<p><strong>ಅಹಮದಾಬಾದ್:</strong> ದಕ್ಷಿಣ ಭಾರತವನ್ನು ದೇಶದಿಂದ ಪ್ರತ್ಯೇಕಿಸುವ ಸಲುವಾಗಿ ‘ರಿಸಿನ್ ಭಯೋತ್ಪಾದಕ ದಾಳಿ’ಗೆ ಸಂಚು ರೂಪಿಸಿದ್ದ ಆರೋಪದಡಿ, ಹೈದರಾಬಾದ್ ನಿವಾಸಿ ಅಹ್ಮದ್ ಮೊಹಿಯುದ್ದೀನ್ ಸೈಯದ್ ಎಂಬಾತನನ್ನು ಗುಜರಾತ್ ಎಟಿಎಸ್ ಪೊಲೀಸರು ಬಂಧಿಸಿದ್ದಾರೆ.</p>.<p>ರಿಸಿನ್(ಹರಳೆಣ್ಣೆ ಬೀಜಗಳಿಂದ ತೆಗೆದ ವಿಷಕಾರಿ ವಸ್ತು) ಹಾಗೂ ಅಸಿಟೋನ್ ಮಿಶ್ರಣ ಮಾಡಿ ವಿಷಕಾರಿ ಪದಾರ್ಥ ತಯಾರಿಸಿ, ಅದನ್ನು ಬಳಸಿ ‘ನಾಸ್ತಿಕ’ರನ್ನು ಹತ್ಯೆ ಮಾಡಲು ಅಹ್ಮದ್ ಮೊಹಿಯುದ್ದೀನ್ ಸೈಯದ್ ಸಂಚು ರೂಪಿಸಿದ್ದ ಎಂದು ಗುಜರಾತ್ ಪೊಲೀಸರು ದಾಖಲಿಸಿರುವ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.</p>.<p>ಚೀನಾದಲ್ಲಿ ವೈದ್ಯಕೀಯ ಪದವಿ ಪಡೆದಿದ್ದರೂ, ಭಾರತೀಯ ವೈದ್ಯಕೀಯ ಪರಿಷತ್ತು(ಎಂಸಿಐ) ನಡೆಸುವ ಪರೀಕ್ಷೆಯನ್ನು ಅಹ್ಮದ್ ತೇರ್ಗಡೆಯಾಗಿರಲಿಲ್ಲ ಎಂದೂ ಉಲ್ಲೇಖಿಸಲಾಗಿದೆ.</p>.<p>ವಿದೇಶದಲ್ಲಿ ವೈದ್ಯ ಪದವಿ ಪಡೆದವರು ಭಾರತದಲ್ಲಿ ವೈದ್ಯಕೀಯ ವೃತ್ತಿ ಕೈಗೊಳ್ಳಲು ಎಂಸಿಐ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ.</p>.<p>‘ದಕ್ಷಿಣ ಭಾರತವನ್ನು ಭಾರತದ ಉಳಿದ ಪ್ರದೇಶದಿಂದ ಬೇರ್ಪಡಿಸಬೇಕು. ಇದಕ್ಕಾಗಿ ತನಗೆ ಹಣ ಹಾಗೂ ಶಸ್ತ್ರಾಸ್ತ್ರಗಳ ಅಗತ್ಯ ಇದೆ ಎಂಬುದಾಗಿ ಐಎಸ್ಕೆಪಿ(ಇಸ್ಲಾಮಿಕ್ ಸ್ಟೇಟ್ ಖೋರಾಸನ್ ಪ್ರಾವಿನ್ಸ್) ನಾಯಕ, ಅಫ್ಗಾನಿಸ್ತಾನದ ಅಬು ಖದೀಜಾಗೆ ಅಹ್ಮದ್ ಹೇಳಿದ್ದ’ ಎಂದು ವಿವರಿಸಲಾಗಿದೆ.</p>.<p>‘ಅಹ್ಮದ್ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಮೆಡಿಕಲ್ ಕನ್ಸಲ್ಟಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಜೊತೆಗೆ ಆಹಾರ ಪದಾರ್ಥ ಮಾರಾಟವನ್ನೂ ಮಾಡುತ್ತಿದ್ದ. ದೇಶದಲ್ಲಿ ಭಯೋತ್ಪಾದಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಆರೋಪದ ಮೇಲೆ ಈ ಮೊದಲು ಉತ್ತರ ಪ್ರದೇಶ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ’ ಎಂದು ಎಟಿಎಸ್ ಹೇಳಿದೆ.</p>.<p>‘ರಿಸಿನ್ ವಿಷ ಮಿಶ್ರಣ ತಯಾರು ಮಾಡುವುದಕ್ಕಾಗಿ ಖದೀಜಾ ಸೂಚನೆಯಂತೆ ಅಹ್ಮದ್ ಹರಳೆಣ್ಣೆ ಬೀಜಗಳನ್ನು ಖರೀದಿಸಿ, ಅವುಗಳಿಂದ ವಿಷಕಾರಿ ಪದಾರ್ಥ ಹೊರತೆಗೆದು, ಅಸಿಟೋನ್ನೊಂದಿಗೆ ಮಿಶ್ರಣ ಮಾಡಿದ್ದ. ಗೂಗಲ್ ಹಾಗೂ ಚಾಟ್ಜಿಪಿಟಿ ಬಳಸಿ ಈ ಮಿಶ್ರಣ ತಯಾರಿಸುವ ವಿಧಾನ ಕಲಿತಿದ್ದ’ ಎಂದು ಎಟಿಎಸ್ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಹಮದಾಬಾದ್:</strong> ದಕ್ಷಿಣ ಭಾರತವನ್ನು ದೇಶದಿಂದ ಪ್ರತ್ಯೇಕಿಸುವ ಸಲುವಾಗಿ ‘ರಿಸಿನ್ ಭಯೋತ್ಪಾದಕ ದಾಳಿ’ಗೆ ಸಂಚು ರೂಪಿಸಿದ್ದ ಆರೋಪದಡಿ, ಹೈದರಾಬಾದ್ ನಿವಾಸಿ ಅಹ್ಮದ್ ಮೊಹಿಯುದ್ದೀನ್ ಸೈಯದ್ ಎಂಬಾತನನ್ನು ಗುಜರಾತ್ ಎಟಿಎಸ್ ಪೊಲೀಸರು ಬಂಧಿಸಿದ್ದಾರೆ.</p>.<p>ರಿಸಿನ್(ಹರಳೆಣ್ಣೆ ಬೀಜಗಳಿಂದ ತೆಗೆದ ವಿಷಕಾರಿ ವಸ್ತು) ಹಾಗೂ ಅಸಿಟೋನ್ ಮಿಶ್ರಣ ಮಾಡಿ ವಿಷಕಾರಿ ಪದಾರ್ಥ ತಯಾರಿಸಿ, ಅದನ್ನು ಬಳಸಿ ‘ನಾಸ್ತಿಕ’ರನ್ನು ಹತ್ಯೆ ಮಾಡಲು ಅಹ್ಮದ್ ಮೊಹಿಯುದ್ದೀನ್ ಸೈಯದ್ ಸಂಚು ರೂಪಿಸಿದ್ದ ಎಂದು ಗುಜರಾತ್ ಪೊಲೀಸರು ದಾಖಲಿಸಿರುವ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.</p>.<p>ಚೀನಾದಲ್ಲಿ ವೈದ್ಯಕೀಯ ಪದವಿ ಪಡೆದಿದ್ದರೂ, ಭಾರತೀಯ ವೈದ್ಯಕೀಯ ಪರಿಷತ್ತು(ಎಂಸಿಐ) ನಡೆಸುವ ಪರೀಕ್ಷೆಯನ್ನು ಅಹ್ಮದ್ ತೇರ್ಗಡೆಯಾಗಿರಲಿಲ್ಲ ಎಂದೂ ಉಲ್ಲೇಖಿಸಲಾಗಿದೆ.</p>.<p>ವಿದೇಶದಲ್ಲಿ ವೈದ್ಯ ಪದವಿ ಪಡೆದವರು ಭಾರತದಲ್ಲಿ ವೈದ್ಯಕೀಯ ವೃತ್ತಿ ಕೈಗೊಳ್ಳಲು ಎಂಸಿಐ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ.</p>.<p>‘ದಕ್ಷಿಣ ಭಾರತವನ್ನು ಭಾರತದ ಉಳಿದ ಪ್ರದೇಶದಿಂದ ಬೇರ್ಪಡಿಸಬೇಕು. ಇದಕ್ಕಾಗಿ ತನಗೆ ಹಣ ಹಾಗೂ ಶಸ್ತ್ರಾಸ್ತ್ರಗಳ ಅಗತ್ಯ ಇದೆ ಎಂಬುದಾಗಿ ಐಎಸ್ಕೆಪಿ(ಇಸ್ಲಾಮಿಕ್ ಸ್ಟೇಟ್ ಖೋರಾಸನ್ ಪ್ರಾವಿನ್ಸ್) ನಾಯಕ, ಅಫ್ಗಾನಿಸ್ತಾನದ ಅಬು ಖದೀಜಾಗೆ ಅಹ್ಮದ್ ಹೇಳಿದ್ದ’ ಎಂದು ವಿವರಿಸಲಾಗಿದೆ.</p>.<p>‘ಅಹ್ಮದ್ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಮೆಡಿಕಲ್ ಕನ್ಸಲ್ಟಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಜೊತೆಗೆ ಆಹಾರ ಪದಾರ್ಥ ಮಾರಾಟವನ್ನೂ ಮಾಡುತ್ತಿದ್ದ. ದೇಶದಲ್ಲಿ ಭಯೋತ್ಪಾದಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಆರೋಪದ ಮೇಲೆ ಈ ಮೊದಲು ಉತ್ತರ ಪ್ರದೇಶ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ’ ಎಂದು ಎಟಿಎಸ್ ಹೇಳಿದೆ.</p>.<p>‘ರಿಸಿನ್ ವಿಷ ಮಿಶ್ರಣ ತಯಾರು ಮಾಡುವುದಕ್ಕಾಗಿ ಖದೀಜಾ ಸೂಚನೆಯಂತೆ ಅಹ್ಮದ್ ಹರಳೆಣ್ಣೆ ಬೀಜಗಳನ್ನು ಖರೀದಿಸಿ, ಅವುಗಳಿಂದ ವಿಷಕಾರಿ ಪದಾರ್ಥ ಹೊರತೆಗೆದು, ಅಸಿಟೋನ್ನೊಂದಿಗೆ ಮಿಶ್ರಣ ಮಾಡಿದ್ದ. ಗೂಗಲ್ ಹಾಗೂ ಚಾಟ್ಜಿಪಿಟಿ ಬಳಸಿ ಈ ಮಿಶ್ರಣ ತಯಾರಿಸುವ ವಿಧಾನ ಕಲಿತಿದ್ದ’ ಎಂದು ಎಟಿಎಸ್ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>