ಮೆವಾನಿ ಪ್ರತಿಕ್ರಿಯೆ:ತೀರ್ಪಿನ ಬಳಿಕ ಪ್ರತಿಕ್ರಿಯಿಸಿದ ಮೆವಾನಿ, ಗುಜರಾತ್ ಸರ್ಕಾರವು ಎಲ್ಲಾ ಅತ್ಯಾಚಾರಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದೆ. ಅವರನ್ನು ಅಭಿನಂದಿಸಿ, ಅವರು ಉತ್ತಮ ನಡತೆಯುಳ್ಳವರೆಂದೂ ಹೇಳಿದೆ. ಗುಜರಾತಿನ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್ ಅವರ ವಿರುದ್ಧ ಸುಮಾರು 108 ಪ್ರಕರಣಗಳಿವೆ. ಆದರೆ, ಯಾವುದರಲ್ಲೂ ಶಿಕ್ಷೆಯಾಗಿಲ್ಲ. ಕಟ್ಟಡವೊಂದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿಡಬೇಕೆಂದು ರ್ಯಾಲಿ ನಡೆಸಿದ ಮಾತ್ರಕ್ಕೆ ಆರು ತಿಂಗಳ ಜೈಲುಶಿಕ್ಷೆ ವಿಧಿಸಲಾಗುತ್ತಿದೆ. ಇದು ಹೋರಾಟಗಾರರ ವಿರುದ್ಧ ದಾಖಲಾಗುತ್ತಿರುವ ಎರಡನೇ ಪ್ರಕರಣ. ನಾವು ಈ ತೀರ್ಪನ್ನು ಸ್ವಾಗತಿಸುತ್ತೇವೆ’ ಎಂದು ಹೇಳಿದ್ದಾರೆ.