ<br>ಅಭಿಪ್ರಾಯವನ್ನು ತಿಳಿಸಬಹುದು’ ಎಂದು ಈ ವಿಧಿ ಹೇಳುತ್ತದೆ.</p><p>ರಾಜ್ಯಪಾಲರು ಅಂಕಿತಕ್ಕಾಗಿ ಕಳುಹಿಸುವ ಮಸೂದೆಗಳನ್ನು ರಾಷ್ಟ್ರಪತಿ ತಡೆ ಹಿಡಿದಿದ್ದರೆ, ರಾಜ್ಯ ಸರ್ಕಾರಗಳು ನೇರವಾಗಿ ಸುಪ್ರೀಂ ಕೋರ್ಟ್ ಕದ ತಟ್ಟಬಹುದು ಎಂದು ನ್ಯಾಯಮೂರ್ತಿಗಳಾದ<br>ಜೆ.ಬಿ.ಪಾರ್ದೀವಾಲಾ ಮತ್ತು ಆರ್.ಮಹಾದೇವನ್ ಅವರು ಇದ್ದ ನ್ಯಾಯಪೀಠವು, ಏಪ್ರಿಲ್ 8ರಂದು ತೀರ್ಪು ನೀಡಿತ್ತು.</p><p>ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳ ಕುರಿತು ನಿರ್ಧಾರ ಕೈಗೊಳ್ಳಲು ಎಲ್ಲ ರಾಜ್ಯಪಾಲರಿಗೆ ಕಾಲಮಿತಿ ನಿಗದಿ ಮಾಡಿತ್ತು. ಮಂತ್ರಿ ಪರಿಷತ್ತಿನ ಸಲಹೆಯಂತೆ ರಾಜ್ಯಪಾಲರು ಕ್ರಮ ಕೈಗೊಳ್ಳುವುದು ಕಡ್ಡಾಯ ಎಂದೂ ಪೀಠವು ಹೇಳಿತ್ತು.</p>.<p><strong>ರಾಷ್ಟ್ರಪತಿ ಕೇಳಿದ್ದೇನು?</strong></p><p>1. ಮಸೂದೆಯೊಂದನ್ನು ತಮಗೆ ಸಲ್ಲಿಸಿದ ವೇಳೆ, ಸಂವಿಧಾನದ 200ನೇ ವಿಧಿ ಅನ್ವಯ ರಾಜ್ಯಪಾಲರ ಮುಂದಿರುವ ಸಾಂವಿಧಾನಿಕ ಆಯ್ಕೆಗಳು ಯಾವುವು?</p><p>2. ತಮಗೆ ಸಲ್ಲಿಕೆಯಾಗಿರುವ ಮಸೂದೆ ಕುರಿತು ನಿರ್ಧಾರ ಕೈಗೊಳ್ಳುವಾಗ, ಸಂವಿಧಾನದ 200ನೇ ವಿಧಿಯಲ್ಲಿ ಅವಕಾಶಗಳ ಅನ್ವಯ ರಾಜ್ಯಪಾಲರು ಅಧಿಕಾರ ಚಲಾಯಿಸಲು ಮಂತ್ರಿ ಪರಿಷತ್ತು ನೀಡುವ ಸಲಹೆಯಂತೆ ನಡೆದುಕೊಳ್ಳಬೇಕೇ?</p><p>3. ರಾಜ್ಯಪಾಲರು 200ನೇ ವಿಧಿಯಡಿ ದತ್ತವಾಗಿರುವ ವಿವೇಚನಾಧಿಕಾರ ಚಲಾಯಿಸುವುದರ ಕುರಿತು ನ್ಯಾಯಾಲಯ ವಿಚಾರಣೆ ನಡೆಸಬಹುದೇ?</p><p>4. 200ನೇ ವಿಧಿಯಡಿ ರಾಜ್ಯಪಾಲರು ಕೈಗೊಳ್ಳುವ ಕ್ರಮಗಳ ಕುರಿತು ನ್ಯಾಯಿಕ ಪರಾಮರ್ಶೆ ನಡೆಸುವುದನ್ನು ಸಂವಿಧಾನದ 361ನೇ ವಿಧಿಯು ಸಂಪೂರ್ಣವಾಗಿ ಪ್ರತಿಬಂಧಿಸುತ್ತದೆಯೇ?