<p><strong>ನವದೆಹಲಿ</strong>: ನೇಪಾಳದಲ್ಲಿ ಅಸ್ಥಿರತೆ ಸೃಷ್ಟಿಯಾಗಿರುವ ಬೆನ್ನಲ್ಲೇ, ಪರಿಸ್ಥಿತಿ ತಹಬದಿಗೆ ತರುವ ತನಕವೂ ನೆರೆ ರಾಷ್ಟ್ರಕ್ಕೆ ಭೇಟಿ ನೀಡುವುದನ್ನು ಮುಂದೂಡುವಂತೆ ನಾಗರಿಕರಿಗೆ ಸರ್ಕಾರ ಸೂಚಿಸಿದೆ.</p>.<p>‘ಈಗಾಗಲೇ ನೇಪಾಳದಲ್ಲಿರುವ ಭಾರತೀಯರು ಯಾವುದೇ ಕಾರಣಕ್ಕೂ ರಸ್ತೆಗಿಳಿಯಬಾರದು, ಸಂಘರ್ಷದ ಸ್ಥಳದತ್ತ ಹೋಗಬಾರದು’ ಎಂದು ಕೇಂದ್ರ ವಿದೇಶಾಂಗ ಇಲಾಖೆ (ಎಂಇಇಎ) ಬಿಡುಗಡೆಗೊಳಿಸಿರುವ ಸಲಹಾ ಪ್ರಕಟಣೆಯಲ್ಲಿ ತಿಳಿಸಿದೆ.</p>.<p>‘ನೇಪಾಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿಕೊಂಡು, ಪರಿಸ್ಥಿತಿ ತಿಳಿಯಾಗುವವರೆಗೂ ಭಾರತದ ನಾಗರಿಕರು ತಮ್ಮ ಪ್ರವಾಸವನ್ನು ಮುಂದೂಡಬೇಕು. ಈಗಾಗಲೇ ಆ ದೇಶದಲ್ಲಿದ್ದರೆ, ತಾವು ಇರುವ ಜಾಗದಲ್ಲೇ ಉಳಿಯಬೇಕು. ಯಾವುದೇ ಕಾರಣಕ್ಕೂ ಬೀದಿಗಿಳಿಯಬಾರದು’ ಎಂದು ಎಂಇಎ ಹೇಳಿದೆ.</p>.<p>ತುರ್ತು ಸಹಾಯವಾಣಿ ಸ್ಥಾಪನೆ: ನೇಪಾಳದಲ್ಲಿರುವ ಭಾರತೀಯರು ಯಾವುದೇ ಸಮಸ್ಯೆ ಎದುರಾದರೆ, ಕಠ್ಮಂಡುವಿನಲ್ಲಿ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ. </p>.<p>ನೆರವಿಗಾಗಿ +977 – 980 860 2881, +977 – 981 032 6134 ಸಂಪರ್ಕಿಸಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ನೇಪಾಳದಲ್ಲಿ ಅಸ್ಥಿರತೆ ಸೃಷ್ಟಿಯಾಗಿರುವ ಬೆನ್ನಲ್ಲೇ, ಪರಿಸ್ಥಿತಿ ತಹಬದಿಗೆ ತರುವ ತನಕವೂ ನೆರೆ ರಾಷ್ಟ್ರಕ್ಕೆ ಭೇಟಿ ನೀಡುವುದನ್ನು ಮುಂದೂಡುವಂತೆ ನಾಗರಿಕರಿಗೆ ಸರ್ಕಾರ ಸೂಚಿಸಿದೆ.</p>.<p>‘ಈಗಾಗಲೇ ನೇಪಾಳದಲ್ಲಿರುವ ಭಾರತೀಯರು ಯಾವುದೇ ಕಾರಣಕ್ಕೂ ರಸ್ತೆಗಿಳಿಯಬಾರದು, ಸಂಘರ್ಷದ ಸ್ಥಳದತ್ತ ಹೋಗಬಾರದು’ ಎಂದು ಕೇಂದ್ರ ವಿದೇಶಾಂಗ ಇಲಾಖೆ (ಎಂಇಇಎ) ಬಿಡುಗಡೆಗೊಳಿಸಿರುವ ಸಲಹಾ ಪ್ರಕಟಣೆಯಲ್ಲಿ ತಿಳಿಸಿದೆ.</p>.<p>‘ನೇಪಾಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿಕೊಂಡು, ಪರಿಸ್ಥಿತಿ ತಿಳಿಯಾಗುವವರೆಗೂ ಭಾರತದ ನಾಗರಿಕರು ತಮ್ಮ ಪ್ರವಾಸವನ್ನು ಮುಂದೂಡಬೇಕು. ಈಗಾಗಲೇ ಆ ದೇಶದಲ್ಲಿದ್ದರೆ, ತಾವು ಇರುವ ಜಾಗದಲ್ಲೇ ಉಳಿಯಬೇಕು. ಯಾವುದೇ ಕಾರಣಕ್ಕೂ ಬೀದಿಗಿಳಿಯಬಾರದು’ ಎಂದು ಎಂಇಎ ಹೇಳಿದೆ.</p>.<p>ತುರ್ತು ಸಹಾಯವಾಣಿ ಸ್ಥಾಪನೆ: ನೇಪಾಳದಲ್ಲಿರುವ ಭಾರತೀಯರು ಯಾವುದೇ ಸಮಸ್ಯೆ ಎದುರಾದರೆ, ಕಠ್ಮಂಡುವಿನಲ್ಲಿ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ. </p>.<p>ನೆರವಿಗಾಗಿ +977 – 980 860 2881, +977 – 981 032 6134 ಸಂಪರ್ಕಿಸಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>