<p><strong>ನವದೆಹಲಿ</strong>: 2024ರ ಲೋಕಸಭಾ ಚುನಾವಣೆಯಲ್ಲಿ ಪರ್ವೇಜ್ ವರ್ಮಾ ಅವರನ್ನು ತನ್ನ ‘ಆಟಗಾರ’ರ ಪಟ್ಟಿಯಿಂದಲೇ ಬಿಜೆಪಿ ಕೈಬಿಟ್ಟಿತ್ತು. ಎಂಟೇ ತಿಂಗಳಲ್ಲಿ ಭರ್ಜರಿ ಪುನರಾಗಮನ ಮಾಡಿರುವ ಅವರು ದೆಹಲಿ ರಾಜಕೀಯದಲ್ಲಿ ಅತಿ ದೊಡ್ಡ ವಿಕೆಟ್ ಪಡೆದಿದ್ದಾರೆ. ಅವರಿಗೆ ದೆಹಲಿ ಬಿಜೆಪಿ ಸರ್ಕಾರದ ನಾಯಕತ್ವ ಸಿಗುತ್ತದೆಯೇ? ಮತ್ತೊಮ್ಮೆ ನವದೆಹಲಿಯ ಶಾಸಕರಿಗೆ ಮುಖ್ಯಮಂತ್ರಿ ಗಾದಿ ದೊರಕಲಿದೆಯೇ? </p>.<p>ಹೀಗೊಂದು ಪ್ರಶ್ನೆ ದೆಹಲಿ ರಾಜಕೀಯ ಪಡಸಾಲೆಯಲ್ಲಿ ಆರಂಭವಾಗಿದೆ. 1998ರಿಂದ 2013ರವರೆಗೆ ಮೂರು ಅವಧಿಗೆ ಶೀಲಾ ದೀಕ್ಷಿತ್ ನವದೆಹಲಿ ಕ್ಷೇತ್ರದ ಶಾಸಕರಾಗಿದ್ದರು. 2013ರಲ್ಲಿ ದೀಕ್ಷಿತ್ ಅವರನ್ನು ಅರವಿಂದ ಕೇಜ್ರಿವಾಲ್ ಸೋಲಿಸಿದ್ದರು. ಅವರು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ಈ ಸಲ ಕೇಜ್ರಿವಾಲ್ ಅವರನ್ನು ವರ್ಮಾ ಮಣಿಸಿ ದೆಹಲಿ ಮುಖ್ಯಮಂತ್ರಿಯ ಹುದ್ದೆಯ ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. </p>.<p>ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಪುತ್ರ ಪರ್ವೇಜ್ ಅವರು 2014ರಿಂದ 2024ರವರೆಗೆ ಪಶ್ಚಿಮ ದೆಹಲಿಯ ಸಂಸದರಾಗಿದ್ದರು. ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿದ್ದವರು. 2024ರ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಪಕ್ಷ ಟಿಕೆಟ್ ನಿರಾಕರಿಸಿತ್ತು. ಅವರ ರಾಜಕೀಯ ಜೀವನ ಮುಗಿದು ಹೋಯಿತು ಎಂದು ಭಾವಿಸಿದವರು ಹೆಚ್ಚು. ಇದೀಗ, ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರನ್ನು ಸೋಲಿಸುವ ಮೂಲಕ ‘ಅಚ್ಚರಿ’ಯ ಪುನರಾಗಮನ ಮಾಡಿದ್ದಾರೆ.</p>.