</p><p>5. ರಾಜ್ಯಪಾಲರು ತಮ್ಮ ಅಧಿಕಾರವನ್ನು ಯಾವ ರೀತಿ ಚಲಾಯಿಸಬೇಕು ಮತ್ತು ಅದಕ್ಕಾಗಿ ಕಾಲಮಿತಿ ಕುರಿತು ಸಾಂವಿಧಾನಿಕವಾದ ಆದೇಶ ಇಲ್ಲದ ಸಂದರ್ಭದಲ್ಲಿ, ಅವರಿಗೆ ಕಾಲಮಿತಿ ನಿಗದಿ ಮಾಡಲು ಹಾಗೂ ಹೇಗೆ ಅಧಿಕಾರ ಚಲಾಯಿಸಬೇಕು ಎಂಬುದರ ಕುರಿತು ನ್ಯಾಯಿಕ ಆದೇಶಗಳ ಪ್ರಕಾರ ಸೂಚನೆ ನೀಡಬಹುದೇ?</p><p>6. ಸಂವಿಧಾನದ 201ನೇ ವಿಧಿಯಡಿ ರಾಷ್ಟ್ರಪತಿ ಯವರು ತಾವು ಹೊಂದಿರುವ ವಿವೇಚನಾಧಿಕಾರ ಚಲಾಯಿಸುವರು. ಅವರ ಈ ಅಧಿಕಾರ ಕುರಿತು ನ್ಯಾಯಾಲಯ ವಿಚಾರಣೆ ನಡೆಸಬಹುದೇ?</p><p>7. ರಾಷ್ಟ್ರಪತಿಯವರಿಗೆ ಕಾಲಮಿತಿ ಮತ್ತು ಅವರು ಹೇಗೆ ತಮ್ಮ ಅಧಿಕಾರ ಚಲಾಯಿಸಬೇಕು ಎಂಬ ಬಗ್ಗೆ ಸಾಂವಿಧಾನಿಕ ಆದೇಶ ಇಲ್ಲದಿದ್ದಾಗ, ಈ ಕುರಿತು ನ್ಯಾಯಾಲಯಗಳು ಆದೇಶ ಹೊರಡಿಸುವ ಮೂಲಕ ಕಾಲಮಿತಿ ನಿಗದಿ ಮಾಡಬಹುದೇ?</p><p>8. ರಾಷ್ಟ್ರಪತಿಯವರು ಹೊಂದಿರುವ ಅಧಿಕಾರ ಕುರಿತು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. 143ನೇ ವಿಧಿಯಡಿ, ರಾಷ್ಟ್ರಪತಿಯವರು ಸುಪ್ರೀಂ ಕೋರ್ಟ್ನ ಸಲಹೆ ಕೇಳಬೇಕೇ? ರಾಷ್ಟ್ರಪತಿ ಅಂಕಿತಕ್ಕಾಗಿ ಮಸೂದೆಯೊಂದನ್ನು ರಾಜ್ಯಪಾಲರು ಕಾಯ್ದಿರಿಸಿದ ಸಂದರ್ಭದಲ್ಲಿ, ರಾಷ್ಟ್ರಪತಿಯು ಸುಪ್ರೀಂ ಕೋರ್ಟ್ನ ಅಭಿಪ್ರಾಯ ಕೇಳಬೇಕೇ?</p><p>9. ಕಾಯ್ದೆಯೊಂದು ಜಾರಿಯಾಗುವುದಕ್ಕೆ ಮುನ್ನವೇ, ರಾಜ್ಯಪಾಲರು ಹಾಗೂ ರಾಷ್ಟ್ರಪತಿಯು ಕ್ರಮವಾಗಿ 200ನೇ ವಿಧಿ ಮತ್ತು 201ನೇ ವಿಧಿಯಡಿ ಕೈಗೊಂಡಿರುವ ನಿರ್ಧಾರಗಳ ಕುರಿತು ನ್ಯಾಯಾಲಯ ವಿಚಾರಣೆ ನಡೆಸಬಹುದೇ? ಮಸೂದೆಯೊಂದು ಕಾಯ್ದೆಯಾಗಿ ಜಾರಿಯಾಗುವುದಕ್ಕೂ ಮುನ್ನವೇ ಅದರಲ್ಲಿನ ಅಂಶಗಳ ಕುರಿತು ಕೋರ್ಟ್ಗಳು ನ್ಯಾಯನಿರ್ಣಯ ಮಾಡುವುದಕ್ಕೆ ಅನುಮತಿ ಇದೆಯೇ?