<p><strong>ಲಖನೌ</strong>: ಜ್ಞಾನವಾಪಿ ಮಸೀದಿ ಆವರಣದ ವಿಸ್ತೃತ ವೈಜ್ಞಾನಿಕ ಸಮೀಕ್ಷೆಗೆ ತಡೆಯಾಜ್ಞೆ ಕೋರಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ಆಗಸ್ಟ್ 3ರಂದು ನೀಡಲಿದೆ. ಅಲ್ಲಿಯವರೆಗೂ ಈ ಕುರಿತ ತಡೆಯಾಜ್ಞೆ ಮುಂದುವರಿಯಲಿದೆ.</p>.<p>ಗುರುವಾರ ಎರಡೂ ಕಡೆಯ ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಪ್ರೀತಿಂಕೆರ್ ದಿವಾಕರ್ ಅವರಿದ್ದ ಏಕಸದಸ್ಯ ಪೀಠ ತೀರ್ಪು ಕಾಯ್ದಿರಿಸಿತು. ಮಸೀದಿಯ ನಿರ್ವಹಣೆ ಉಸ್ತುವಾರಿ ಹೊಂದಿರುವ ಅಂಜುಮನ್ ಇಂತೆಜಾಮಿಯಾ ಸಮಿತಿ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿತ್ತು.</p>.<p>ಇದಕ್ಕೂ ಮುನ್ನ ಹಿಂದೂ ಅರ್ಜಿದಾರರ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು, ‘ಈ ಮೊದಲು ಕಮಿಷನರ್ ಅವರು ಸಮೀಕ್ಷೆ ನಡೆಸಿದ್ದ ವೇಳೆ ಅಲ್ಲಿ ‘ಸ್ವಸ್ತಿಕ್ ಚಿಹ್ನೆ’ ಕಂಡುಬಂದಿದೆ. ಇದು, ದೇವಸ್ಥಾನ ಸ್ಥಳದಲ್ಲಿ ಮಸೀದಿ ನಿರ್ಮಿಸಿರುವುದರ ದ್ಯೋತಕವಾಗಿದೆ’ ಎಂದು ವಾದಿಸಿದರು.</p>.<p>ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನಡೆಸಲಿರುವ ಸಮೀಕ್ಷೆಯನ್ನು ಇನ್ನಷ್ಟು ನಿರ್ಣಾಯಕವಾದ ಪುರಾವೆಗಳನ್ನು ಬಹಿರಂಗ ಪಡಿಸಬಹುದಾಗಿದೆ ಎಂದು ಪ್ರತಿಪಾದಿಸಿದರು.</p>.<p>17ನೇ ಶತಮಾನದಲ್ಲಿ ಮೊಘಲ್ ದೊರೆ ಔರಂಗಜೇಬ್, ದೇಗುಲವನ್ನು ಭಾಗಶಃ ನೆಲಸಮಗೊಳಿಸಿದ್ದಾರೆ ಎಂಬುದು ಹಿಂದೂ ಅರ್ಜಿದಾರರ ವಾದ. ಮುಸ್ಲಿಂ ಅರ್ಜಿದಾರರು, ‘ಔರಂಗಜೇಬ್ ಆಳ್ವಿಕೆಗೆ ಮೊದಲೇ ಮಸೀದಿ ಇತ್ತು. ಪೂರಕವಾಗಿ ಭೂದಾಖಲೆಗಳಿವೆ‘ ಎಂದು ವಾದಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ಜ್ಞಾನವಾಪಿ ಮಸೀದಿ ಆವರಣದ ವಿಸ್ತೃತ ವೈಜ್ಞಾನಿಕ ಸಮೀಕ್ಷೆಗೆ ತಡೆಯಾಜ್ಞೆ ಕೋರಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ಆಗಸ್ಟ್ 3ರಂದು ನೀಡಲಿದೆ. ಅಲ್ಲಿಯವರೆಗೂ ಈ ಕುರಿತ ತಡೆಯಾಜ್ಞೆ ಮುಂದುವರಿಯಲಿದೆ.</p>.<p>ಗುರುವಾರ ಎರಡೂ ಕಡೆಯ ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಪ್ರೀತಿಂಕೆರ್ ದಿವಾಕರ್ ಅವರಿದ್ದ ಏಕಸದಸ್ಯ ಪೀಠ ತೀರ್ಪು ಕಾಯ್ದಿರಿಸಿತು. ಮಸೀದಿಯ ನಿರ್ವಹಣೆ ಉಸ್ತುವಾರಿ ಹೊಂದಿರುವ ಅಂಜುಮನ್ ಇಂತೆಜಾಮಿಯಾ ಸಮಿತಿ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿತ್ತು.</p>.<p>ಇದಕ್ಕೂ ಮುನ್ನ ಹಿಂದೂ ಅರ್ಜಿದಾರರ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು, ‘ಈ ಮೊದಲು ಕಮಿಷನರ್ ಅವರು ಸಮೀಕ್ಷೆ ನಡೆಸಿದ್ದ ವೇಳೆ ಅಲ್ಲಿ ‘ಸ್ವಸ್ತಿಕ್ ಚಿಹ್ನೆ’ ಕಂಡುಬಂದಿದೆ. ಇದು, ದೇವಸ್ಥಾನ ಸ್ಥಳದಲ್ಲಿ ಮಸೀದಿ ನಿರ್ಮಿಸಿರುವುದರ ದ್ಯೋತಕವಾಗಿದೆ’ ಎಂದು ವಾದಿಸಿದರು.</p>.<p>ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನಡೆಸಲಿರುವ ಸಮೀಕ್ಷೆಯನ್ನು ಇನ್ನಷ್ಟು ನಿರ್ಣಾಯಕವಾದ ಪುರಾವೆಗಳನ್ನು ಬಹಿರಂಗ ಪಡಿಸಬಹುದಾಗಿದೆ ಎಂದು ಪ್ರತಿಪಾದಿಸಿದರು.</p>.<p>17ನೇ ಶತಮಾನದಲ್ಲಿ ಮೊಘಲ್ ದೊರೆ ಔರಂಗಜೇಬ್, ದೇಗುಲವನ್ನು ಭಾಗಶಃ ನೆಲಸಮಗೊಳಿಸಿದ್ದಾರೆ ಎಂಬುದು ಹಿಂದೂ ಅರ್ಜಿದಾರರ ವಾದ. ಮುಸ್ಲಿಂ ಅರ್ಜಿದಾರರು, ‘ಔರಂಗಜೇಬ್ ಆಳ್ವಿಕೆಗೆ ಮೊದಲೇ ಮಸೀದಿ ಇತ್ತು. ಪೂರಕವಾಗಿ ಭೂದಾಖಲೆಗಳಿವೆ‘ ಎಂದು ವಾದಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>