<p><strong>ನವದೆಹಲಿ:</strong> ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು (ಎಎಪಿ) ಹೀನಾಯ ಸೋಲು ಕಂಡಿದೆ. ಇದರೊಂದಿಗೆ ನಾಲ್ಕನೇ ಬಾರಿ ಅಧಿಕಾರ ಹಿಡಿಯುವ ಕನಸು ಕಮರಿದೆ. </p><p>ಮತ್ತೊಂದೆಡೆ 26 ವರ್ಷಗಳ ಸುದೀರ್ಘ ಅವಧಿಯ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕಮಲ ಅರಳಿದೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ 48 ಸ್ಥಾನಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದೆ. </p><p>ಎಎಪಿ 22 ಸ್ಥಾನಗಳಲ್ಲಿ ಮಾತ್ರ ಜಯ ಸಾಧಿಸಿದರೆ, ಕಾಂಗ್ರೆಸ್ಗೆ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ಇದರೊಂದಿಗೆ ದೆಹಲಿಯಲ್ಲೂ 'ಡಬಲ್ ಎಂಜಿನ್' ಸರ್ಕಾರಕ್ಕೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ.</p><p>ಚುನಾವಣೆಯಲ್ಲಿ ಎಎಪಿಯ ಘಟಾನುಘಟಿ ನಾಯಕರಾದ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸೌರಭ್ ಭಾರಧ್ವಾಜ್, ಸತ್ಯೇಂದ್ರ ಜೈನ್ ಸೋತು ನೆಲಕಚ್ಚಿದ್ದಾರೆ. ಅತ್ತ ಬಿಜೆಪಿಯ ಪರ್ವೇಜ್ ಸಾಹೀಬ್ ವರ್ಮ ಎಎಪಿ ಪಾಲಿಗೆ 'ಕಿಲ್ಲರ್' ಆಗಿ ಹೊರಹೊಮ್ಮಿದ್ದಾರೆ. </p><p>ಕಳೆದ ಐದು ವರ್ಷಗಳಲ್ಲಿ ನಡೆದ ಹಲವಾರು ಅಂಶಗಳು ಎಎಪಿಗೆ ಮುಳುವಾಗಿ ಪರಿಣಮಿಸಿತು. ಮತ್ತೊಂದೆಡೆ ಸ್ಪಷ್ಟ ಯೋಜನೆಯೊಂದಿಗೆ ರಣತಂತ್ರ ರೂಪಿಸಿರುವ ಬಿಜೆಪಿ ಅಧಿಕಾರಕ್ಕೇರುವಲ್ಲಿ ಯಶಸ್ವಿಯಾಗಿದೆ. </p>.Delhi Election Result | ಬಿಜೆಪಿಗೆ ಗದ್ದುಗೆ: ಎಎಪಿ ಮನೆಗೆ.Delhi Election Result: ಆಮ್ ಆದ್ಮಿ ಪಕ್ಷದ ಮಹಾರಥಿಗಳ ಸೋಲು. <p><strong>ಭರ್ಜರಿ ಜಯ; ಬಿಜೆಪಿಗೆ ವರದಾನವಾಗಿದ್ದೇನು?