</p><p>10. ರಾಷ್ಟ್ರಪತಿ/ರಾಜ್ಯಪಾಲರು ತಮ್ಮ ಸಾಂವಿಧಾನಿಕ ಅಧಿಕಾರ ಚಲಾಯಿಸಿರುವುದನ್ನು ಮತ್ತು ಹೊರಡಿಸಿದ ಆದೇಶಗಳಿಗೆ, ಸಂವಿಧಾನದ 142ನೇ ವಿಧಿಯಡಿ ಪರ್ಯಾಯ ಅಧಿಕಾರ ಚಲಾವಣೆ/ಆದೇಶ ಹೊರಡಿಸುವಂತಹ ಕ್ರಮ ತೆಗೆದುಕೊಳ್ಳಬಹುದೇ?</p><p>11. ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಸೂದೆಗೆ ರಾಜ್ಯಪಾಲರು ತಮಗಿರುವ ಅಧಿಕಾರ (200ನೇ ವಿಧಿಯಡಿ) ಬಳಸಿ ಅಂಕಿತ ಹಾಕದೆ ಇದ್ದಾಗಲೂ, ಅದು ಕಾನೂನು ಆಗಿ ಜಾರಿಗೆ ಬರಲು ಅವಕಾಶ ಇದೆಯೇ?</p><p>12. ಸಂವಿಧಾನದ 145(3)ನೇ ವಿಧಿ ಪ್ರಕಾರ, ಸುಪ್ರೀಂ ಕೋರ್ಟ್ನ ಯಾವುದೇ ನ್ಯಾಯಪೀಠವು ತನ್ನ ಮುಂದಿರುವ ಅರ್ಜಿಯು, ಸಂವಿಧಾನದ ವ್ಯಾಖ್ಯಾನಕ್ಕೆ ಸಂಬಂಧಿಸಿ ಮೂಲಭೂತ ಪ್ರಶ್ನೆಗಳನ್ನು ಒಳಗೊಂಡಿದೆ ಎಂಬ ಬಗ್ಗೆ ಮೊದಲು ತೀರ್ಮಾನಿಸುವುದು ಕಡ್ಡಾಯವಲ್ಲವೇ? ನಂತರ ಈ ವಿಚಾರವನ್ನು<br>ಕನಿಷ್ಠ ಐವರು ಸದಸ್ಯರು ಇರುವ ಪೀಠಕ್ಕೆ ವರ್ಗಾಯಿಸಬೇಕಲ್ಲವೇ?</p><p>13. ತನ್ನ ಮುಂದಿರುವ ಪ್ರಕರಣಗಳು/ಅರ್ಜಿಯಲ್ಲಿನ ಅಂಶಗಳು, ಸಂವಿಧಾನ ಅಥವಾ ಸದ್ಯ ಜಾರಿಯಲ್ಲಿರುವ ಕಾನೂನಿಗೆ ವಿರುದ್ಧವಾಗಿ ಇಲ್ಲವೇ ಅಸಮಂಜಸವಾಗಿದ್ದಾಗ ಮಾತ್ರ 142ನೇ ವಿಧಿಯಡಿ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬೇಕು/ಆದೇಶ ಹೊರಡಿಸಬೇಕಲ್ಲವೇ?</p><p>14. ಸಂವಿಧಾನದ 131ನೇ ವಿಧಿಯಡಿ ದಾಖಲಿಸುವ ದಾವೆ ಹೊರತುಪಡಿಸಿದಂತೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲು ಸುಪ್ರೀಂ ಕೋರ್ಟ್ ಹೊಂದಿರುವ ಅಧಿಕಾರ ವ್ಯಾಪ್ತಿಯನ್ನು ಸಂವಿಧಾನ ಪ್ರತಿಬಂಧಿಸುತ್ತದೆಯೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ರಾಜ್ಯ ವಿಧಾನಸಭೆಗಳಲ್ಲಿ ಅಂಗೀಕಾರಗೊಂಡ ಮಸೂದೆಗಳಿಗೆ ರಾಷ್ಟ್ರಪತಿಯವರು ಕಾಲಮಿತಿಯೊಳಗೆ ಅಂಕಿತ ಹಾಕಬೇಕು ಎಂದು ಏಪ್ರಿಲ್ 8ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ಗೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 14 ಮಹತ್ವದ ಪ್ರಶ್ನೆಗಳನ್ನು ಕೇಳಿದ್ದಾರೆ.</p><p>ಸಂವಿಧಾನದ 143(1)ನೇ ವಿಧಿಯಡಿ ದತ್ತವಾದ ಅಧಿಕಾರವನ್ನು ಅಪರೂಪವೆಂಬಂತೆ ಬಳಸಿ, ಅವರು ಈ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.</p><p>‘ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದಾಗಿ, ಕಾನೂನಿಗೆ ಸಂಬಂಧಿಸಿ ಈ ಪ್ರಶ್ನೆಗಳು ಉದ್ಭವಿಸಿವೆ. ಸಾರ್ವಜನಿಕ ಮಹತ್ವದ ಈ ಪ್ರಶ್ನೆಗಳಿಗೆ ಸುಪ್ರೀಂ ಕೋರ್ಟ್ ಅಭಿಪ್ರಾಯ ಪಡೆಯುವುದು ಸೂಕ್ತ ಎಂದು ಭಾವಿಸಿದ್ದೇನೆ’ ಎಂದು ರಾಷ್ಟ್ರಪತಿ ಮುರ್ಮು ಹೇಳಿದ್ದಾರೆ.</p><p>ಸಂವಿಧಾನದ 143(1) ವಿಧಿಯು, ಸುಪ್ರೀಂ ಕೋರ್ಟ್ನೊಂದಿಗೆ ಸಮಾಲೋಚನೆ ನಡೆಸುವುದಕ್ಕೆ ರಾಷ್ಟ್ರಪತಿ ಹೊಂದಿರುವ ಅಧಿಕಾರಕ್ಕೆ ಸಂಬಂಧಿಸಿದ್ದಾಗಿದೆ.</p><p>‘ಸಾರ್ವಜನಿಕ ಮಹತ್ವದ ಹಾಗೂ ಅಂತಹ ಸ್ವರೂಪದ ಯಾವುದೇ ಕಾನೂನು ಅಥವಾ ವಿಚಾರ ಕುರಿತು ಪ್ರಶ್ನೆಗಳು ಉದ್ಭವಿಸಿದಾಗ ಇಲ್ಲವೇ ಉದ್ಭವಿಸುವ ಸಾಧ್ಯತೆ ಇದ್ದಾಗ, ಸುಪ್ರೀಂ ಕೋರ್ಟ್ನ ಅಭಿಪ್ರಾಯ ಪಡೆಯುವುದು ಸೂಕ್ತ ಎಂದು ರಾಷ್ಟ್ರಪತಿಗಳು ಭಾವಿಸಿದಾಗ, ಅಂತಹ ಪ್ರಶ್ನೆಯನ್ನು ಅವರು ನ್ಯಾಯಾಲಯಕ್ಕೆ ಕೇಳಬಹುದು. ಈ ಪ್ರಶ್ನೆಗಳ ಕುರಿತು ಸುಪ್ರೀಂ ಕೋರ್ಟ್, ರಾಷ್ಟ್ರಪತಿ ಅವರಿಗೆ ತನ್ನ<br>ಅಭಿಪ್ರಾಯವನ್ನು ತಿಳಿಸಬಹುದು’ ಎಂದು ಈ ವಿಧಿ ಹೇಳುತ್ತದೆ.