<p><strong>ಚಿಂತಾಮಣಿ</strong>: ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬುರುಡಗುಂಟೆ ಸಮೀಪ ಗುರುವಾರ ಸಂಜೆ ಬೈಕ್ ಮತ್ತು ಶಾಲಾ ವಾಹನ ನಡುವೆ ಡಿಕ್ಕಿಯಾಗಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.</p><p>ಚಿಲಕಲನೇರ್ಪು ಗ್ರಾಮದ ಬಾಲಾಜಿ (32), ಅವರ ಮಾವ ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೊಳ್ ಗ್ರಾಮದ ವೆಂಕಟೇಶಪ್ಪ (45), ಮಗ ಆರ್ಯ (4), ಸಂಬಂಧಿಕ ಕೊತ್ತವುಡ್ಯ ಗ್ರಾಮದ ಹರೀಶ್ (11) ಮೃತರು.</p><p>ಬಾಲಾಜಿ ಪುತ್ರಿ ಶಿವಾನಿ (8) ಗಾಯಗೊಂಡಿದ್ದು ಬುರುಡಗುಂಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಚಿಂತಾಮಣಿಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರಕ್ಕೆ ಕಳುಹಿಸಲಾಗಿದೆ.</p><p>ಚಿಕಲನೇರ್ಪು ಗ್ರಾಮದ ಬಾಲಾಗಿ ಮತ್ತು ಮಕ್ಕಳು ಸೇರಿ 5 ಜನರು ಪಲ್ಸರ್ ಬೈಕ್ ನಲ್ಲಿ ಚಿಲಕಲನೇರ್ಪು ನಿಂದ ಬುರುಡಗುಂಟೆ-ಕೋರ್ಲಪರ್ತಿ ಮಾರ್ಗವಾಗಿ ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟದಲ್ಲಿ ನಡೆಯಲಿದ್ದ ವಿವಾಹಕ್ಕೆ ತೆರಳುತ್ತಿದ್ದರು.</p><p>ಬೈಕ್ ಬುರುಡಗುಂಟೆ ಸಮೀಪ ಸಾಗುವಾಗ ಎದುರಿನಿಂದ ಬಂದ ನಗರದ ಶಾಲಾ ವಾಹನಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೆ ನಾಲ್ವರು ಮೃತಪಟ್ಟಿದ್ದಾರೆ.</p>.ಚಿಕ್ಕಬಳ್ಳಾಪುರ | ಗೃಹಲಕ್ಷ್ಮಿ ಯೋಜನೆಯಲ್ಲಿ ಮೃತ ಕುಟುಂಬ ಸದಸ್ಯರ ಹೆಸರು .ಚಿಕ್ಕಬಳ್ಳಾಪುರ: ಚಿನ್ನ ಎಗರಿಸಿದ್ದ ಅಜ್ಜಿ ಬಂಧನ!.<p>ಶಾಲಾ ವಾಹನದ ಬಂಪರ್ಗೆ ಡಿಕ್ಕಿಯಾಗಿ ಬೈಕ್ ಎರಡು ತುಂಡಾಗಿದೆ. ವಾಹನದ ಬಂಪರ್ ಜಖಂಗೊಂಡಿದೆ. ಮೃತದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿ ಯಾಗಿ ಬಿದ್ದಿದ್ದವು. ಅಂಗಾಂಗಗಳು ತುಂಡು ತುಂಡಾಗಿ ರಕ್ತಸಿಕ್ತವಾಗಿದ್ದವು.</p><p>ಕೆಂಚಾರ್ಲಹಳ್ಳಿ ಪೊಲೀಸರು ಸ್ಥಳಕ್ಕೆ ತೆರಳಿ ಸ್ಥಳೀಯರ ನೆರವಿನೊಂದಿಗೆ ಮೃತ ದೇಹಗಳನ್ನು ನಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ</strong>: ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬುರುಡಗುಂಟೆ ಸಮೀಪ ಗುರುವಾರ ಸಂಜೆ ಬೈಕ್ ಮತ್ತು ಶಾಲಾ ವಾಹನ ನಡುವೆ ಡಿಕ್ಕಿಯಾಗಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.</p><p>ಚಿಲಕಲನೇರ್ಪು ಗ್ರಾಮದ ಬಾಲಾಜಿ (32), ಅವರ ಮಾವ ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೊಳ್ ಗ್ರಾಮದ ವೆಂಕಟೇಶಪ್ಪ (45), ಮಗ ಆರ್ಯ (4), ಸಂಬಂಧಿಕ ಕೊತ್ತವುಡ್ಯ ಗ್ರಾಮದ ಹರೀಶ್ (11) ಮೃತರು.</p><p>ಬಾಲಾಜಿ ಪುತ್ರಿ ಶಿವಾನಿ (8) ಗಾಯಗೊಂಡಿದ್ದು ಬುರುಡಗುಂಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಚಿಂತಾಮಣಿಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರಕ್ಕೆ ಕಳುಹಿಸಲಾಗಿದೆ.</p><p>ಚಿಕಲನೇರ್ಪು ಗ್ರಾಮದ ಬಾಲಾಗಿ ಮತ್ತು ಮಕ್ಕಳು ಸೇರಿ 5 ಜನರು ಪಲ್ಸರ್ ಬೈಕ್ ನಲ್ಲಿ ಚಿಲಕಲನೇರ್ಪು ನಿಂದ ಬುರುಡಗುಂಟೆ-ಕೋರ್ಲಪರ್ತಿ ಮಾರ್ಗವಾಗಿ ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟದಲ್ಲಿ ನಡೆಯಲಿದ್ದ ವಿವಾಹಕ್ಕೆ ತೆರಳುತ್ತಿದ್ದರು.</p><p>ಬೈಕ್ ಬುರುಡಗುಂಟೆ ಸಮೀಪ ಸಾಗುವಾಗ ಎದುರಿನಿಂದ ಬಂದ ನಗರದ ಶಾಲಾ ವಾಹನಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೆ ನಾಲ್ವರು ಮೃತಪಟ್ಟಿದ್ದಾರೆ.</p>.ಚಿಕ್ಕಬಳ್ಳಾಪುರ | ಗೃಹಲಕ್ಷ್ಮಿ ಯೋಜನೆಯಲ್ಲಿ ಮೃತ ಕುಟುಂಬ ಸದಸ್ಯರ ಹೆಸರು .ಚಿಕ್ಕಬಳ್ಳಾಪುರ: ಚಿನ್ನ ಎಗರಿಸಿದ್ದ ಅಜ್ಜಿ ಬಂಧನ!.<p>ಶಾಲಾ ವಾಹನದ ಬಂಪರ್ಗೆ ಡಿಕ್ಕಿಯಾಗಿ ಬೈಕ್ ಎರಡು ತುಂಡಾಗಿದೆ. ವಾಹನದ ಬಂಪರ್ ಜಖಂಗೊಂಡಿದೆ. ಮೃತದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿ ಯಾಗಿ ಬಿದ್ದಿದ್ದವು. ಅಂಗಾಂಗಗಳು ತುಂಡು ತುಂಡಾಗಿ ರಕ್ತಸಿಕ್ತವಾಗಿದ್ದವು.</p><p>ಕೆಂಚಾರ್ಲಹಳ್ಳಿ ಪೊಲೀಸರು ಸ್ಥಳಕ್ಕೆ ತೆರಳಿ ಸ್ಥಳೀಯರ ನೆರವಿನೊಂದಿಗೆ ಮೃತ ದೇಹಗಳನ್ನು ನಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>