<p>ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಮುನ್ನ ಅವರು ಮೆಹ್ರೋಲಿ ಕ್ಷೇತ್ರದ ಶಾಸಕರಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಅವರು 5.7 ಲಕ್ಷ ಮತಗಳಿಂದ ಗೆದ್ದಿದ್ದರು. ಇದು ದೆಹಲಿಯ ಚುನಾವಣಾ ಇತಿಹಾಸದಲ್ಲಿಯೇ ಗರಿಷ್ಠ ಅಂತರದ ಗೆಲುವು. ಲೋಕಸಭಾ ಚುನಾವಣೆಯಲ್ಲಿ ಅವಕಾಶ ವಂಚಿತರಾದ ಸಂದರ್ಭದಲ್ಲಿ ಅವರು ಬಂಡಾಯ ಏಳಲಿಲ್ಲ. ಪಕ್ಷದ ವರಿಷ್ಠರ ತೀರ್ಮಾನವನ್ನು ಒಪ್ಪಿಕೊಂಡರು. 2024ರ ಮಾರ್ಚ್ನಿಂದಲೇ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದರು. ಎಎಪಿಯ ಮಹಾ ದಂಡನಾಯಕ ಕೇಜ್ರಿವಾಲ್ ಅವರನ್ನು ಮಣಿಸುವ ಮೂಲಕ ದೈತ್ಯ ಸಂಹಾರಿಯಾಗಿ ಹೊರಹೊಮ್ಮಿದ್ದಾರೆ. ಒಂದರ್ಥದಲ್ಲಿ ದೆಹಲಿ ಚುನಾವಣಾ ಅಖಾಡದಲ್ಲಿ ಅವರು ಈಗ ‘ಪಂದ್ಯಶ್ರೇಷ್ಠ’. </p>.<p>ವರ್ಮಾ ಅವರನ್ನು ನವದೆಹಲಿಯ ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಕೇಜ್ರಿವಾಲ್ ಅವರು ತಮ್ಮ ಕ್ಷೇತ್ರದಲ್ಲೇ ಹೆಚ್ಚು ಸಮಯ ಇರುವಂತೆ ಬಿಜೆಪಿ ನೋಡಿಕೊಂಡಿತು. ಎಎಪಿಯ ನೀತಿ ಹಾಗೂ ಶೀಷಮಹಲ್ನಲ್ಲಿ ಕೇಜ್ರಿವಾಲ್ ಅವರ ವಾಸದ ಕುರಿತು ವರ್ಮಾ ಪದೇ ಪದೇ ಪ್ರಸ್ತಾಪಿಸಿದರು. ಅವರ ಪ್ರಶ್ನೆಗಳಿಗೆ ಉತ್ತರ ಕೊಡುವುದಕ್ಕೆ ಕೇಜ್ರಿವಾಲ್ ಹೆಚ್ಚಿನ ಸಮಯ ಮೀಸಲಿಡಬೇಕಾಯಿತು. ಬಿಜೆಪಿಯ ಸಂದೇಶವನ್ನು ದೆಹಲಿಯ ಜನರಿಗೆ ತಲುಪಿಸುವುದರ ಜೊತೆಗೆ, ಎಎಪಿಯನ್ನು ಉಗ್ರವಾಗಿ ಟೀಕಿಸುವ ಮೂಲಕ ತಮ್ಮನ್ನು ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿಕೊಂಡರು. </p>.<p>ವರ್ಮಾ ಅವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಾವಿರಾರು ಮತದಾರರ ಹೆಸರನ್ನು ಕೈಬಿಡಲಾಗಿದೆ ಹಾಗೂ ಪೂರ್ವಾಂಚಲಿಗಳ ಹೆಸರನ್ನು ಸೇರ್ಪಡೆ ಮಾಡಲಾಗಿದೆ ಎಂದು ಕೇಜ್ರಿವಾಲ್ ಆರೋಪ ಮಾಡಿದರು. ಪೂರ್ವಾಂಚಲಿಗಳಿಗೆ ಎಎಪಿ ವರಿಷ್ಠ ಅವಮಾನಿಸಿದ್ದಾರೆ ಎಂದು ಬಿಜೆಪಿ ಬಿಂಬಿಸಿತು.</p>.<p>ನವದೆಹಲಿ ಕ್ಷೇತ್ರದ ಮತದಾರರಿಗೆ ಹಣ ಹಂಚಿದ ಆರೋಪಕ್ಕೆ ವರ್ಮಾ ಇತ್ತೀಚೆಗೆ ಒಳಗಾಗಿದ್ದರು. 