</p><p>ರಾಜ್ಯಪಾಲರು ಅಂಕಿತಕ್ಕಾಗಿ ಕಳುಹಿಸುವ ಮಸೂದೆಗಳನ್ನು ರಾಷ್ಟ್ರಪತಿ ತಡೆ ಹಿಡಿದಿದ್ದರೆ, ರಾಜ್ಯ ಸರ್ಕಾರಗಳು ನೇರವಾಗಿ ಸುಪ್ರೀಂ ಕೋರ್ಟ್ ಕದ ತಟ್ಟಬಹುದು ಎಂದು ನ್ಯಾಯಮೂರ್ತಿಗಳಾದ<br>ಜೆ.ಬಿ.ಪಾರ್ದೀವಾಲಾ ಮತ್ತು ಆರ್.ಮಹಾದೇವನ್ ಅವರು ಇದ್ದ ನ್ಯಾಯಪೀಠವು, ಏಪ್ರಿಲ್ 8ರಂದು ತೀರ್ಪು ನೀಡಿತ್ತು.</p><p>ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳ ಕುರಿತು ನಿರ್ಧಾರ ಕೈಗೊಳ್ಳಲು ಎಲ್ಲ ರಾಜ್ಯಪಾಲರಿಗೆ ಕಾಲಮಿತಿ ನಿಗದಿ ಮಾಡಿತ್ತು. ಮಂತ್ರಿ ಪರಿಷತ್ತಿನ ಸಲಹೆಯಂತೆ ರಾಜ್ಯಪಾಲರು ಕ್ರಮ ಕೈಗೊಳ್ಳುವುದು ಕಡ್ಡಾಯ ಎಂದೂ ಪೀಠವು ಹೇಳಿತ್ತು.</p>.<p><strong>ರಾಷ್ಟ್ರಪತಿ ಕೇಳಿದ್ದೇನು?</strong></p><p>1. ಮಸೂದೆಯೊಂದನ್ನು ತಮಗೆ ಸಲ್ಲಿಸಿದ ವೇಳೆ, ಸಂವಿಧಾನದ 200ನೇ ವಿಧಿ ಅನ್ವಯ ರಾಜ್ಯಪಾಲರ ಮುಂದಿರುವ ಸಾಂವಿಧಾನಿಕ ಆಯ್ಕೆಗಳು ಯಾವುವು?</p><p>2. ತಮಗೆ ಸಲ್ಲಿಕೆಯಾಗಿರುವ ಮಸೂದೆ ಕುರಿತು ನಿರ್ಧಾರ ಕೈಗೊಳ್ಳುವಾಗ, ಸಂವಿಧಾನದ 200ನೇ ವಿಧಿಯಲ್ಲಿ ಅವಕಾಶಗಳ ಅನ್ವಯ ರಾಜ್ಯಪಾಲರು ಅಧಿಕಾರ ಚಲಾಯಿಸಲು ಮಂತ್ರಿ ಪರಿಷತ್ತು ನೀಡುವ ಸಲಹೆಯಂತೆ ನಡೆದುಕೊಳ್ಳಬೇಕೇ?</p><p>3. ರಾಜ್ಯಪಾಲರು 200ನೇ ವಿಧಿಯಡಿ ದತ್ತವಾಗಿರುವ ವಿವೇಚನಾಧಿಕಾರ ಚಲಾಯಿಸುವುದರ ಕುರಿತು ನ್ಯಾಯಾಲಯ ವಿಚಾರಣೆ ನಡೆಸಬಹುದೇ?</p><p>4. 200ನೇ ವಿಧಿಯಡಿ ರಾಜ್ಯಪಾಲರು ಕೈಗೊಳ್ಳುವ ಕ್ರಮಗಳ ಕುರಿತು ನ್ಯಾಯಿಕ ಪರಾಮರ್ಶೆ ನಡೆಸುವುದನ್ನು ಸಂವಿಧಾನದ 361ನೇ ವಿಧಿಯು ಸಂಪೂರ್ಣವಾಗಿ ಪ್ರತಿಬಂಧಿಸುತ್ತದೆಯೇ?