<p><strong>ಜೈಪುರ</strong>: ರಾಜಸ್ಥಾನದಲ್ಲಿ ಭಾರಿ ಮಳೆಯಾಗುತ್ತಿದ್ದು, ಭಿಲ್ವಾರಾ, ಚಿತ್ತೋರ್ಗಢ, ಝಲಾವರ್, ಕೋಟಾ, ಪಾಲಿ ಮತ್ತು ಸಿರೋಹಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p><p>ಭಾರಿ ಮಳೆಯಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇಂದು ( ಜುಲೈ 29) 11 ಜಿಲ್ಲೆಗಳ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಝಲಾವರ್, ಕೋಟಾ, ಚಿತ್ತೋರ್ಗಢ, ಟೋಂಕ್, ಭಿಲ್ವಾರಾ, ಬರಾನ್, ಡುಂಗರ್ಪುರ, ಧೋಲ್ಪುರ್, ಸಲೂಂಬರ್, ಬನ್ಸ್ವಾರಾ, ಅಜ್ಮೀರ್ ಜಿಲ್ಲೆಗಳಲ್ಲಿ ರಜೆಯನ್ನು ವಿಸ್ತರಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p>.ಸಂಪಾದಕೀಯ | ಸಫಾಯಿ ಕರ್ಮಚಾರಿಗಳ ಶೋಷಣೆ: ಹೀನಾಯ ಪದ್ಧತಿ ಕೊನೆಗೊಳ್ಳಲಿ.ಸಂಗತ: ಮುಟ್ಟಿನ ಬಗ್ಗೆ ಮೂಢನಂಬಿಕೆ ಕೊನೆಯಾಗಲಿ. <p>ಇಂದು 3 ಜಿಲ್ಲೆಗಳಿಗೆ ರೆಡ್ ಅಲರ್ಟ್, 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಮತ್ತು 19 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.</p><p>ಪೂರ್ವ ರಾಜಸ್ಥಾನದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಕೋಟಾದ ರಾಮಗಂಜ್ ಮಂಡಿಯಲ್ಲಿ 24.2 ಸೆಂ.ಮೀ ಮತ್ತು ಭಿಲ್ವಾರದ ಜೈತುರಾದಲ್ಲಿ 23.5 ಸೆಂ.ಮೀ ಮಳೆಯಾಗಿದೆ. ಪಾಲಿ ಜಿಲ್ಲೆಯ ಬಾಲಿಯಲ್ಲಿ 8.8 ಸೆಂ.ಮೀ ಜಾಲಾವರ್ನ ಬಕಾನಿಯಲ್ಲಿ 6.1 ಸೆಂ.ಮೀ , ಬರಾನ್ನ ಅಟ್ರುದಲ್ಲಿ 4.3 ಸೆಂ.ಮೀ ಛಾಬ್ರಾದಲ್ಲಿ 2.6 ಸೆಂ.ಮೀ, ಭಿಲ್ವಾರದ ಬಿಜೋಲಿಯಾದಲ್ಲಿ 6.4 ಸೆಂ.ಮೀ, ಬುಂದಿಯ ನೈನ್ವಾನ್ನಲ್ಲಿ 2.8 ಸೆಂ.ಮೀ ಮತ್ತು ಅಲ್ ಬೆಹ್ರೋದಲ್ಲಿ 3.1 ಸೆಂ.ಮೀ ಮಳೆ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p><p>ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎಸ್ಡಿಆರ್ಎಫ್ ತಂಡವನ್ನು ನಿಯೋಜಿಸಲಾಗಿದೆ. ಜೂನ್ 1ರಿಂದ ಜುಲೈ 28 ರವರೆಗೆ, ರಾಜ್ಯದಲ್ಲಿ 36.976 ಸೆಂ.ಮೀ ಮಳೆಯಾಗಿದೆ ಎಂದು ಇಲಾಖೆ ತಿಳಿಸಿದೆ.</p>.ಚುನಾವಣಾ ಕಾರ್ಯಕ್ಕೆ ಶಿಕ್ಷಕೇತರರ ಬಳಕೆ: ಶಾಲಿನಿ ರಜನೀಶ್ .ಬೆಳಗಾವಿ: ಪ್ರತ್ಯೇಕ ಗ್ರಾ.ಪಂ; ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಹೈಕೋರ್ಟ್.‘ಆಪರೇಷನ್ ಮಹಾದೇವ‘: ಪಹಲ್ಗಾಮ್ ದಾಳಿಯ ರೂವಾರಿ ಹತ್ಯೆ .