‘ಆನ್ಲೈನ್ನ ಜತೆಗೆ ಹೊರಗಡೆಯೂ ಕಾಂಗ್ರೆಸ್ ಮೇಲೆ ನಕಾರಾತ್ಮಕ ಅಭಿಪ್ರಾಯಗಳನ್ನು ಬಹಳ ಪರಿಣಾಮಕಾರಿಯಾಗಿ ಸೃಷ್ಟಿಸಲಾಯಿತು. ಕ್ಷೇತ್ರದ ಹೊರಗಿನ ಜನರಿಗೆ ಪರಿಣಾಮಗಳು ಮಾತ್ರ ಗೋಚರಿಸುತ್ತವೆ. 2–ಜಿ, ಕಲ್ಲಿದ್ದಲು, ಕಾಮನ್ವೆಲ್ತ್ ಕ್ರೀಡಾಕೂಟ ಹಗರಣ, ರಾಬರ್ಟ್ ವಾದ್ರಾ, ಸೋನಿಯಾ, ಚಿದಂಬರಂ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣಗಳನ್ನು ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಬಳಸಲಾಯಿತು.ಮನಮೋಹನ್ ಸಿಂಗ್ ಅವರನ್ನು ದುರ್ಬಲ ನಾಯಕ ಎಂಬಂತೆ ಚಿತ್ರಿಸಿದ್ದೂ ಇದಕ್ಕೊಂದು ನಿದರ್ಶನ’ ಎನ್ನುತ್ತಾರೆ ಅವರು.