2020ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅವರು ದ್ವೇಷ ಭಾಷಣಗಳನ್ನು ಮಾಡಿದ್ದರು. ಶಹೀನ್ ಬಾಗ್ ಪ್ರತಿಭಟನಾನಿರತರನ್ನು ಅತ್ಯಾಚಾರಿಗಳು ಹಾಗೂ ಕೊಲೆಗಾರರು ಎಂದು ಜರೆದಿದ್ದರು. ಕೇಜ್ರಿವಾಲ್ ಅವರನ್ನು ಭಯೋತ್ಪಾದಕ ಎಂದು ನಿಂದಿಸಿದ್ದರು. ಮುಸ್ಲಿಮರನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕು ಎಂದು 2022ರಲ್ಲಿ ಹೇಳಿಕೆ ನೀಡಿದ್ದರು.</p>.<p>‘ನವದೆಹಲಿ ಕ್ಷೇತ್ರದಲ್ಲಿ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಲು ಮಾನಸಿಕವಾಗಿ ಸಿದ್ಧರಾಗುವಂತೆ ಪಕ್ಷದ ವರಿಷ್ಠರು ಎರಡು ತಿಂಗಳ ಹಿಂದೆಯೇ ಸೂಚಿಸಿದ್ದರು. ನನ್ನ ಗೆಲುವಿಗೆ ಮೋದಿ ಅವರೇ ಕಾರಣ’ ಎಂದು ವರ್ಮಾ ಹೇಳಿದ್ದಾರೆ. </p>.<p><strong>ಮುಖ್ಯಮಂತ್ರಿ ಸ್ಥಾನದ ಸಂಭಾವ್ಯರು:</strong> </p><p>ಪರ್ವೇಜ್ ವರ್ಮಾ, ವಿಜೇಂದರ್ ಗುಪ್ತ, ವೀರೇಂದ್ರ ಸಚ್ದೇವ್, ಸತೀಶ್ ಉಪಾಧ್ಯಾಯ, ಅಶೀಶ್ ಸೂದ್. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: 2024ರ ಲೋಕಸಭಾ ಚುನಾವಣೆಯಲ್ಲಿ ಪರ್ವೇಜ್ ವರ್ಮಾ ಅವರನ್ನು ತನ್ನ ‘ಆಟಗಾರ’ರ ಪಟ್ಟಿಯಿಂದಲೇ ಬಿಜೆಪಿ ಕೈಬಿಟ್ಟಿತ್ತು. ಎಂಟೇ ತಿಂಗಳಲ್ಲಿ ಭರ್ಜರಿ ಪುನರಾಗಮನ ಮಾಡಿರುವ ಅವರು ದೆಹಲಿ ರಾಜಕೀಯದಲ್ಲಿ ಅತಿ ದೊಡ್ಡ ವಿಕೆಟ್ ಪಡೆದಿದ್ದಾರೆ. ಅವರಿಗೆ ದೆಹಲಿ ಬಿಜೆಪಿ ಸರ್ಕಾರದ ನಾಯಕತ್ವ ಸಿಗುತ್ತದೆಯೇ? ಮತ್ತೊಮ್ಮೆ ನವದೆಹಲಿಯ ಶಾಸಕರಿಗೆ ಮುಖ್ಯಮಂತ್ರಿ ಗಾದಿ ದೊರಕಲಿದೆಯೇ? </p>.<p>ಹೀಗೊಂದು ಪ್ರಶ್ನೆ ದೆಹಲಿ ರಾಜಕೀಯ ಪಡಸಾಲೆಯಲ್ಲಿ ಆರಂಭವಾಗಿದೆ. 1998ರಿಂದ 2013ರವರೆಗೆ ಮೂರು ಅವಧಿಗೆ ಶೀಲಾ ದೀಕ್ಷಿತ್ ನವದೆಹಲಿ ಕ್ಷೇತ್ರದ ಶಾಸಕರಾಗಿದ್ದರು. 2013ರಲ್ಲಿ ದೀಕ್ಷಿತ್ ಅವರನ್ನು ಅರವಿಂದ ಕೇಜ್ರಿವಾಲ್ ಸೋಲಿಸಿದ್ದರು. ಅವರು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ಈ ಸಲ ಕೇಜ್ರಿವಾಲ್ ಅವರನ್ನು ವರ್ಮಾ ಮಣಿಸಿ ದೆಹಲಿ ಮುಖ್ಯಮಂತ್ರಿಯ ಹುದ್ದೆಯ ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. </p>.