‘ಇದು ರಾಜಕೀಯ ವಿಷಯವಲ್ಲ. ಹಿಮಾಚಲ ಪ್ರದೇಶದಿಂದ ಆಹ್ವಾನಿತರಾಗಿರುವ ಕೆಲವೇ ಮಂದಿಯ ಪೈಕಿ ನಾನೂ ಒಬ್ಬನಾಗಿರುವುದು ಅದೃಷ್ಟವೆಂದೇ ಭಾವಿಸುತ್ತೇನೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಈ ಗೌರವ ನೀಡಿದ ಆರ್ಎಸ್ಎಸ್ ಹಾಗೂ ವಿಶ್ವಹಿಂದೂ ಪರಿಷತ್ಗೆ ಧನ್ಯವಾದಗಳು’ ಎಂದು ಅವರು ಹೇಳಿದ್ದಾರೆ.
‘ಈ ಐತಿಹಾಸಿಕ ದಿನದಂದು ಭಾಗಿಯಾಗುವುದು ಜೀವಮಾನದ ಅವಕಾಶ. ಓರ್ವ ಹಿಂದೂ ಆಗಿ, ದೇವರಲ್ಲಿ ವಿಶ್ವಾಸ ಇದ್ದವನಾಗಿ, ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗುವುದು ನನ್ನ ಕರ್ತವ್ಯವೆಂದೇ ಭಾವಿಸಿದ್ದೇನೆ’ ಎಂದು ಅವರು ನುಡಿದಿದ್ದಾರೆ.