<p><strong>ಲಕ್ನೋ</strong>: ಚಿರತೆಯೊಂದರಿಂದ ತಂದೆಯೊಬ್ಬ ಮಗನನ್ನು ಕಾಪಾಡಿದ ಘಟನೆ ಉತ್ತರ ಪ್ರದೇಶದ ಲಖಿಂಪುರ್ ವ್ಯಾಪ್ತಿಯ ದುದ್ವಾ ಹುಲಿ ಸಂರಕ್ಷಿತಾರಣ್ಯದಲ್ಲಿ ನಡೆದಿರುವುದು ವರದಿಯಾಗಿದೆ.</p>.<p>ಚಿರತೆಯಿಂದ ದಾಳಿಗೊಳಗಾದ ಬಾಲಕನನ್ನು ಸಂದೀಪ್ (14) ಎಂದು ಗುರುತಿಸಲಾಗಿದೆ.</p>.<p>ದುದ್ವಾ ಅರಣ್ಯ ವ್ಯಾಪ್ತಿಯ ಹಳ್ಳಿಯಲ್ಲಿ ವಾಸವಾಗಿದ್ದ ಬಾಲಕ ಮನೆಯ ಬಳಿ ನಿಂತಿದ್ದಾಗ ಚಿರತೆಯೊಂದು ದಾಳಿ ಮಾಡಿ ಅವನನ್ನು ಹೊತ್ತೊಯ್ಯಲು ನೋಡಿದೆ. ಕೂಡಲೇ ಚಿರತೆ ಮೇಲೆ ದಾಳಿ ಮಾಡಿದ ಸಂದೀಪ್ ತಂದೆ ರಾಧೆ ಯಾದವ್, ಚಿರತೆಯಿಂದ ಮಗನನ್ನು ಕಾಪಾಡಲು ಯಶಸ್ವಿಯಾಗಿದ್ದಾರೆ.</p>.<p>‘ಬಾಲಕನನ್ನು ಸದ್ಯ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಗಂಭೀರ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದಾನೆ‘ ಎಂದು ವೈದ್ಯರು ತಿಳಿಸಿದ್ದಾರೆ.</p>.<p>‘ಇದೇ ಗ್ರಾಮದಲ್ಲಿ ಕಳೆದ ಒಂದು ವಾರದ ಹಿಂದೆ ವ್ಯಕ್ತಿಯೊಬ್ಬನನ್ನು ಚಿರತೆ ಹೊತ್ತೊಯ್ದಿತ್ತು. ಅದೇ ಚಿರತೆ ಮತ್ತೆ ಮಾನವರ ಮೇಲೆ ದಾಳಿ ಮಾಡಿರಬಹುದು. ಚಿರತೆ ಸೆರೆಗಾಗಿ ಕಾರ್ಯಾಚರಣೆ ಆರಂಭಿಸಲಾಗುವುದು‘ ಎಂದು ದುದ್ವಾ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.</p>.<p><strong>ಇದನ್ನೂ ಓದಿ:<a href="https://www.prajavani.net/entertainment/other-entertainment/actress-nikita-rawal-robbed-of-rs-7-lakh-at-gunpoint-in-delhi-866748.html" target="_blank">ಬಾಲಿವುಡ್ ನಟಿ ನಿಖಿತಾ ರಾವಲ್ಗೆ ಗನ್ ತೋರಿಸಿ ₹7ಲಕ್ಷ ದೋಚಿದ ದರೋಡೆಕೋರರು</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಕ್ನೋ</strong>: ಚಿರತೆಯೊಂದರಿಂದ ತಂದೆಯೊಬ್ಬ ಮಗನನ್ನು ಕಾಪಾಡಿದ ಘಟನೆ ಉತ್ತರ ಪ್ರದೇಶದ ಲಖಿಂಪುರ್ ವ್ಯಾಪ್ತಿಯ ದುದ್ವಾ ಹುಲಿ ಸಂರಕ್ಷಿತಾರಣ್ಯದಲ್ಲಿ ನಡೆದಿರುವುದು ವರದಿಯಾಗಿದೆ.</p>.<p>ಚಿರತೆಯಿಂದ ದಾಳಿಗೊಳಗಾದ ಬಾಲಕನನ್ನು ಸಂದೀಪ್ (14) ಎಂದು ಗುರುತಿಸಲಾಗಿದೆ.</p>.<p>ದುದ್ವಾ ಅರಣ್ಯ ವ್ಯಾಪ್ತಿಯ ಹಳ್ಳಿಯಲ್ಲಿ ವಾಸವಾಗಿದ್ದ ಬಾಲಕ ಮನೆಯ ಬಳಿ ನಿಂತಿದ್ದಾಗ ಚಿರತೆಯೊಂದು ದಾಳಿ ಮಾಡಿ ಅವನನ್ನು ಹೊತ್ತೊಯ್ಯಲು ನೋಡಿದೆ. ಕೂಡಲೇ ಚಿರತೆ ಮೇಲೆ ದಾಳಿ ಮಾಡಿದ ಸಂದೀಪ್ ತಂದೆ ರಾಧೆ ಯಾದವ್, ಚಿರತೆಯಿಂದ ಮಗನನ್ನು ಕಾಪಾಡಲು ಯಶಸ್ವಿಯಾಗಿದ್ದಾರೆ.</p>.<p>‘ಬಾಲಕನನ್ನು ಸದ್ಯ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಗಂಭೀರ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದಾನೆ‘ ಎಂದು ವೈದ್ಯರು ತಿಳಿಸಿದ್ದಾರೆ.</p>.<p>‘ಇದೇ ಗ್ರಾಮದಲ್ಲಿ ಕಳೆದ ಒಂದು ವಾರದ ಹಿಂದೆ ವ್ಯಕ್ತಿಯೊಬ್ಬನನ್ನು ಚಿರತೆ ಹೊತ್ತೊಯ್ದಿತ್ತು. ಅದೇ ಚಿರತೆ ಮತ್ತೆ ಮಾನವರ ಮೇಲೆ ದಾಳಿ ಮಾಡಿರಬಹುದು. ಚಿರತೆ ಸೆರೆಗಾಗಿ ಕಾರ್ಯಾಚರಣೆ ಆರಂಭಿಸಲಾಗುವುದು‘ ಎಂದು ದುದ್ವಾ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.</p>.<p><strong>ಇದನ್ನೂ ಓದಿ:<a href="https://www.prajavani.net/entertainment/other-entertainment/actress-nikita-rawal-robbed-of-rs-7-lakh-at-gunpoint-in-delhi-866748.html" target="_blank">ಬಾಲಿವುಡ್ ನಟಿ ನಿಖಿತಾ ರಾವಲ್ಗೆ ಗನ್ ತೋರಿಸಿ ₹7ಲಕ್ಷ ದೋಚಿದ ದರೋಡೆಕೋರರು</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>