</p><p>5. ರಾಜ್ಯಪಾಲರು ತಮ್ಮ ಅಧಿಕಾರವನ್ನು ಯಾವ ರೀತಿ ಚಲಾಯಿಸಬೇಕು ಮತ್ತು ಅದಕ್ಕಾಗಿ ಕಾಲಮಿತಿ ಕುರಿತು ಸಾಂವಿಧಾನಿಕವಾದ ಆದೇಶ ಇಲ್ಲದ ಸಂದರ್ಭದಲ್ಲಿ, ಅವರಿಗೆ ಕಾಲಮಿತಿ ನಿಗದಿ ಮಾಡಲು ಹಾಗೂ ಹೇಗೆ ಅಧಿಕಾರ ಚಲಾಯಿಸಬೇಕು ಎಂಬುದರ ಕುರಿತು ನ್ಯಾಯಿಕ ಆದೇಶಗಳ ಪ್ರಕಾರ ಸೂಚನೆ ನೀಡಬಹುದೇ?</p><p>6. ಸಂವಿಧಾನದ 201ನೇ ವಿಧಿಯಡಿ ರಾಷ್ಟ್ರಪತಿ ಯವರು ತಾವು ಹೊಂದಿರುವ ವಿವೇಚನಾಧಿಕಾರ ಚಲಾಯಿಸುವರು. ಅವರ ಈ ಅಧಿಕಾರ ಕುರಿತು ನ್ಯಾಯಾಲಯ ವಿಚಾರಣೆ ನಡೆಸಬಹುದೇ?</p><p>7. ರಾಷ್ಟ್ರಪತಿಯವರಿಗೆ ಕಾಲಮಿತಿ ಮತ್ತು ಅವರು ಹೇಗೆ ತಮ್ಮ ಅಧಿಕಾರ ಚಲಾಯಿಸಬೇಕು ಎಂಬ ಬಗ್ಗೆ ಸಾಂವಿಧಾನಿಕ ಆದೇಶ ಇಲ್ಲದಿದ್ದಾಗ, ಈ ಕುರಿತು ನ್ಯಾಯಾಲಯಗಳು ಆದೇಶ ಹೊರಡಿಸುವ ಮೂಲಕ ಕಾಲಮಿತಿ ನಿಗದಿ ಮಾಡಬಹುದೇ?</p><p>8. ರಾಷ್ಟ್ರಪತಿಯವರು ಹೊಂದಿರುವ ಅಧಿಕಾರ ಕುರಿತು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. 143ನೇ ವಿಧಿಯಡಿ, ರಾಷ್ಟ್ರಪತಿಯವರು ಸುಪ್ರೀಂ ಕೋರ್ಟ್ನ ಸಲಹೆ ಕೇಳಬೇಕೇ? ರಾಷ್ಟ್ರಪತಿ ಅಂಕಿತಕ್ಕಾಗಿ ಮಸೂದೆಯೊಂದನ್ನು ರಾಜ್ಯಪಾಲರು ಕಾಯ್ದಿರಿಸಿದ ಸಂದರ್ಭದಲ್ಲಿ, ರಾಷ್ಟ್ರಪತಿಯು ಸುಪ್ರೀಂ ಕೋರ್ಟ್ನ ಅಭಿಪ್ರಾಯ ಕೇಳಬೇಕೇ?</p><p>9. ಕಾಯ್ದೆಯೊಂದು ಜಾರಿಯಾಗುವುದಕ್ಕೆ ಮುನ್ನವೇ, ರಾಜ್ಯಪಾಲರು ಹಾಗೂ ರಾಷ್ಟ್ರಪತಿಯು ಕ್ರಮವಾಗಿ 200ನೇ ವಿಧಿ ಮತ್ತು 201ನೇ ವಿಧಿಯಡಿ ಕೈಗೊಂಡಿರುವ ನಿರ್ಧಾರಗಳ ಕುರಿತು ನ್ಯಾಯಾಲಯ ವಿಚಾರಣೆ ನಡೆಸಬಹುದೇ? ಮಸೂದೆಯೊಂದು ಕಾಯ್ದೆಯಾಗಿ ಜಾರಿಯಾಗುವುದಕ್ಕೂ ಮುನ್ನವೇ ಅದರಲ್ಲಿನ ಅಂಶಗಳ ಕುರಿತು ಕೋರ್ಟ್ಗಳು ನ್ಯಾಯನಿರ್ಣಯ ಮಾಡುವುದಕ್ಕೆ ಅನುಮತಿ ಇದೆಯೇ?