<p>ಪಿಟಿಐ</p>.<p><strong>ಅಹಮದಾಬಾದ್</strong>: ‘ಸುರೇಂದ್ರ ನಗರದ ಮಾಜಿ ಜಿಲ್ಲಾಧಿಕಾರಿಯೂ ಆಗಿರುವ ಐಎಎಸ್ ಅಧಿಕಾರಿ ರಾಜೇಂದ್ರ ಕುಮಾರ್ ಪಟೇಲ್ ಅವರು ಭೂ ಬಳಕೆ ಬದಲಾವಣೆ ಅರ್ಜಿಯನ್ನು ಅನುಮೋದಿಸಲು ಒಂದು ಚದರ ಮೀಟರ್ಗೆ ₹5ರಿಂದ ₹10 ಲಂಚ ಪಡೆಯುತ್ತಿದ್ದರು’ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೇಳಿದೆ.</p>.<p>ಪಟೇಲ್ ಅವರನ್ನು ವಶಕ್ಕೆ ನೀಡುವಂತೆ ಜ.2ರಂದು ಇ.ಡಿ ಅಧಿಕಾರಿಗಳು ಪಿಎಂಎಲ್ಎ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜ.7ರವರೆಗೆ ನ್ಯಾಯಾಲಯವು ರಾಜೇಂದ್ರ ಕುಮಾರ್ ಅವರನ್ನು ಇ.ಡಿ. ವಶಕ್ಕೆ ನೀಡಿತು. ಅರ್ಜಿಯಲ್ಲಿ ಈ ಎಲ್ಲ ಮಾಹಿತಿಯನ್ನು ವಿವರಿಸಲಾಗಿದೆ. ಪಟೇಲ್ ವಿರುದ್ಧದ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಇ.ಡಿ ನಡೆಸುತ್ತಿದೆ.</p>.<p>‘ಅರ್ಜಿಗಳು ತ್ವರಿತವಾಗಿ ಅನುಮೋದನೆಗೊಳ್ಳಬೇಕು ಎಂದಾದರೆ ‘ತ್ವರಿತವಾಗಿ ಹಣ’ ಸಂದಾಯವಾಗಬೇಕಿತ್ತು. ಜಿಲ್ಲಾಧಿಕಾರಿ ಕಚೇರಿಯೇ ಈ ಭ್ರಷ್ಟಾಚಾರ ಜಾಲವನ್ನು ನಿರ್ವಹಿಸುತ್ತಿತ್ತು. ಭೂ ಬಳಕೆ ಬದಲಾವಣೆಯ ಸುಮಾರು 800ಕ್ಕೂ ಅಧಿಕ ಅರ್ಜಿಗಳನ್ನು ಇಲ್ಲಿಯವರೆಗೆ ತನಿಖೆ ಒಳಪಡಿಸಲಾಗಿದೆ. ಇವುಗಳಿಂದ ಸುಮಾರು ₹10 ಕೋಟಿ ಲಂಚವನ್ನು ಪಡೆದುಕೊಳ್ಳಲಾಗಿದೆ. ಪ್ರಕರಣ ಬಹಿರಂಗವಾದ ಬಳಿಕ, ಪಟೇಲ್ ಅವರನ್ನು ಕಳೆದ ವಾರ ಜಾಗ ಸೂಚಿಸದೇ ವರ್ಗಾವಣೆ ಮಾಡಲಾಗಿದೆ’ ಎಂದು ಇ.ಡಿ ತಿಳಿಸಿದೆ.</p>.<p>‘ಪಟೇಲ್ ಅವರ ಆಪ್ತ ಸಹಾಯಕನ ಮೂಲಕವೇ ಎಲ್ಲ ಕೆಲಸಗಳು ನಡೆಯುತ್ತಿದ್ದವು. ಅರ್ಜಿಯೊಂದರಿಂದ ಪಡೆದ ಲಂಚದ ಶೇ 50ರಷ್ಟು ಹಣವು ಪಟೇಲ್ ಅವರಿಗೇ ಸಂದಾಯವಾಗುತ್ತಿತ್ತು. ಮತ್ತು ಇವರೇ ಈ ಜಾಲದ ಸೂತ್ರಧಾರರು. ಶೇ 10ರಷ್ಟು ಹಣವು ಮಧ್ಯವರ್ತಿಗೆ ಸಂದಾಯವಾಗುತ್ತಿದೆ. ಉಳಿದ ಹಣವನ್ನು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಹಂಚಿಕೊಳ್ಳುತ್ತಿದ್ದರು’ ಎಂದು ಇ.ಡಿ ಹೇಳಿದೆ.</p>.<p>ರಾಜೇಂದ್ರ ಅವರ ಪಿಎ ಜಯರಾಜ್ ಸಿನ್ಹಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಇ.ಡಿ ಅಧಿಕಾರಿಗಳು, ಅವರ ಮೊಬೈಲ್ನಿಂದ ಹಲವು ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಿಟಿಐ</p>.