</strong></p><p>*ರಾಷ್ಟ್ರೀಯ ನಾಯಕರನ್ನು ಒಳಗೊಂಡಂತೆ ಯೋಜನಾಬದ್ಧವಾದ ಪ್ರಚಾರ, ರಣನೀತಿ</p><p>*ಎನ್ಡಿಎ ಮೈತ್ರಿಯೊಂದಿಗೆ ಪ್ರಾದೇಶಿಕವಾಗಿ ಬಿರುಸಿನ ಪ್ರಚಾರ ನಡೆಸುವಲ್ಲಿ ಯಶಸ್ವಿ</p><p>*'ಮೋದಿ ಗ್ಯಾರಂಟಿ' ಮುಂದೆ ಎಎಪಿ ಉಚಿತ ಆಫರ್ಗಳು ನೆಲಕಚ್ಚಿತು. ಮತದಾರರ ಒಲವು ಗೆದ್ದ ಬಿಜೆಪಿ. </p><p>*ಆರ್ಎಸ್ಎಸ್ ಸೇರಿದಂತೆ ಸಮಾನ ಮನಸ್ಕ ಸಂಸ್ಥೆಗಳಿಂದ ತೆರೆಮರೆಯಲ್ಲಿ ಪರಿಣಾಮಕಾರಿ ಕೆಲಸ.</p><p>*ಕೇಂದ್ರ ಬಜೆಟ್ ಎಫೆಕ್ಟ್: ಆದಾಯ ತೆರಿಗೆ ವಿನಾಯಿತಿಯೊಂದಿಗೆ ಮಧ್ಯಮ ವರ್ಗದ ಜನರನ್ನು ಓಲೈಸಲು ಯಶಸ್ವಿ. </p><p>*ದೆಹಲಿಯ ಜನರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳತ್ತ ಬಿಜೆಪಿ ಹೆಚ್ಚಿನ ಗಮನ ಕೇಂದ್ರಿಕರಿಸಿತ್ತು. ಕಳಪೆ ರಸ್ತೆ, ಅಸಮರ್ಪಕ ನೀರಿನ ಸರಬರಾಜು, ವಾಯು ಮಾಲಿನ್ಯ, ಕಾರ್ಯನಿರ್ವಹಿಸದ ಮೊಹಲ್ಲಾ ಚಿಕಿತ್ಸಾ ಕೇಂದ್ರ ಹೀಗೆ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ಹಿಡಿಯಿತು. </p>.Delhi Election Result: ‘ಪಂದ್ಯಶ್ರೇಷ್ಠ’ ಪರ್ವೇಶ್ಗೆ ಸಿಎಂ ಗಾದಿ?.Delhi Results: ಕಳೆಗುಂದಿದ ಕೇಜ್ರಿವಾಲ್ 'ಕ್ರೇಜ್'; ಎಎಪಿ ಸೋಲಿಗೆ ಕಾರಣಗಳೇನು?. <p><strong>ಹೀನಾಯ ಸೋಲು; ಎಎಪಿಗೆ ಮುಳುವಾಗಿದ್ದೇನು?</strong></p><p>*ನಿರಂತರವಾಗಿ ಭ್ರಷ್ಟಾಚಾರ ಆರೋಪ, ದೆಹಲಿ ಅಬಕಾರಿ ನೀತಿ ಹಗರಣ</p><p>*ಜೈಲು ಪಾಲಾದ ಅರವಿಂದ ಕೇಜ್ರಿವಾಲ್, ನಿಂತು ಹೋದ ಆಡಳಿತ ಚಕ್ರ</p><p>*ಕಳೆಗುಂದಿದ 'ಕೇಜ್ರಿವಾಲ್ ಬ್ರ್ಯಾಂಡ್'. ಅಬಕಾರಿ ನೀತಿ ಹಗರಣದಲ್ಲಿ ಎಎಪಿಯ ಹಲವು ನಾಯಕರು ಜೈಲು ಪಾಲಾದರು. </p><p>*ಎಎಪಿ ನಾಯಕರ ವಿರುದ್ಧ ವಿಲಾಸಿ ಜೀವನದ ಆರೋಪ. ದೆಹಲಿ ಸಿಎಂ ಅಧಿಕೃತ ಬಂಗಲೆಯ ನವೀಕರಣದಲ್ಲೂ ಭಾರಿ ಅವ್ಯವಹಾರ ಆರೋಪ.</p><p>*ಚುನಾವಣಾ ಪೂರ್ವ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲ.</p><p>*ಆಡಳಿತ ವಿಚಾರಗಳಲ್ಲಿ ಲೆಫ್ಟಿನೆಂಟ್ ಗವರ್ನರ್ ಹಾಗೂ ಕೇಂದ್ರ ಸರ್ಕಾರದ ಜೊತೆ ನಿರಂತರ ತಿಕ್ಕಾಟ.</p><p>*ನಾಗರಿಕ ಮೂಲಸೌಕರ್ಯ ವೃದ್ಧಿಯಲ್ಲಿ ವಿಫಲ. ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲೂ ನಿರೀಕ್ಷೆ ಮುಟ್ಟಲಿಲ್ಲ.</p><p>*'ಇಂಡಿಯಾ' ಮೈತ್ರಿಕೂಟದಲ್ಲಿ ಬಿರುಕು: ಕನಿಷ್ಠ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ನ ಉತ್ತಮ ಸಾಧನೆ ಎಎಪಿ ಅಭ್ಯರ್ಥಿಗಳ ಸೋಲಿಗೆ ಹೇತುವಾಯಿತು. ಲೋಕಸಭೆ ಚುನಾವಣೆಯಲ್ಲಿ 'ಇಂಡಿಯಾ' ಮೈತ್ರಿಕೂಟದ ಭಾಗವಾಗಿದ್ದ ಕಾಂಗ್ರೆಸ್-ಎಎಪಿ, ಈ ಬಾರಿ ಪರಸ್ಪರ ಮುನಿಸಿಕೊಂಡು ಚುನಾವಣೆ ಎದುರಿಸಿತ್ತು. </p>.Delhi Result ಬಿಜೆಪಿ ಮತ ಪ್ರಮಾಣ ಜಿಗಿತ; ಎಎಪಿ ಇಳಿಕೆ, ಕಾಂಗ್ರೆಸ್ಗೂ ಅಲ್ಪ ಲಾಭ.Delhi Election Result: ಆಮ್ ಆದ್ಮಿ ಪಕ್ಷದ ಮಹಾರಥಿಗಳ ಸೋಲು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು (ಎಎಪಿ) ಹೀನಾಯ ಸೋಲು ಕಂಡಿದೆ. ಇದರೊಂದಿಗೆ ನಾಲ್ಕನೇ ಬಾರಿ ಅಧಿಕಾರ ಹಿಡಿಯುವ ಕನಸು ಕಮರಿದೆ. </p><p>ಮತ್ತೊಂದೆಡೆ 26 ವರ್ಷಗಳ ಸುದೀರ್ಘ ಅವಧಿಯ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕಮಲ ಅರಳಿದೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ 48 ಸ್ಥಾನಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದೆ. </p><p>ಎಎಪಿ 22 ಸ್ಥಾನಗಳಲ್ಲಿ ಮಾತ್ರ ಜಯ ಸಾಧಿಸಿದರೆ, ಕಾಂಗ್ರೆಸ್ಗೆ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ಇದರೊಂದಿಗೆ ದೆಹಲಿಯಲ್ಲೂ 'ಡಬಲ್ ಎಂಜಿನ್' ಸರ್ಕಾರಕ್ಕೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ.</p><p>ಚುನಾವಣೆಯಲ್ಲಿ ಎಎಪಿಯ ಘಟಾನುಘಟಿ ನಾಯಕರಾದ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸೌರಭ್ ಭಾರಧ್ವಾಜ್, ಸತ್ಯೇಂದ್ರ ಜೈನ್ ಸೋತು ನೆಲಕಚ್ಚಿದ್ದಾರೆ. ಅತ್ತ ಬಿಜೆಪಿಯ ಪರ್ವೇಜ್ ಸಾಹೀಬ್ ವರ್ಮ ಎಎಪಿ ಪಾಲಿಗೆ 'ಕಿಲ್ಲರ್' ಆಗಿ ಹೊರಹೊಮ್ಮಿದ್ದಾರೆ. </p><p>ಕಳೆದ ಐದು ವರ್ಷಗಳಲ್ಲಿ ನಡೆದ ಹಲವಾರು ಅಂಶಗಳು ಎಎಪಿಗೆ ಮುಳುವಾಗಿ ಪರಿಣಮಿಸಿತು. ಮತ್ತೊಂದೆಡೆ ಸ್ಪಷ್ಟ ಯೋಜನೆಯೊಂದಿಗೆ ರಣತಂತ್ರ ರೂಪಿಸಿರುವ ಬಿಜೆಪಿ ಅಧಿಕಾರಕ್ಕೇರುವಲ್ಲಿ ಯಶಸ್ವಿಯಾಗಿದೆ. </p>.Delhi Election Result | ಬಿಜೆಪಿಗೆ ಗದ್ದುಗೆ: ಎಎಪಿ ಮನೆಗೆ.Delhi Election Result: ಆಮ್ ಆದ್ಮಿ ಪಕ್ಷದ ಮಹಾರಥಿಗಳ ಸೋಲು. <p><strong>ಭರ್ಜರಿ ಜಯ; ಬಿಜೆಪಿಗೆ ವರದಾನವಾಗಿದ್ದೇನು?</strong></p><p>*ರಾಷ್ಟ್ರೀಯ ನಾಯಕರನ್ನು ಒಳಗೊಂಡಂತೆ ಯೋಜನಾಬದ್ಧವಾದ ಪ್ರಚಾರ, ರಣನೀತಿ</p><p>*ಎನ್ಡಿಎ ಮೈತ್ರಿಯೊಂದಿಗೆ ಪ್ರಾದೇಶಿಕವಾಗಿ ಬಿರುಸಿನ ಪ್ರಚಾರ ನಡೆಸುವಲ್ಲಿ ಯಶಸ್ವಿ</p><p>*'ಮೋದಿ ಗ್ಯಾರಂಟಿ' ಮುಂದೆ ಎಎಪಿ ಉಚಿತ ಆಫರ್ಗಳು ನೆಲಕಚ್ಚಿತು. ಮತದಾರರ ಒಲವು ಗೆದ್ದ ಬಿಜೆಪಿ. </p><p>*ಆರ್ಎಸ್ಎಸ್ ಸೇರಿದಂತೆ ಸಮಾನ ಮನಸ್ಕ ಸಂಸ್ಥೆಗಳಿಂದ ತೆರೆಮರೆಯಲ್ಲಿ ಪರಿಣಾಮಕಾರಿ ಕೆಲಸ.</p><p>*ಕೇಂದ್ರ ಬಜೆಟ್ ಎಫೆಕ್ಟ್: ಆದಾಯ ತೆರಿಗೆ ವಿನಾಯಿತಿಯೊಂದಿಗೆ ಮಧ್ಯಮ ವರ್ಗದ ಜನರನ್ನು ಓಲೈಸಲು ಯಶಸ್ವಿ. </p><p>*ದೆಹಲಿಯ ಜನರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳತ್ತ ಬಿಜೆಪಿ ಹೆಚ್ಚಿನ ಗಮನ ಕೇಂದ್ರಿಕರಿಸಿತ್ತು. ಕಳಪೆ ರಸ್ತೆ, ಅಸಮರ್ಪಕ ನೀರಿನ ಸರಬರಾಜು, ವಾಯು ಮಾಲಿನ್ಯ, ಕಾರ್ಯನಿರ್ವಹಿಸದ ಮೊಹಲ್ಲಾ ಚಿಕಿತ್ಸಾ ಕೇಂದ್ರ ಹೀಗೆ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ಹಿಡಿಯಿತು. </p>.Delhi Election Result: ‘ಪಂದ್ಯಶ್ರೇಷ್ಠ’ ಪರ್ವೇಶ್ಗೆ ಸಿಎಂ ಗಾದಿ?.Delhi Results: ಕಳೆಗುಂದಿದ ಕೇಜ್ರಿವಾಲ್ 'ಕ್ರೇಜ್'; ಎಎಪಿ ಸೋಲಿಗೆ ಕಾರಣಗಳೇನು?. <p><strong>ಹೀನಾಯ ಸೋಲು; ಎಎಪಿಗೆ ಮುಳುವಾಗಿದ್ದೇನು?