<p><strong>ಬೆಂಗಳೂರು:</strong> ಪ್ರಕೃತಿ ಸೊಬಗಿನ ಚಿಕ್ಕಮಗಳೂರು ಸುತ್ತುಮುತ್ತಲ ಕಾಫಿ ತೋಟಗಳಲ್ಲಿ ನಡೆಯುವ 9ನೇ ವರ್ಷದ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ ಇದೇ ತಿಂಗಳ 22ರಂದು ನಡೆಯಲಿದೆ. ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರಿನಿಂದ ಈ ಸ್ಪರ್ಧೆ ಆರಂಭವಾಗಲಿದ್ದು 1200ಕ್ಕೂ ಹೆಚ್ಚು ಓಟಗಾರರು ಭಾಗವಹಿಸುವ ನಿರೀಕ್ಷೆಯಿದೆ.</p>.<p>ಚಿಕ್ಕಮಗಳೂರು ಗಾಲ್ಫ್ ಕ್ಲಬ್ (ಸಿಜಿಸಿ) ಪ್ರಾಯೋಜಿಸುತ್ತಿರುವ ಈ ಮ್ಯಾರಥಾನ್ 30 ಕಿ.ಮೀ., 50 ಕಿ.ಮೀ. ಮತ್ತು 100 ಕೀ.ಮೀ. (ಹಗಲು- ರಾತ್ರಿ ಅವಧಿ) ವಿಭಾಗದಲ್ಲಿ ನಡೆಯಲಿದೆ. ಸ್ಪರ್ಧೆಗಳು ಮಲ್ಲಂದೂರು ದೇವಸ್ಥಾನ ಮೈದಾನದಿಂದ ಬೆಳಿಗ್ಗೆ 6 ಗಂಟೆಗೆ ಆರಂಭವಾಗಲಿದ್ದು, ಅಲ್ಲಿಯೇ ಕೊನೆಗೊಳ್ಳಲಿದೆ.</p>.<p>ಈ ಮ್ಯಾರಥಾನ್ ವಿಭಿನ್ನ ರೀತಿಯದಾಗಿದ್ದು, ಮಧ್ಯ ನಿರ್ದಿಷ್ಟ ತಾಣದಲ್ಲಿ ಇಂತಿಷ್ಟೇ ಅವಧಿಯಲ್ಲಿ ಗುರಿತಲುಪಬೇಕಾಗುತ್ತದೆ. ಖಾಸಗಿ ತೋಟಗಳಲ್ಲಿ ಜೀಪುಗಳು ಸಂಚರಿಸುವಂಥ ಹಾದಿಯಲ್ಲಿ ಓಟಗಾರರು ಓಡಬೇಕಾಗುತ್ತದೆ. ಐಟಿಆರ್ಎ (ಇಂಟರ್ನ್ಯಾಷನಲ್ ಟ್ರೇಲ್ ರನ್ನಿಂಗ್ ಅಸೋಸಿಯೇಷನ್) ಮಾನ್ಯತೆಯನ್ನು ಈ ಮ್ಯಾರಥಾನ್ ಪಡೆದಿದೆ.</p>.<p>‘ಪಶ್ಚಿಮ ಘಟ್ಟ ಉಳಿಸಲು ಓಟ’ ಈ ಬಾರಿಯ ಧ್ಯೇಯವಾಕ್ಯವಾಗಿದೆ. ಜಿಲ್ಲೆ ಆರು ನದಿಗಳ (ತುಂಗಾ, ಭದ್ರಾ, ನೇತ್ರಾವತಿ, ಹೇಮಾವತಿ, ಯಗದಿ ಮತ್ತು ವೇದಾವತಿ) ಉಗಮ ಸ್ಥಾನವಾಗಿದ್ದು, ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಮ್ಯಾರಥಾನ್ಗೆ ಕೈಜೋಡಿಸಿದ್ದೇವೆ’ ಎಂದು ಸಿಜಿಸಿ ಸ್ಥಾಪಕರಾದ ಎ.ಬಿ.