<p><strong>ಶಿಮ್ಲಾ</strong>: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಪರಿಹಾರ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ಇದೇ ರೀತಿ ಮುಂದುವರಿದರೆ 20 ವರ್ಷವಾದರೂ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಂಸದೆ ಕಂಗನಾ ರನೌತ್ ಭಾನುವಾರ ತಿಳಿಸಿದ್ದಾರೆ.</p><p>ಪ್ರವಾಹ ಪೀಡಿತ ಮಂಡಿ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ ಕಂಗನಾ, ಜಿಲ್ಲೆಯ ಜನರ ದುಃಸ್ಥಿತಿ ನೋಡಿದರೆ ದುಃಖವಾಗುತ್ತದೆ. ಸಂಬಂಧಿಕರನ್ನು ಕಳೆದುಕೊಂಡ ಕುಟುಂಬದವರಿಗೆ ಸಾಂತ್ವನ ಹೇಳಬಹುದು. ಆದರೆ ಇದೀಗ ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ನೀಡಬೇಕು ಎಂದು ಹೇಳಿದ್ದಾರೆ.</p>.ಹಿಂದಿ ಭಾಷಿಗರ ಮೇಲಿನ ಹಲ್ಲೆ: ಪಹಲ್ಗಾಮ್ ದಾಳಿಗೆ ಸಮ; ಮಹಾರಾಷ್ಟ್ರ ಸಚಿವ ಆಶಿಶ್ .ಮಗುವಿನ ಹೊಟ್ಟೆ ಉಬ್ಬರ ಸಮಸ್ಯೆಗೆ ಕಾದ ಕಬ್ಬಿಣದ ಸರಳಿಂದ ಬರೆ ಹಾಕಿದ ಮಹಿಳೆ ವಶಕ್ಕೆ. <p>'ಪರಿಹಾರ ಕಾರ್ಯಗಳನ್ನು ರಾಜ್ಯ ಸರ್ಕಾರವೇ ಮಾಡಬೇಕು. ಒಬ್ಬ ಸಂಸದಳಾಗಿ, ನಾನು ಪ್ರಧಾನಿ ಮತ್ತು ಗೃಹ ಸಚಿವರಿಗೆ ಪರಿಸ್ಥಿತಿಯ ಬಗ್ಗೆ ತಿಳಿಸಬಹುದು. ಸಹಾಯವನ್ನು ಪಡೆಯಬಹುದು' ಎಂದು ಕಂಗನಾ ತಿಳಿಸಿದ್ದಾರೆ.</p><p>'ನಾವು ಸಂಸದರಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ಕೊಂಡಿಯಾಗಿದ್ದೇವೆ. ಕೇಂದ್ರದಿಂದ ರಾಜ್ಯಕ್ಕೆ ಯೋಜನೆಗಳನ್ನು ತಲುಪಿಸುವಲ್ಲಿ ಮತ್ತು ನಮ್ಮ ಕ್ಷೇತ್ರಗಳ ಸಮಸ್ಯೆಗಳು ಮತ್ತು ಕುಂದು ಕೊರತೆಗಳನ್ನು ಕೇಂದ್ರಕ್ಕೆ ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತೇವೆ' ಎಂದು ಕಂಗನಾ ಹೇಳಿದ್ದಾರೆ.</p><p>ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ, ದಿಢೀರ್ ಪ್ರವಾಹ ಮತ್ತು ಭೂಕುಸಿತದಿಂದ 14 ಮಂದಿ ಮೃತಪಟ್ಟಿದ್ದರೆ, 31 ಮಂದಿ ಕಾಣೆಯಾಗಿದ್ದಾರೆ.</p>.ಅಧಿಕೃತ ನಿವಾಸದಿಂದ ಮಾಜಿ ಸಿಜೆಐ ಚಂದ್ರಚೂಡ್ ತೆರವಿಗೆ SC ಆಡಳಿತ ಮಂಡಳಿ ಪತ್ರ.'ಕೊಡವ ಸಮಾಜದ ಮೊದಲ ನಟಿ ನಾನೇ' ಎಂದು ಹೇಳಿಕೊಂಡ ರಶ್ಮಿಕಾ ಮಂದಣ್ಣ.