ನಾನಿಲ್ಲದಿದ್ದರೆ ಪಾಕಿಸ್ತಾನದ ವಿರುದ್ಧ ಭಾರತ ಯುದ್ಧ ಮಾಡುತ್ತಿತ್ತು: ಟ್ರಂಪ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೈಪುರ</strong>: ರಾಜಸ್ಥಾನದಲ್ಲಿ ಭಾರಿ ಮಳೆಯಾಗುತ್ತಿದ್ದು, ಭಿಲ್ವಾರಾ, ಚಿತ್ತೋರ್ಗಢ, ಝಲಾವರ್, ಕೋಟಾ, ಪಾಲಿ ಮತ್ತು ಸಿರೋಹಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p><p>ಭಾರಿ ಮಳೆಯಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇಂದು ( ಜುಲೈ 29) 11 ಜಿಲ್ಲೆಗಳ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಝಲಾವರ್, ಕೋಟಾ, ಚಿತ್ತೋರ್ಗಢ, ಟೋಂಕ್, ಭಿಲ್ವಾರಾ, ಬರಾನ್, ಡುಂಗರ್ಪುರ, ಧೋಲ್ಪುರ್, ಸಲೂಂಬರ್, ಬನ್ಸ್ವಾರಾ, ಅಜ್ಮೀರ್ ಜಿಲ್ಲೆಗಳಲ್ಲಿ ರಜೆಯನ್ನು ವಿಸ್ತರಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p>.ಸಂಪಾದಕೀಯ | ಸಫಾಯಿ ಕರ್ಮಚಾರಿಗಳ ಶೋಷಣೆ: ಹೀನಾಯ ಪದ್ಧತಿ ಕೊನೆಗೊಳ್ಳಲಿ.ಸಂಗತ: ಮುಟ್ಟಿನ ಬಗ್ಗೆ ಮೂಢನಂಬಿಕೆ ಕೊನೆಯಾಗಲಿ. <p>ಇಂದು 3 ಜಿಲ್ಲೆಗಳಿಗೆ ರೆಡ್ ಅಲರ್ಟ್, 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಮತ್ತು 19 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.</p><p>ಪೂರ್ವ ರಾಜಸ್ಥಾನದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಕೋಟಾದ ರಾಮಗಂಜ್ ಮಂಡಿಯಲ್ಲಿ 24.2 ಸೆಂ.ಮೀ ಮತ್ತು ಭಿಲ್ವಾರದ ಜೈತುರಾದಲ್ಲಿ 23.5 ಸೆಂ.ಮೀ ಮಳೆಯಾಗಿದೆ. ಪಾಲಿ ಜಿಲ್ಲೆಯ ಬಾಲಿಯಲ್ಲಿ 8.8 ಸೆಂ.ಮೀ ಜಾಲಾವರ್ನ ಬಕಾನಿಯಲ್ಲಿ 6.1 ಸೆಂ.ಮೀ , ಬರಾನ್ನ ಅಟ್ರುದಲ್ಲಿ 4.3 ಸೆಂ.ಮೀ ಛಾಬ್ರಾದಲ್ಲಿ 2.6 ಸೆಂ.ಮೀ, ಭಿಲ್ವಾರದ ಬಿಜೋಲಿಯಾದಲ್ಲಿ 6.4 ಸೆಂ.ಮೀ, ಬುಂದಿಯ ನೈನ್ವಾನ್ನಲ್ಲಿ 2.8 ಸೆಂ.ಮೀ ಮತ್ತು ಅಲ್ ಬೆಹ್ರೋದಲ್ಲಿ 3.1 ಸೆಂ.ಮೀ ಮಳೆ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p><p>ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎಸ್ಡಿಆರ್ಎಫ್ ತಂಡವನ್ನು ನಿಯೋಜಿಸಲಾಗಿದೆ. ಜೂನ್ 1ರಿಂದ ಜುಲೈ 28 ರವರೆಗೆ, ರಾಜ್ಯದಲ್ಲಿ 36.976 ಸೆಂ.ಮೀ ಮಳೆಯಾಗಿದೆ ಎಂದು ಇಲಾಖೆ ತಿಳಿಸಿದೆ.</p>.ಚುನಾವಣಾ ಕಾರ್ಯಕ್ಕೆ ಶಿಕ್ಷಕೇತರರ ಬಳಕೆ: ಶಾಲಿನಿ ರಜನೀಶ್ .ಬೆಳಗಾವಿ: ಪ್ರತ್ಯೇಕ ಗ್ರಾ.ಪಂ; ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಹೈಕೋರ್ಟ್.‘ಆಪರೇಷನ್ ಮಹಾದೇವ‘: ಪಹಲ್ಗಾಮ್ ದಾಳಿಯ ರೂವಾರಿ ಹತ್ಯೆ .ನಾನಿಲ್ಲದಿದ್ದರೆ ಪಾಕಿಸ್ತಾನದ ವಿರುದ್ಧ ಭಾರತ ಯುದ್ಧ ಮಾಡುತ್ತಿತ್ತು: ಟ್ರಂಪ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>