ಅಸ್ತಮಾ ರೋಗಕ್ಕೆ ಹೈದರಾಬಾದ್ನ ಬತಿನಿ ಕುಟುಂಬ ಮದ್ದಾಗಿ ನೀಡುವ 'ಮೀನು ಪ್ರಸಾದ' ವಿತರಣೆ ಶುಕ್ರವಾರ ಹೈದರಾಬಾದ್ನ ವಸ್ತುಪ್ರದರ್ಶನ ಮೈದಾನದಲ್ಲಿ ಆರಂಭವಾಯಿತು.
ಎಎಫ್ಪಿ
ಅಸ್ತಮಾ ರೋಗಕ್ಕೆ ಹೈದರಾಬಾದ್ನ ಬತಿನಿ ಕುಟುಂಬ ಮದ್ದಾಗಿ ನೀಡುವ 'ಮೀನು ಪ್ರಸಾದ' ವಿತರಣೆ ಶುಕ್ರವಾರ ಹೈದರಾಬಾದ್ನ ವಸ್ತುಪ್ರದರ್ಶನ ಮೈದಾನದಲ್ಲಿ ಆರಂಭವಾಯಿತು.
ಎಎಫ್ಪಿ
ADVERTISEMENT
ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಪ್ರಸಾದ ವಿತರಣೆ ಮೂರು ವರ್ಷಗಳ ನಂತರ ಇದೇ ಮೊದಲ ಬಾರಿಗೆ ನಡೆಯುತ್ತಿದೆ.
ಪಿಟಿಐ
ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಪ್ರಸಾದ ವಿತರಣೆ ಮೂರು ವರ್ಷಗಳ ನಂತರ ಇದೇ ಮೊದಲ ಬಾರಿಗೆ ನಡೆಯುತ್ತಿದೆ.
ಪಿಟಿಐ
'ಮೀನು ಪ್ರಸಾದ' ವಿತರಣೆಗೆ ಚಾಲನೆ ನೀಡಿದ ತೆಲಂಗಾಣ ಪಶುಸಂಗೋಪನಾ ಸಚಿವ ತಲಸಾನಿ ಶ್ರೀನಿವಾಸ್ ಯಾದವ್, ರಾಜ್ಯ ಸರ್ಕಾರವು ಸಮಾರಂಭಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ ಎಂದು ಹೇಳಿದ್ದಾರೆ.
ಎಎಫ್ಪಿ
'ಮೀನು ಪ್ರಸಾದ' ವಿತರಣೆಗೆ ಚಾಲನೆ ನೀಡಿದ ತೆಲಂಗಾಣ ಪಶುಸಂಗೋಪನಾ ಸಚಿವ ತಲಸಾನಿ ಶ್ರೀನಿವಾಸ್ ಯಾದವ್, ರಾಜ್ಯ ಸರ್ಕಾರವು ಸಮಾರಂಭಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ ಎಂದು ಹೇಳಿದ್ದಾರೆ.
ಎಎಫ್ಪಿ
ಹಲವು ರಾಜ್ಯಗಳಿಂದ ಬರುವ ಲಕ್ಷಾಂತರ ಜನರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಂಡಿದೆ. ಬತಿನಿ ಹರಿನಾಥಗೌಡ ಅವರ ಕುಟುಂಬಸ್ಥರು ನೀಡುವ ‘ಮೀನು ಪ್ರಸಾದ’ದಲ್ಲಿ ಜನರಿಗೆ ಅಪಾರ ನಂಬಿಕೆ ಇದೆ ಎಂದು ಸಚಿವ ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ.
ಎಎಫ್ಪಿ
ಹಲವು ರಾಜ್ಯಗಳಿಂದ ಬರುವ ಲಕ್ಷಾಂತರ ಜನರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಂಡಿದೆ. ಬತಿನಿ ಹರಿನಾಥಗೌಡ ಅವರ ಕುಟುಂಬಸ್ಥರು ನೀಡುವ ‘ಮೀನು ಪ್ರಸಾದ’ದಲ್ಲಿ ಜನರಿಗೆ ಅಪಾರ ನಂಬಿಕೆ ಇದೆ ಎಂದು ಸಚಿವ ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ.
