<p>ಪಣಜಿ: ಕ್ರೂರ ಎಂದು ಘೋಷಿಸಿರುವ ಪ್ರಾಣಿಗಳನ್ನು ಸಾಕುವುದು, ಆಮದು ಮಾಡಿಕೊಳ್ಳುವುದು ಹಾಗೂ ಅವುಗಳ ಸಂತಾನಾಭಿವೃದ್ಧಿ ಮಾಡಿಸುವುದನ್ನು ನಿಷೇಧಿಸುವ ಮಸೂದೆಯನ್ನು ಗೋವಾ ವಿಧಾನಸಭೆಯು ಬುಧವಾರ ಅಂಗೀಕರಿಸಿತು. </p>.<p>ಈ ಮಸೂದೆಯು, ಯಾವುದೇ ವರ್ಗದ ಅಥವಾ ತಳಿಯ ಪ್ರಾಣಿಗಳನ್ನು ‘ಕ್ರೂರ’ ಎಂದು ಘೋಷಿಸುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತದೆ. </p>.<p>‘ಪಿಟ್ಬುಲ್ ಹಾಗೂ ರಾಟ್ವೀಲರ್ ತಳಿಯ ನಾಯಿಗಳು ಮಕ್ಕಳಿಗೆ ಕಚ್ಚುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾದ ಕಾರಣ ಸರ್ಕಾರವು ‘ಪ್ರಾಣಿ ಸಂತಾನೋತ್ಪತ್ತಿ ಹಾಗೂ ಸಾಕಾಣಿಕೆ ಮಸೂದೆ– 2025’ಯನ್ನು ತಂದಿದೆ’ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು. </p>.<p>ನಿಯಮವನ್ನು ಉಲ್ಲಂಘಿಸಿದರೆ 15 ದಿನಗಳಿಂದ ಮೂರು ತಿಂಗಳವರೆಗೆ ಜೈಲು ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಲಾಗುತ್ತದೆ. </p>.<p>ಸದ್ಯ ರಾಜ್ಯದಲ್ಲಿ ಇಂತಹ ಪ್ರಾಣಿಗಳನ್ನು ಸಾಕುತ್ತಿರುವ ಜನರು 30 ದಿನಗಳ ಒಳಗೆ ಪಶು ಸಂಗೋಪನೆ ಇಲಾಖೆಗೆ ಮಾಹಿತಿ ನೀಡಬೇಕು. 60 ದಿನಗಳ ಒಳಗಾಗಿ ಆ ಪ್ರಾಣಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸಬೇಕು ಎಂದು ಮಸೂದೆಯಲ್ಲಿದೆ. </p>.<p>ಕ್ರೂರ ಪ್ರಾಣಿಗಳಿಂದ ಗಾಯಗೊಂಡ ಹಾಗೂ ಸಾವಿಗೀಡಾದ ಪ್ರಕರಣಗಳಲ್ಲಿ ಈ ಮಸೂದೆಯಡಿ ಪರಿಹಾರ ಒದಗಿಸಲಾಗುತ್ತದೆ. ಘಟನೆ ನಡೆದ 6 ತಿಂಗಳ ಒಳಗಾಗಿ ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. </p>.<p>ಮಸೂದೆ ಕುರಿತು ವಿವರವಾದ ಚರ್ಚೆ ನಡೆಸಬೇಕು ಎಂದು ವಿರೋಧ ಪಕ್ಷದ ನಾಯಕರು ಆಗ್ರಹಿಸಿದರು. ಇದನ್ನು ತಳ್ಳಿ ಹಾಕಿದ ಸಾವಂತ್, ‘ರಾಜ್ಯದ ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಮಸೂದೆಯನ್ನು ರೂಪಿಸಲಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಣಜಿ: ಕ್ರೂರ ಎಂದು ಘೋಷಿಸಿರುವ ಪ್ರಾಣಿಗಳನ್ನು ಸಾಕುವುದು, ಆಮದು ಮಾಡಿಕೊಳ್ಳುವುದು ಹಾಗೂ ಅವುಗಳ ಸಂತಾನಾಭಿವೃದ್ಧಿ ಮಾಡಿಸುವುದನ್ನು ನಿಷೇಧಿಸುವ ಮಸೂದೆಯನ್ನು ಗೋವಾ ವಿಧಾನಸಭೆಯು ಬುಧವಾರ ಅಂಗೀಕರಿಸಿತು. </p>.<p>ಈ ಮಸೂದೆಯು, ಯಾವುದೇ ವರ್ಗದ ಅಥವಾ ತಳಿಯ ಪ್ರಾಣಿಗಳನ್ನು ‘ಕ್ರೂರ’ ಎಂದು ಘೋಷಿಸುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತದೆ. </p>.<p>‘ಪಿಟ್ಬುಲ್ ಹಾಗೂ ರಾಟ್ವೀಲರ್ ತಳಿಯ ನಾಯಿಗಳು ಮಕ್ಕಳಿಗೆ ಕಚ್ಚುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾದ ಕಾರಣ ಸರ್ಕಾರವು ‘ಪ್ರಾಣಿ ಸಂತಾನೋತ್ಪತ್ತಿ ಹಾಗೂ ಸಾಕಾಣಿಕೆ ಮಸೂದೆ– 2025’ಯನ್ನು ತಂದಿದೆ’ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು. </p>.<p>ನಿಯಮವನ್ನು ಉಲ್ಲಂಘಿಸಿದರೆ 15 ದಿನಗಳಿಂದ ಮೂರು ತಿಂಗಳವರೆಗೆ ಜೈಲು ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಲಾಗುತ್ತದೆ. </p>.<p>ಸದ್ಯ ರಾಜ್ಯದಲ್ಲಿ ಇಂತಹ ಪ್ರಾಣಿಗಳನ್ನು ಸಾಕುತ್ತಿರುವ ಜನರು 30 ದಿನಗಳ ಒಳಗೆ ಪಶು ಸಂಗೋಪನೆ ಇಲಾಖೆಗೆ ಮಾಹಿತಿ ನೀಡಬೇಕು. 60 ದಿನಗಳ ಒಳಗಾಗಿ ಆ ಪ್ರಾಣಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸಬೇಕು ಎಂದು ಮಸೂದೆಯಲ್ಲಿದೆ. </p>.<p>ಕ್ರೂರ ಪ್ರಾಣಿಗಳಿಂದ ಗಾಯಗೊಂಡ ಹಾಗೂ ಸಾವಿಗೀಡಾದ ಪ್ರಕರಣಗಳಲ್ಲಿ ಈ ಮಸೂದೆಯಡಿ ಪರಿಹಾರ ಒದಗಿಸಲಾಗುತ್ತದೆ. ಘಟನೆ ನಡೆದ 6 ತಿಂಗಳ ಒಳಗಾಗಿ ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. </p>.<p>ಮಸೂದೆ ಕುರಿತು ವಿವರವಾದ ಚರ್ಚೆ ನಡೆಸಬೇಕು ಎಂದು ವಿರೋಧ ಪಕ್ಷದ ನಾಯಕರು ಆಗ್ರಹಿಸಿದರು. ಇದನ್ನು ತಳ್ಳಿ ಹಾಕಿದ ಸಾವಂತ್, ‘ರಾಜ್ಯದ ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಮಸೂದೆಯನ್ನು ರೂಪಿಸಲಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>