</strong></p><p>*ನಿರಂತರವಾಗಿ ಭ್ರಷ್ಟಾಚಾರ ಆರೋಪ, ದೆಹಲಿ ಅಬಕಾರಿ ನೀತಿ ಹಗರಣ</p><p>*ಜೈಲು ಪಾಲಾದ ಅರವಿಂದ ಕೇಜ್ರಿವಾಲ್, ನಿಂತು ಹೋದ ಆಡಳಿತ ಚಕ್ರ</p><p>*ಕಳೆಗುಂದಿದ 'ಕೇಜ್ರಿವಾಲ್ ಬ್ರ್ಯಾಂಡ್'. ಅಬಕಾರಿ ನೀತಿ ಹಗರಣದಲ್ಲಿ ಎಎಪಿಯ ಹಲವು ನಾಯಕರು ಜೈಲು ಪಾಲಾದರು. </p><p>*ಎಎಪಿ ನಾಯಕರ ವಿರುದ್ಧ ವಿಲಾಸಿ ಜೀವನದ ಆರೋಪ. ದೆಹಲಿ ಸಿಎಂ ಅಧಿಕೃತ ಬಂಗಲೆಯ ನವೀಕರಣದಲ್ಲೂ ಭಾರಿ ಅವ್ಯವಹಾರ ಆರೋಪ.</p><p>*ಚುನಾವಣಾ ಪೂರ್ವ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲ.</p><p>*ಆಡಳಿತ ವಿಚಾರಗಳಲ್ಲಿ ಲೆಫ್ಟಿನೆಂಟ್ ಗವರ್ನರ್ ಹಾಗೂ ಕೇಂದ್ರ ಸರ್ಕಾರದ ಜೊತೆ ನಿರಂತರ ತಿಕ್ಕಾಟ.</p><p>*ನಾಗರಿಕ ಮೂಲಸೌಕರ್ಯ ವೃದ್ಧಿಯಲ್ಲಿ ವಿಫಲ. ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲೂ ನಿರೀಕ್ಷೆ ಮುಟ್ಟಲಿಲ್ಲ.</p><p>*'ಇಂಡಿಯಾ' ಮೈತ್ರಿಕೂಟದಲ್ಲಿ ಬಿರುಕು: ಕನಿಷ್ಠ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ನ ಉತ್ತಮ ಸಾಧನೆ ಎಎಪಿ ಅಭ್ಯರ್ಥಿಗಳ ಸೋಲಿಗೆ ಹೇತುವಾಯಿತು. ಲೋಕಸಭೆ ಚುನಾವಣೆಯಲ್ಲಿ 'ಇಂಡಿಯಾ' ಮೈತ್ರಿಕೂಟದ ಭಾಗವಾಗಿದ್ದ ಕಾಂಗ್ರೆಸ್-ಎಎಪಿ, ಈ ಬಾರಿ ಪರಸ್ಪರ ಮುನಿಸಿಕೊಂಡು ಚುನಾವಣೆ ಎದುರಿಸಿತ್ತು. </p>.Delhi Result ಬಿಜೆಪಿ ಮತ ಪ್ರಮಾಣ ಜಿಗಿತ; ಎಎಪಿ ಇಳಿಕೆ, ಕಾಂಗ್ರೆಸ್ಗೂ ಅಲ್ಪ ಲಾಭ.Delhi Election Result: ಆಮ್ ಆದ್ಮಿ ಪಕ್ಷದ ಮಹಾರಥಿಗಳ ಸೋಲು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>