ಅಂತ್ಯಸಂಸ್ಕಾರ ನಡೆಸದೇ ಇರುವ ನಿರ್ಧಾರವನ್ನು ಕುಟುಂಬಸ್ಥರು ತೆಗೆದುಕೊಳ್ಳುತ್ತಲೇ ಲಖನೌ ಐಜಿಪಿ ಲಕ್ಷ್ಮಿ ಸಿಂಗ್ ಟಿಕುನಿಯಾಕ್ಕೆ ದೌಡಾಯಿಸಿದರು. ಮೃತ ರೈತ ನಚ್ಚತಾರ್ ಸಿಂಗ್ ಮನೆಗೆ ತೆರಳಿದ ಅವರು, ಈ ವಿಷಯವಾಗಿ ಕುಟುಂಬಸ್ಥರ ಜೊತೆಗೆ ಚರ್ಚೆ ನಡೆಸಿದರು. ಮೃತ ರೈತನ ಮನೆಯ ಬಳಿ ಭಾರಿ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು ಎಂದು ವರದಿಯಾಗಿದೆ.