ತೆಲಂಗಾಣ ಔಷಧ ಕಾರ್ಖಾನೆ ಸ್ಫೋಟ: ಮತ್ತೊಬ್ಬ ಸಾವು, ಮೃತರ ಸಂಖ್ಯೆ 41ಕ್ಕೇರಿಕೆ.PSI ಎಂದು ಬರೋಬ್ಬರಿ 2 ವರ್ಷ ವಂಚಿಸಿದ್ದ ರಾಜಸ್ಥಾನದ ಮೋನಾ ಅಲಿಯಾಸ್ ‘ಮೂಲಿ’ ಬಂಧನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಮ್ಲಾ</strong>: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಪರಿಹಾರ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ಇದೇ ರೀತಿ ಮುಂದುವರಿದರೆ 20 ವರ್ಷವಾದರೂ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಂಸದೆ ಕಂಗನಾ ರನೌತ್ ಭಾನುವಾರ ತಿಳಿಸಿದ್ದಾರೆ.</p><p>ಪ್ರವಾಹ ಪೀಡಿತ ಮಂಡಿ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ ಕಂಗನಾ, ಜಿಲ್ಲೆಯ ಜನರ ದುಃಸ್ಥಿತಿ ನೋಡಿದರೆ ದುಃಖವಾಗುತ್ತದೆ. ಸಂಬಂಧಿಕರನ್ನು ಕಳೆದುಕೊಂಡ ಕುಟುಂಬದವರಿಗೆ ಸಾಂತ್ವನ ಹೇಳಬಹುದು. ಆದರೆ ಇದೀಗ ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ನೀಡಬೇಕು ಎಂದು ಹೇಳಿದ್ದಾರೆ.</p>.ಹಿಂದಿ ಭಾಷಿಗರ ಮೇಲಿನ ಹಲ್ಲೆ: ಪಹಲ್ಗಾಮ್ ದಾಳಿಗೆ ಸಮ; ಮಹಾರಾಷ್ಟ್ರ ಸಚಿವ ಆಶಿಶ್ .ಮಗುವಿನ ಹೊಟ್ಟೆ ಉಬ್ಬರ ಸಮಸ್ಯೆಗೆ ಕಾದ ಕಬ್ಬಿಣದ ಸರಳಿಂದ ಬರೆ ಹಾಕಿದ ಮಹಿಳೆ ವಶಕ್ಕೆ. <p>'ಪರಿಹಾರ ಕಾರ್ಯಗಳನ್ನು ರಾಜ್ಯ ಸರ್ಕಾರವೇ ಮಾಡಬೇಕು. ಒಬ್ಬ ಸಂಸದಳಾಗಿ, ನಾನು ಪ್ರಧಾನಿ ಮತ್ತು ಗೃಹ ಸಚಿವರಿಗೆ ಪರಿಸ್ಥಿತಿಯ ಬಗ್ಗೆ ತಿಳಿಸಬಹುದು. ಸಹಾಯವನ್ನು ಪಡೆಯಬಹುದು' ಎಂದು ಕಂಗನಾ ತಿಳಿಸಿದ್ದಾರೆ.</p><p>'ನಾವು ಸಂಸದರಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ಕೊಂಡಿಯಾಗಿದ್ದೇವೆ. ಕೇಂದ್ರದಿಂದ ರಾಜ್ಯಕ್ಕೆ ಯೋಜನೆಗಳನ್ನು ತಲುಪಿಸುವಲ್ಲಿ ಮತ್ತು ನಮ್ಮ ಕ್ಷೇತ್ರಗಳ ಸಮಸ್ಯೆಗಳು ಮತ್ತು ಕುಂದು ಕೊರತೆಗಳನ್ನು ಕೇಂದ್ರಕ್ಕೆ ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತೇವೆ' ಎಂದು ಕಂಗನಾ ಹೇಳಿದ್ದಾರೆ.</p><p>ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ, ದಿಢೀರ್ ಪ್ರವಾಹ ಮತ್ತು ಭೂಕುಸಿತದಿಂದ 14 ಮಂದಿ ಮೃತಪಟ್ಟಿದ್ದರೆ, 31 ಮಂದಿ ಕಾಣೆಯಾಗಿದ್ದಾರೆ.</p>.ಅಧಿಕೃತ ನಿವಾಸದಿಂದ ಮಾಜಿ ಸಿಜೆಐ ಚಂದ್ರಚೂಡ್ ತೆರವಿಗೆ SC ಆಡಳಿತ ಮಂಡಳಿ ಪತ್ರ.'ಕೊಡವ ಸಮಾಜದ ಮೊದಲ ನಟಿ ನಾನೇ' ಎಂದು ಹೇಳಿಕೊಂಡ ರಶ್ಮಿಕಾ ಮಂದಣ್ಣ.ತೆಲಂಗಾಣ ಔಷಧ ಕಾರ್ಖಾನೆ ಸ್ಫೋಟ: ಮತ್ತೊಬ್ಬ ಸಾವು, ಮೃತರ ಸಂಖ್ಯೆ 41ಕ್ಕೇರಿಕೆ.PSI ಎಂದು ಬರೋಬ್ಬರಿ 2 ವರ್ಷ ವಂಚಿಸಿದ್ದ ರಾಜಸ್ಥಾನದ ಮೋನಾ ಅಲಿಯಾಸ್ ‘ಮೂಲಿ’ ಬಂಧನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>