ಪಕ್ಷದ ದಿಗ್ಗಜ ನಾಯಕ ಕೆ. ಕರುಣಾಕರನ್ ನಿಧನದ ನಂತರ ಕೇರಳದಲ್ಲಿ ಕಾಂಗ್ರೆಸ್ ಪತನ ಆರಂಭವಾಗಿದೆ. ಕಾಂಗ್ರೆಸ್ ತೊರೆದವರಿಂದ ಪಕ್ಷಕ್ಕೆ ಧಕ್ಕೆಯಾಗುವುದಿಲ್ಲ ಎಂಬುದು ಕೆಲ ಕಾಂಗ್ರೆಸ್ ಮುಖಂಡರ ಅಭಿಪ್ರಾಯವಾಗಿದೆ. ಆದರೆ, ಇದು ಆರಂಭವಷ್ಟೇ ಎಂದು ಅವರಿಗೆ ಹೇಳಬಯಸುವೆ. ಶೀಘ್ರದಲ್ಲೇ ರಾಜ್ಯದ 14 ಜಿಲ್ಲೆಗಳ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಯತ್ತ ಹರಿದು ಬರಲಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯು ಉತ್ತಮ ಫಲಿತಾಂಶ ಪಡೆಯಲಿದೆ ಎಂದು ಥಂಪನೂರ್ ಸತೀಶ್ ಹೇಳಿದರು.