<p>ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಪುತ್ರ ಪರ್ವೇಜ್ ಅವರು 2014ರಿಂದ 2024ರವರೆಗೆ ಪಶ್ಚಿಮ ದೆಹಲಿಯ ಸಂಸದರಾಗಿದ್ದರು. ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿದ್ದವರು. 2024ರ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಪಕ್ಷ ಟಿಕೆಟ್ ನಿರಾಕರಿಸಿತ್ತು. ಅವರ ರಾಜಕೀಯ ಜೀವನ ಮುಗಿದು ಹೋಯಿತು ಎಂದು ಭಾವಿಸಿದವರು ಹೆಚ್ಚು. ಇದೀಗ, ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರನ್ನು ಸೋಲಿಸುವ ಮೂಲಕ ‘ಅಚ್ಚರಿ’ಯ ಪುನರಾಗಮನ ಮಾಡಿದ್ದಾರೆ.</p>.<p>ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಮುನ್ನ ಅವರು ಮೆಹ್ರೋಲಿ ಕ್ಷೇತ್ರದ ಶಾಸಕರಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಅವರು 5.7 ಲಕ್ಷ ಮತಗಳಿಂದ ಗೆದ್ದಿದ್ದರು. ಇದು ದೆಹಲಿಯ ಚುನಾವಣಾ ಇತಿಹಾಸದಲ್ಲಿಯೇ ಗರಿಷ್ಠ ಅಂತರದ ಗೆಲುವು. ಲೋಕಸಭಾ ಚುನಾವಣೆಯಲ್ಲಿ ಅವಕಾಶ ವಂಚಿತರಾದ ಸಂದರ್ಭದಲ್ಲಿ ಅವರು ಬಂಡಾಯ ಏಳಲಿಲ್ಲ. ಪಕ್ಷದ ವರಿಷ್ಠರ ತೀರ್ಮಾನವನ್ನು ಒಪ್ಪಿಕೊಂಡರು. 2024ರ ಮಾರ್ಚ್ನಿಂದಲೇ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದರು. ಎಎಪಿಯ ಮಹಾ ದಂಡನಾಯಕ ಕೇಜ್ರಿವಾಲ್ ಅವರನ್ನು ಮಣಿಸುವ ಮೂಲಕ ದೈತ್ಯ ಸಂಹಾರಿಯಾಗಿ ಹೊರಹೊಮ್ಮಿದ್ದಾರೆ. ಒಂದರ್ಥದಲ್ಲಿ ದೆಹಲಿ ಚುನಾವಣಾ ಅಖಾಡದಲ್ಲಿ ಅವರು ಈಗ ‘ಪಂದ್ಯಶ್ರೇಷ್ಠ’. </p>.<p>ವರ್ಮಾ ಅವರನ್ನು ನವದೆಹಲಿಯ ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಕೇಜ್ರಿವಾಲ್ ಅವರು ತಮ್ಮ ಕ್ಷೇತ್ರದಲ್ಲೇ ಹೆಚ್ಚು ಸಮಯ ಇರುವಂತೆ ಬಿಜೆಪಿ ನೋಡಿಕೊಂಡಿತು. ಎಎಪಿಯ ನೀತಿ ಹಾಗೂ ಶೀಷಮಹಲ್ನಲ್ಲಿ ಕೇಜ್ರಿವಾಲ್ ಅವರ ವಾಸದ ಕುರಿತು ವರ್ಮಾ ಪದೇ ಪದೇ ಪ್ರಸ್ತಾಪಿಸಿದರು. ಅವರ ಪ್ರಶ್ನೆಗಳಿಗೆ ಉತ್ತರ ಕೊಡುವುದಕ್ಕೆ ಕೇಜ್ರಿವಾಲ್ ಹೆಚ್ಚಿನ ಸಮಯ ಮೀಸಲಿಡಬೇಕಾಯಿತು. ಬಿಜೆಪಿಯ ಸಂದೇಶವನ್ನು ದೆಹಲಿಯ ಜನರಿಗೆ ತಲುಪಿಸುವುದರ ಜೊತೆಗೆ, ಎಎಪಿಯನ್ನು ಉಗ್ರವಾಗಿ ಟೀಕಿಸುವ ಮೂಲಕ ತಮ್ಮನ್ನು ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿಕೊಂಡರು. </p>.<p>ವರ್ಮಾ ಅವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಾವಿರಾರು ಮತದಾರರ ಹೆಸರನ್ನು ಕೈಬಿಡಲಾಗಿದೆ ಹಾಗೂ ಪೂರ್ವಾಂಚಲಿಗಳ ಹೆಸರನ್ನು ಸೇರ್ಪಡೆ ಮಾಡಲಾಗಿದೆ ಎಂದು ಕೇಜ್ರಿವಾಲ್ ಆರೋಪ ಮಾಡಿದರು. ಪೂರ್ವಾಂಚಲಿಗಳಿಗೆ ಎಎಪಿ ವರಿಷ್ಠ ಅವಮಾನಿಸಿದ್ದಾರೆ ಎಂದು ಬಿಜೆಪಿ ಬಿಂಬಿಸಿತು.</p>.<p>ನವದೆಹಲಿ ಕ್ಷೇತ್ರದ ಮತದಾರರಿಗೆ ಹಣ ಹಂಚಿದ ಆರೋಪಕ್ಕೆ ವರ್ಮಾ ಇತ್ತೀಚೆಗೆ ಒಳಗಾಗಿದ್ದರು. 2020ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅವರು ದ್ವೇಷ ಭಾಷಣಗಳನ್ನು ಮಾಡಿದ್ದರು. ಶಹೀನ್ ಬಾಗ್ ಪ್ರತಿಭಟನಾನಿರತರನ್ನು ಅತ್ಯಾಚಾರಿಗಳು ಹಾಗೂ ಕೊಲೆಗಾರರು ಎಂದು ಜರೆದಿದ್ದರು. ಕೇಜ್ರಿವಾಲ್ ಅವರನ್ನು ಭಯೋತ್ಪಾದಕ ಎಂದು ನಿಂದಿಸಿದ್ದರು. ಮುಸ್ಲಿಮರನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕು ಎಂದು 2022ರಲ್ಲಿ ಹೇಳಿಕೆ ನೀಡಿದ್ದರು.</p>.<p>‘ನವದೆಹಲಿ ಕ್ಷೇತ್ರದಲ್ಲಿ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಲು ಮಾನಸಿಕವಾಗಿ ಸಿದ್ಧರಾಗುವಂತೆ ಪಕ್ಷದ ವರಿಷ್ಠರು ಎರಡು ತಿಂಗಳ ಹಿಂದೆಯೇ ಸೂಚಿಸಿದ್ದರು. ನನ್ನ ಗೆಲುವಿಗೆ ಮೋದಿ ಅವರೇ ಕಾರಣ’ ಎಂದು ವರ್ಮಾ ಹೇಳಿದ್ದಾರೆ. </p>.<p><strong>ಮುಖ್ಯಮಂತ್ರಿ ಸ್ಥಾನದ ಸಂಭಾವ್ಯರು:</strong> </p><p>ಪರ್ವೇಜ್ ವರ್ಮಾ, ವಿಜೇಂದರ್ ಗುಪ್ತ, ವೀರೇಂದ್ರ ಸಚ್ದೇವ್, ಸತೀಶ್ ಉಪಾಧ್ಯಾಯ, ಅಶೀಶ್ ಸೂದ್. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>