<p><strong>ನವದೆಹಲಿ:</strong> ದೇಶದ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ತೀವ್ರ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಜಿಆರ್ಎಪಿ–3ರ (ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲ್ಯಾನ್) ಅಡಿಯಲ್ಲಿ ಕಠಿಣ ಕ್ರಮಗಳನ್ನು ಇಂದಿನಿಂದ ಮತ್ತೆ ಜಾರಿಗೊಳಿಸಲಾಗಿದೆ. </p><p>ಜಿಆರ್ಎಪಿ–3ರ ಅಡಿಯಲ್ಲಿ ಎಲ್ಲಾ ಕ್ರಮಗಳನ್ನು ತಕ್ಷಣವೇ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ರಚಿಸಿರುವ ವಾಯು ಗುಣಮಟ್ಟ ಸಮಿತಿ ತಿಳಿಸಿರುವುದಾಗಿ ಸುದ್ದಿಸಂಸ್ಥೆ ‘ಎಎನ್ಐ’ ವರದಿ ಮಾಡಿದೆ. </p><p>ಚಳಿಗಾಲದಲ್ಲಿ ಅನುಸರಿಸುವ ಮಾಲಿನ್ಯ ನಿಯಂತ್ರಣ ಕ್ರಮಗಳ ಅಡಿಯಲ್ಲಿ ಹೊರಡಿಸಿದ್ದ ಮೂರು ಮತ್ತು ನಾಲ್ಕನೆಯ ಹಂತಗಳ ನಿರ್ಬಂಧಗಳನ್ನು ವಾಯು ಗುಣಮಟ್ಟ ಸಮಿತಿ ಈಚೆಗೆ ಹಿಂಪಡೆದಿತ್ತು. ಇದರಿಂದಾಗಿ ನಿರ್ಬಂಧಗಳನ್ನು ಜಿಆರ್ಎಪಿ ಎರಡನೆಯ ಹಂತಕ್ಕೆ ತಗ್ಗಿಸಿದ್ದು, ಕಠಿಣವಾದ ಕ್ರಮಗಳನ್ನು ಹಿಂಪಡೆಯಲಾಗಿತ್ತು. </p><p>ವಾಯು ಗುಣಮಟ್ಟ ಸೂಚ್ಯಂಕವು ಸುಧಾರಿಸಿದ ಕಾರಣಕ್ಕೆ, ಜಿಆರ್ಎಪಿ–4 ನಿರ್ಬಂಧಗಳನ್ನು ಎರಡನೆಯ ಹಂತಕ್ಕೆ ಸಡಿಲಿಸಲು ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ (ಸಿಎಕ್ಯೂಎಂ) ಸುಪ್ರೀಂ ಕೋರ್ಟ್ ಸಮ್ಮತಿ ನೀಡಿತ್ತು. </p><p>ವಾಯು ಗುಣಮಟ್ಟ ಸೂಚ್ಯಂಕವು 350ರ ಗಡಿಯನ್ನು ದಾಟಿದರೆ ಮಾತ್ರ ಮೂರನೆಯ ಹಂತದ ನಿರ್ಬಂಧಗಳನ್ನು ಜಾರಿಗೆ ತರುವಂತೆ ಸಿಎಕ್ಯೂಎಂಗೆ ಕೋರ್ಟ್ ಸೂಚನೆ ನೀಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದೇಶದ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ತೀವ್ರ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಜಿಆರ್ಎಪಿ–3ರ (ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲ್ಯಾನ್) ಅಡಿಯಲ್ಲಿ ಕಠಿಣ ಕ್ರಮಗಳನ್ನು ಇಂದಿನಿಂದ ಮತ್ತೆ ಜಾರಿಗೊಳಿಸಲಾಗಿದೆ. </p><p>ಜಿಆರ್ಎಪಿ–3ರ ಅಡಿಯಲ್ಲಿ ಎಲ್ಲಾ ಕ್ರಮಗಳನ್ನು ತಕ್ಷಣವೇ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ರಚಿಸಿರುವ ವಾಯು ಗುಣಮಟ್ಟ ಸಮಿತಿ ತಿಳಿಸಿರುವುದಾಗಿ ಸುದ್ದಿಸಂಸ್ಥೆ ‘ಎಎನ್ಐ’ ವರದಿ ಮಾಡಿದೆ. </p><p>ಚಳಿಗಾಲದಲ್ಲಿ ಅನುಸರಿಸುವ ಮಾಲಿನ್ಯ ನಿಯಂತ್ರಣ ಕ್ರಮಗಳ ಅಡಿಯಲ್ಲಿ ಹೊರಡಿಸಿದ್ದ ಮೂರು ಮತ್ತು ನಾಲ್ಕನೆಯ ಹಂತಗಳ ನಿರ್ಬಂಧಗಳನ್ನು ವಾಯು ಗುಣಮಟ್ಟ ಸಮಿತಿ ಈಚೆಗೆ ಹಿಂಪಡೆದಿತ್ತು. ಇದರಿಂದಾಗಿ ನಿರ್ಬಂಧಗಳನ್ನು ಜಿಆರ್ಎಪಿ ಎರಡನೆಯ ಹಂತಕ್ಕೆ ತಗ್ಗಿಸಿದ್ದು, ಕಠಿಣವಾದ ಕ್ರಮಗಳನ್ನು ಹಿಂಪಡೆಯಲಾಗಿತ್ತು. </p><p>ವಾಯು ಗುಣಮಟ್ಟ ಸೂಚ್ಯಂಕವು ಸುಧಾರಿಸಿದ ಕಾರಣಕ್ಕೆ, ಜಿಆರ್ಎಪಿ–4 ನಿರ್ಬಂಧಗಳನ್ನು ಎರಡನೆಯ ಹಂತಕ್ಕೆ ಸಡಿಲಿಸಲು ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ (ಸಿಎಕ್ಯೂಎಂ) ಸುಪ್ರೀಂ ಕೋರ್ಟ್ ಸಮ್ಮತಿ ನೀಡಿತ್ತು. </p><p>ವಾಯು ಗುಣಮಟ್ಟ ಸೂಚ್ಯಂಕವು 350ರ ಗಡಿಯನ್ನು ದಾಟಿದರೆ ಮಾತ್ರ ಮೂರನೆಯ ಹಂತದ ನಿರ್ಬಂಧಗಳನ್ನು ಜಾರಿಗೆ ತರುವಂತೆ ಸಿಎಕ್ಯೂಎಂಗೆ ಕೋರ್ಟ್ ಸೂಚನೆ ನೀಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>