ಸುದರ್ಶನ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪ್ರಕೃತಿ ಸೊಬಗಿನ ಚಿಕ್ಕಮಗಳೂರು ಸುತ್ತುಮುತ್ತಲ ಕಾಫಿ ತೋಟಗಳಲ್ಲಿ ನಡೆಯುವ 9ನೇ ವರ್ಷದ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ ಇದೇ ತಿಂಗಳ 22ರಂದು ನಡೆಯಲಿದೆ. ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರಿನಿಂದ ಈ ಸ್ಪರ್ಧೆ ಆರಂಭವಾಗಲಿದ್ದು 1200ಕ್ಕೂ ಹೆಚ್ಚು ಓಟಗಾರರು ಭಾಗವಹಿಸುವ ನಿರೀಕ್ಷೆಯಿದೆ.</p>.<p>ಚಿಕ್ಕಮಗಳೂರು ಗಾಲ್ಫ್ ಕ್ಲಬ್ (ಸಿಜಿಸಿ) ಪ್ರಾಯೋಜಿಸುತ್ತಿರುವ ಈ ಮ್ಯಾರಥಾನ್ 30 ಕಿ.ಮೀ., 50 ಕಿ.ಮೀ. ಮತ್ತು 100 ಕೀ.ಮೀ. (ಹಗಲು- ರಾತ್ರಿ ಅವಧಿ) ವಿಭಾಗದಲ್ಲಿ ನಡೆಯಲಿದೆ. ಸ್ಪರ್ಧೆಗಳು ಮಲ್ಲಂದೂರು ದೇವಸ್ಥಾನ ಮೈದಾನದಿಂದ ಬೆಳಿಗ್ಗೆ 6 ಗಂಟೆಗೆ ಆರಂಭವಾಗಲಿದ್ದು, ಅಲ್ಲಿಯೇ ಕೊನೆಗೊಳ್ಳಲಿದೆ.</p>.<p>ಈ ಮ್ಯಾರಥಾನ್ ವಿಭಿನ್ನ ರೀತಿಯದಾಗಿದ್ದು, ಮಧ್ಯ ನಿರ್ದಿಷ್ಟ ತಾಣದಲ್ಲಿ ಇಂತಿಷ್ಟೇ ಅವಧಿಯಲ್ಲಿ ಗುರಿತಲುಪಬೇಕಾಗುತ್ತದೆ. ಖಾಸಗಿ ತೋಟಗಳಲ್ಲಿ ಜೀಪುಗಳು ಸಂಚರಿಸುವಂಥ ಹಾದಿಯಲ್ಲಿ ಓಟಗಾರರು ಓಡಬೇಕಾಗುತ್ತದೆ. ಐಟಿಆರ್ಎ (ಇಂಟರ್ನ್ಯಾಷನಲ್ ಟ್ರೇಲ್ ರನ್ನಿಂಗ್ ಅಸೋಸಿಯೇಷನ್) ಮಾನ್ಯತೆಯನ್ನು ಈ ಮ್ಯಾರಥಾನ್ ಪಡೆದಿದೆ.</p>.<p>‘ಪಶ್ಚಿಮ ಘಟ್ಟ ಉಳಿಸಲು ಓಟ’ ಈ ಬಾರಿಯ ಧ್ಯೇಯವಾಕ್ಯವಾಗಿದೆ. ಜಿಲ್ಲೆ ಆರು ನದಿಗಳ (ತುಂಗಾ, ಭದ್ರಾ, ನೇತ್ರಾವತಿ, ಹೇಮಾವತಿ, ಯಗದಿ ಮತ್ತು ವೇದಾವತಿ) ಉಗಮ ಸ್ಥಾನವಾಗಿದ್ದು, ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಮ್ಯಾರಥಾನ್ಗೆ ಕೈಜೋಡಿಸಿದ್ದೇವೆ’ ಎಂದು ಸಿಜಿಸಿ ಸ್ಥಾಪಕರಾದ ಎ.ಬಿ.ಸುದರ್ಶನ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>