</p><p>10. ರಾಷ್ಟ್ರಪತಿ/ರಾಜ್ಯಪಾಲರು ತಮ್ಮ ಸಾಂವಿಧಾನಿಕ ಅಧಿಕಾರ ಚಲಾಯಿಸಿರುವುದನ್ನು ಮತ್ತು ಹೊರಡಿಸಿದ ಆದೇಶಗಳಿಗೆ, ಸಂವಿಧಾನದ 142ನೇ ವಿಧಿಯಡಿ ಪರ್ಯಾಯ ಅಧಿಕಾರ ಚಲಾವಣೆ/ಆದೇಶ ಹೊರಡಿಸುವಂತಹ ಕ್ರಮ ತೆಗೆದುಕೊಳ್ಳಬಹುದೇ?</p><p>11. ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಸೂದೆಗೆ ರಾಜ್ಯಪಾಲರು ತಮಗಿರುವ ಅಧಿಕಾರ (200ನೇ ವಿಧಿಯಡಿ) ಬಳಸಿ ಅಂಕಿತ ಹಾಕದೆ ಇದ್ದಾಗಲೂ, ಅದು ಕಾನೂನು ಆಗಿ ಜಾರಿಗೆ ಬರಲು ಅವಕಾಶ ಇದೆಯೇ?</p><p>12. ಸಂವಿಧಾನದ 145(3)ನೇ ವಿಧಿ ಪ್ರಕಾರ, ಸುಪ್ರೀಂ ಕೋರ್ಟ್ನ ಯಾವುದೇ ನ್ಯಾಯಪೀಠವು ತನ್ನ ಮುಂದಿರುವ ಅರ್ಜಿಯು, ಸಂವಿಧಾನದ ವ್ಯಾಖ್ಯಾನಕ್ಕೆ ಸಂಬಂಧಿಸಿ ಮೂಲಭೂತ ಪ್ರಶ್ನೆಗಳನ್ನು ಒಳಗೊಂಡಿದೆ ಎಂಬ ಬಗ್ಗೆ ಮೊದಲು ತೀರ್ಮಾನಿಸುವುದು ಕಡ್ಡಾಯವಲ್ಲವೇ? ನಂತರ ಈ ವಿಚಾರವನ್ನು<br>ಕನಿಷ್ಠ ಐವರು ಸದಸ್ಯರು ಇರುವ ಪೀಠಕ್ಕೆ ವರ್ಗಾಯಿಸಬೇಕಲ್ಲವೇ?</p><p>13. ತನ್ನ ಮುಂದಿರುವ ಪ್ರಕರಣಗಳು/ಅರ್ಜಿಯಲ್ಲಿನ ಅಂಶಗಳು, ಸಂವಿಧಾನ ಅಥವಾ ಸದ್ಯ ಜಾರಿಯಲ್ಲಿರುವ ಕಾನೂನಿಗೆ ವಿರುದ್ಧವಾಗಿ ಇಲ್ಲವೇ ಅಸಮಂಜಸವಾಗಿದ್ದಾಗ ಮಾತ್ರ 142ನೇ ವಿಧಿಯಡಿ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬೇಕು/ಆದೇಶ ಹೊರಡಿಸಬೇಕಲ್ಲವೇ?</p><p>14. ಸಂವಿಧಾನದ 131ನೇ ವಿಧಿಯಡಿ ದಾಖಲಿಸುವ ದಾವೆ ಹೊರತುಪಡಿಸಿದಂತೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲು ಸುಪ್ರೀಂ ಕೋರ್ಟ್ ಹೊಂದಿರುವ ಅಧಿಕಾರ ವ್ಯಾಪ್ತಿಯನ್ನು ಸಂವಿಧಾನ ಪ್ರತಿಬಂಧಿಸುತ್ತದೆಯೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>