ಭುವನೇಶ್ವರ: ಒಡಿಶಾದ ಮಾಜಿ ಶಾಸಕ ಪೂರ್ಣಚಂದ್ರ ಸೇಠಿ ಅವರು ಆಡಳಿತಾರೂಢ ಬಿಜು ಜನತಾ ದಳವನ್ನು (ಬಿಜೆಡಿ) ತೊರೆದಿದ್ದಾರೆ.
ದಲಿತ ಮುಖಂಡರಾದ ಪೂರ್ಣಚಂದ್ರ ಅವರು ಗಂಜಂ ಜಿಲ್ಲೆಯ ಖಲ್ಲಿಕೋಟ್ ಕ್ಷೇತ್ರದಿಂದ ಎರಡು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ರಾಜೀನಾಮೆ ಪತ್ರವನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ.
ಪಕ್ಷದಲ್ಲಿ ನನ್ನನ್ನು ಮೂಲೆಗುಂಪು ಮಾಡಲಾಗಿದೆ ಎಂದು ಅವರು ಆರೋಪಿಸಿದರು.