ಎಎಫ್ಪಿ
ಸುಮಾರು 100 ವರ್ಷಗಳಿಂದ ಬತಿನಿ ಕುಟುಂಬ ಪ್ರತಿ ವರ್ಷದ 'ಮೃಗಶಿರ ಕಾರ್ತಿ'ಯ ದಿನದಂದು 'ಮೀನು ಪ್ರಸಾದ' (ಮೂರ್ರೆಲ್ ಮೀನು ಮತ್ತು ಗಿಡಮೂಲಿಕೆಗಳನ್ನು ಒಳಗೊಂಡ ಹಿಟ್ಟು) ವಿತರಿಸುತ್ತದೆ.
ಪಿಟಿಐ
ಸುಮಾರು 100 ವರ್ಷಗಳಿಂದ ಬತಿನಿ ಕುಟುಂಬ ಪ್ರತಿ ವರ್ಷದ 'ಮೃಗಶಿರ ಕಾರ್ತಿ'ಯ ದಿನದಂದು 'ಮೀನು ಪ್ರಸಾದ' (ಮೂರ್ರೆಲ್ ಮೀನು ಮತ್ತು ಗಿಡಮೂಲಿಕೆಗಳನ್ನು ಒಳಗೊಂಡ ಹಿಟ್ಟು) ವಿತರಿಸುತ್ತದೆ.
ಪಿಟಿಐ
'ಮೀನು ಪ್ರಸಾದ'ದ ಸೂತ್ರವನ್ನು ಒಬ್ಬ ಪವಾಡ ಪುರುಷ ಕುಟುಂಬದ ಹಿರಿಯರಿಗೆ ತಿಳಿಸಿಹೋಗಿದ್ದಾರೆ ಎಂಬ ನಂಬಿಕೆ ಜನಜನಿತವಾಗಿದೆ.
ಎಎಫ್ಪಿ
'ಮೀನು ಪ್ರಸಾದ'ದ ಸೂತ್ರವನ್ನು ಒಬ್ಬ ಪವಾಡ ಪುರುಷ ಕುಟುಂಬದ ಹಿರಿಯರಿಗೆ ತಿಳಿಸಿಹೋಗಿದ್ದಾರೆ ಎಂಬ ನಂಬಿಕೆ ಜನಜನಿತವಾಗಿದೆ.
ಎಎಫ್ಪಿ
‘ಮೀನಿನ ಪ್ರಸಾದ’ದಲ್ಲಿನ ಔಷಧೀಯ ಗುಣಗಳನ್ನು ವಿಜ್ಞಾನಿಗಳು, ವಿಚಾರವಾದಿಗಳು ಮತ್ತು ಇತರರು ಪ್ರಶ್ನೆ ಕೂಡ ಮಾಡಿದ್ದಾರೆ. ಆದರೆ, ‘ಪ್ರಸಾದ’ ಸ್ವೀಕರಿಸಲು ಪ್ರತಿ ವರ್ಷ ಸಾವಿರಾರು ಜನರು ಹೈದರಾಬಾದ್ಗೆ ಆಗಮಿಸುತ್ತಾರೆ.ಎಎಫ್ಪಿ
‘ಮೀನಿನ ಪ್ರಸಾದ’ದಲ್ಲಿನ ಔಷಧೀಯ ಗುಣಗಳನ್ನು ವಿಜ್ಞಾನಿಗಳು, ವಿಚಾರವಾದಿಗಳು ಮತ್ತು ಇತರರು ಪ್ರಶ್ನೆ ಕೂಡ ಮಾಡಿದ್ದಾರೆ. ಆದರೆ, ‘ಪ್ರಸಾದ’ ಸ್ವೀಕರಿಸಲು ಪ್ರತಿ ವರ್ಷ ಸಾವಿರಾರು ಜನರು ಹೈದರಾಬಾದ್ಗೆ ಆಗಮಿಸುತ್ತಾರೆ.