<p><strong>ಅಹಮದಾಬಾದ್</strong>: ‘ಸುರೇಂದ್ರ ನಗರದ ಮಾಜಿ ಜಿಲ್ಲಾಧಿಕಾರಿಯೂ ಆಗಿರುವ ಐಎಎಸ್ ಅಧಿಕಾರಿ ರಾಜೇಂದ್ರ ಕುಮಾರ್ ಪಟೇಲ್ ಅವರು ಭೂ ಬಳಕೆ ಬದಲಾವಣೆ ಅರ್ಜಿಯನ್ನು ಅನುಮೋದಿಸಲು ಒಂದು ಚದರ ಮೀಟರ್ಗೆ ₹5ರಿಂದ ₹10 ಲಂಚ ಪಡೆಯುತ್ತಿದ್ದರು’ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೇಳಿದೆ.</p>.<p>ಪಟೇಲ್ ಅವರನ್ನು ವಶಕ್ಕೆ ನೀಡುವಂತೆ ಜ.2ರಂದು ಇ.ಡಿ ಅಧಿಕಾರಿಗಳು ಪಿಎಂಎಲ್ಎ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜ.7ರವರೆಗೆ ನ್ಯಾಯಾಲಯವು ರಾಜೇಂದ್ರ ಕುಮಾರ್ ಅವರನ್ನು ಇ.ಡಿ. ವಶಕ್ಕೆ ನೀಡಿತು. ಅರ್ಜಿಯಲ್ಲಿ ಈ ಎಲ್ಲ ಮಾಹಿತಿಯನ್ನು ವಿವರಿಸಲಾಗಿದೆ. ಪಟೇಲ್ ವಿರುದ್ಧದ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಇ.ಡಿ ನಡೆಸುತ್ತಿದೆ.</p>.<p>‘ಅರ್ಜಿಗಳು ತ್ವರಿತವಾಗಿ ಅನುಮೋದನೆಗೊಳ್ಳಬೇಕು ಎಂದಾದರೆ ‘ತ್ವರಿತವಾಗಿ ಹಣ’ ಸಂದಾಯವಾಗಬೇಕಿತ್ತು. ಜಿಲ್ಲಾಧಿಕಾರಿ ಕಚೇರಿಯೇ ಈ ಭ್ರಷ್ಟಾಚಾರ ಜಾಲವನ್ನು ನಿರ್ವಹಿಸುತ್ತಿತ್ತು. ಭೂ ಬಳಕೆ ಬದಲಾವಣೆಯ ಸುಮಾರು 800ಕ್ಕೂ ಅಧಿಕ ಅರ್ಜಿಗಳನ್ನು ಇಲ್ಲಿಯವರೆಗೆ ತನಿಖೆ ಒಳಪಡಿಸಲಾಗಿದೆ. ಇವುಗಳಿಂದ ಸುಮಾರು ₹10 ಕೋಟಿ ಲಂಚವನ್ನು ಪಡೆದುಕೊಳ್ಳಲಾಗಿದೆ. ಪ್ರಕರಣ ಬಹಿರಂಗವಾದ ಬಳಿಕ, ಪಟೇಲ್ ಅವರನ್ನು ಕಳೆದ ವಾರ ಜಾಗ ಸೂಚಿಸದೇ ವರ್ಗಾವಣೆ ಮಾಡಲಾಗಿದೆ’ ಎಂದು ಇ.ಡಿ ತಿಳಿಸಿದೆ.</p>.<p>‘ಪಟೇಲ್ ಅವರ ಆಪ್ತ ಸಹಾಯಕನ ಮೂಲಕವೇ ಎಲ್ಲ ಕೆಲಸಗಳು ನಡೆಯುತ್ತಿದ್ದವು. ಅರ್ಜಿಯೊಂದರಿಂದ ಪಡೆದ ಲಂಚದ ಶೇ 50ರಷ್ಟು ಹಣವು ಪಟೇಲ್ ಅವರಿಗೇ ಸಂದಾಯವಾಗುತ್ತಿತ್ತು. ಮತ್ತು ಇವರೇ ಈ ಜಾಲದ ಸೂತ್ರಧಾರರು. ಶೇ 10ರಷ್ಟು ಹಣವು ಮಧ್ಯವರ್ತಿಗೆ ಸಂದಾಯವಾಗುತ್ತಿದೆ. ಉಳಿದ ಹಣವನ್ನು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಹಂಚಿಕೊಳ್ಳುತ್ತಿದ್ದರು’ ಎಂದು ಇ.ಡಿ ಹೇಳಿದೆ.</p>.<p>ರಾಜೇಂದ್ರ ಅವರ ಪಿಎ ಜಯರಾಜ್ ಸಿನ್ಹಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಇ.ಡಿ ಅಧಿಕಾರಿಗಳು, ಅವರ ಮೊಬೈಲ್ನಿಂದ ಹಲವು ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>