<p><strong>ಶಿಮ್ಲಾ (ಪಿಟಿಐ)</strong>: ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ನಿರ್ಮಾಂದ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ, ಮಹಿಳೆಯೊಬ್ಬರು ಮೃತಪಟ್ಟಿದ್ದು, ಕುಟುಂಬದ ನಾಲ್ವರು ಸದಸ್ಯರು ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.</p>.<p>‘ಸೋಮವಾರ ರಾತ್ರಿ 1.30ರ ವೇಳೆಗೆ ಜಿಲ್ಲೆಯ ಘಾಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿರ್ಮಂಡ್ನಲ್ಲಿ ವ್ಯಾಪಕ ಮಳೆಯಾಗಿ, ಮನೆ ಕುಸಿದುಬಿದ್ದಿದೆ. ಅವಶೇಷಗಳಿಂದ ಒಂದು ದೇಹವನ್ನು ಹೊರತೆಗೆಯಲಾಗಿದ್ದು, ಉಳಿದ ನಾಲ್ವರು ಮಣ್ಣಿನಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ’ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ರಾಮ್ ತಿಳಿಸಿದ್ದಾರೆ.</p>.<p class="bodytext">‘ಮೃತರನ್ನು ಶಿವರಾಮ್ ಅವರ ಪತ್ನಿ ಬ್ರಸಿತಿ ದೇವಿ ಎಂದು ಗುರುತಿಸಲಾಗಿದೆ. ಉಳಿದಂತೆ, ಚುನ್ನಿ ಲಾಲ್, ಅಂಜು, ಜಾಗೃತಿ, ಪುಪೇಶ್ ಅವರು ನಾಪತ್ತೆಯಾಗಿದ್ದಾರೆ. ಕಲಾದೇವಿ, ಶಿವರಾಮ್ ಹಾಗೂ ಧರಮ್ ದಾಸ್ ಅವರು ಗಾಯಗೊಂಡಿದ್ದು, ನಿರ್ಮಾಂದ್ನ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.</p>.<p class="bodytext">ಜುಲೈ 30ರಿಂದ ಸೆ.8ರವರೆಗೆ ರಾಜ್ಯದ ವಿವಿಧೆಡೆ ಸಂಭವಿಸಿದ ಮಳೆ ಅನಾಹುತದಿಂದ 370 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 43 ಮಂದಿ ಭೂಕುಸಿತದಿಂದಲೇ ಕೊನೆಯುಸಿರೆಳೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಮ್ಲಾ (ಪಿಟಿಐ)</strong>: ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ನಿರ್ಮಾಂದ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ, ಮಹಿಳೆಯೊಬ್ಬರು ಮೃತಪಟ್ಟಿದ್ದು, ಕುಟುಂಬದ ನಾಲ್ವರು ಸದಸ್ಯರು ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.</p>.<p>‘ಸೋಮವಾರ ರಾತ್ರಿ 1.30ರ ವೇಳೆಗೆ ಜಿಲ್ಲೆಯ ಘಾಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿರ್ಮಂಡ್ನಲ್ಲಿ ವ್ಯಾಪಕ ಮಳೆಯಾಗಿ, ಮನೆ ಕುಸಿದುಬಿದ್ದಿದೆ. ಅವಶೇಷಗಳಿಂದ ಒಂದು ದೇಹವನ್ನು ಹೊರತೆಗೆಯಲಾಗಿದ್ದು, ಉಳಿದ ನಾಲ್ವರು ಮಣ್ಣಿನಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ’ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ರಾಮ್ ತಿಳಿಸಿದ್ದಾರೆ.</p>.<p class="bodytext">‘ಮೃತರನ್ನು ಶಿವರಾಮ್ ಅವರ ಪತ್ನಿ ಬ್ರಸಿತಿ ದೇವಿ ಎಂದು ಗುರುತಿಸಲಾಗಿದೆ. ಉಳಿದಂತೆ, ಚುನ್ನಿ ಲಾಲ್, ಅಂಜು, ಜಾಗೃತಿ, ಪುಪೇಶ್ ಅವರು ನಾಪತ್ತೆಯಾಗಿದ್ದಾರೆ. ಕಲಾದೇವಿ, ಶಿವರಾಮ್ ಹಾಗೂ ಧರಮ್ ದಾಸ್ ಅವರು ಗಾಯಗೊಂಡಿದ್ದು, ನಿರ್ಮಾಂದ್ನ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.</p>.<p class="bodytext">ಜುಲೈ 30ರಿಂದ ಸೆ.8ರವರೆಗೆ ರಾಜ್ಯದ ವಿವಿಧೆಡೆ ಸಂಭವಿಸಿದ ಮಳೆ ಅನಾಹುತದಿಂದ 370 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 43 ಮಂದಿ ಭೂಕುಸಿತದಿಂದಲೇ ಕೊನೆಯುಸಿರೆಳೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>