<p><strong>ನವದೆಹಲಿ:</strong> ಜಮ್ಮುವಿನಲ್ಲಿ ಚಿನಾಬ್ ನದಿಗೆ ಅಡ್ಡಲಾಗಿ ಕಟ್ಟಿರುವ ಬಗಲಿಹಾರ್ ಅಣೆಕಟ್ಟೆಯಿಂದ ನೀರಿನ ಹರಿವನ್ನು ಭಾರತ ತಡೆಹಿಡಿದಿದೆ. ಅಲ್ಲದೆ, ಝೇಲಮ್ ನದಿಗೆ ಕಾಶ್ಮೀರದಲ್ಲಿ ಕಟ್ಟಿರುವ ಕಿಶನ್ಗಂಗಾ ಅಣೆಕಟ್ಟೆಯಿಂದಲೂ ನೀರಿನ ಹರಿವು ಸ್ಥಗಿತಗೊಳಿಸಲು ಚಿಂತನೆ ನಡೆಸಿದೆ.</p>.<p>ಪಹಲ್ಗಾಮ್ನಲ್ಲಿನ ಉಗ್ರರ ದಾಳಿ ಕೃತ್ಯದ ಬಳಿಕ ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತಿನಲ್ಲಿ ಇಟ್ಟಿತ್ತು. ಅದರ ಹಿಂದೆಯೇ ಈಗ ಅಣೆಕಟ್ಟಯಿಂದ ನೀರಿನ ಹೊರ ಹರಿವನ್ನು ತಡೆಹಿಡಿದಿದೆ. </p>.<p>ಈ ಬೆಳವಣಿಗೆ ಕುರಿತಂತೆ ಅರಿವಿರುವ ಮೂಲಗಳ ಪ್ರಕಾರ, ಈ ಎರಡೂ ಅಣೆಕಟ್ಟೆಗಳಿಂದ ನೀರಿನ ಹೊರಹರಿವಿನ ಸಮಯವನ್ನು ನಿರ್ಧರಿಸುವ ಅಧಿಕಾರವನ್ನು ಭಾರತ ಹೊಂದಿದೆ. </p>.<p>ಸಿಂಧೂ ಮತ್ತು ಅದರ ಉಪನದಿಗಳ ನೀರಿನ ಹಂಚಿಕೆ ಸಂಬಂಧ ವಿಶ್ವಬ್ಯಾಂಕ್ನ ಮಧ್ಯಸ್ಥಿಕೆಯಲ್ಲಿ 1960ರಲ್ಲಿ ಭಾರತ–ಪಾಕಿಸ್ತಾನ ಈ ಒಪ್ಪಂದಕ್ಕೆ ಸಹಿ ಹಾಕಿದ್ದವು.</p>.<p>ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿಯೇ ಬಗಲಿಹಾರ್ ಅಣೆಕಟ್ಟೆ ನಿರ್ವಹಣೆ ಆಗಬೇಕು ಎಂದು ಪಾಕಿಸ್ತಾನ ಹಿಂದೆ ಒತ್ತಾಯಿಸಿತ್ತು. ಝೇಲಮ್ ಉಪನದಿ ನೀಲಂನಲ್ಲಿ ನೀರಿನ ಹರಿವಿನ ಮೇಲೆ ಪರಿಣಾಮ ಬೀರಲಿದೆ ಎಂಬ ಕಾರಣಕ್ಕೆ ಕಿಶನ್ಗಂಗಾ ಅಣೆಗಟ್ಟೆಯು ಕಾನೂನು, ರಾಜತಾಂತ್ರಿಕ ಪರಿಶೀಲನೆಗೆ ಒಳಪಟ್ಟಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಜಮ್ಮುವಿನಲ್ಲಿ ಚಿನಾಬ್ ನದಿಗೆ ಅಡ್ಡಲಾಗಿ ಕಟ್ಟಿರುವ ಬಗಲಿಹಾರ್ ಅಣೆಕಟ್ಟೆಯಿಂದ ನೀರಿನ ಹರಿವನ್ನು ಭಾರತ ತಡೆಹಿಡಿದಿದೆ. ಅಲ್ಲದೆ, ಝೇಲಮ್ ನದಿಗೆ ಕಾಶ್ಮೀರದಲ್ಲಿ ಕಟ್ಟಿರುವ ಕಿಶನ್ಗಂಗಾ ಅಣೆಕಟ್ಟೆಯಿಂದಲೂ ನೀರಿನ ಹರಿವು ಸ್ಥಗಿತಗೊಳಿಸಲು ಚಿಂತನೆ ನಡೆಸಿದೆ.</p>.<p>ಪಹಲ್ಗಾಮ್ನಲ್ಲಿನ ಉಗ್ರರ ದಾಳಿ ಕೃತ್ಯದ ಬಳಿಕ ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತಿನಲ್ಲಿ ಇಟ್ಟಿತ್ತು. ಅದರ ಹಿಂದೆಯೇ ಈಗ ಅಣೆಕಟ್ಟಯಿಂದ ನೀರಿನ ಹೊರ ಹರಿವನ್ನು ತಡೆಹಿಡಿದಿದೆ. </p>.<p>ಈ ಬೆಳವಣಿಗೆ ಕುರಿತಂತೆ ಅರಿವಿರುವ ಮೂಲಗಳ ಪ್ರಕಾರ, ಈ ಎರಡೂ ಅಣೆಕಟ್ಟೆಗಳಿಂದ ನೀರಿನ ಹೊರಹರಿವಿನ ಸಮಯವನ್ನು ನಿರ್ಧರಿಸುವ ಅಧಿಕಾರವನ್ನು ಭಾರತ ಹೊಂದಿದೆ. </p>.<p>ಸಿಂಧೂ ಮತ್ತು ಅದರ ಉಪನದಿಗಳ ನೀರಿನ ಹಂಚಿಕೆ ಸಂಬಂಧ ವಿಶ್ವಬ್ಯಾಂಕ್ನ ಮಧ್ಯಸ್ಥಿಕೆಯಲ್ಲಿ 1960ರಲ್ಲಿ ಭಾರತ–ಪಾಕಿಸ್ತಾನ ಈ ಒಪ್ಪಂದಕ್ಕೆ ಸಹಿ ಹಾಕಿದ್ದವು.</p>.<p>ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿಯೇ ಬಗಲಿಹಾರ್ ಅಣೆಕಟ್ಟೆ ನಿರ್ವಹಣೆ ಆಗಬೇಕು ಎಂದು ಪಾಕಿಸ್ತಾನ ಹಿಂದೆ ಒತ್ತಾಯಿಸಿತ್ತು. ಝೇಲಮ್ ಉಪನದಿ ನೀಲಂನಲ್ಲಿ ನೀರಿನ ಹರಿವಿನ ಮೇಲೆ ಪರಿಣಾಮ ಬೀರಲಿದೆ ಎಂಬ ಕಾರಣಕ್ಕೆ ಕಿಶನ್ಗಂಗಾ ಅಣೆಗಟ್ಟೆಯು ಕಾನೂನು, ರಾಜತಾಂತ್ರಿಕ ಪರಿಶೀಲನೆಗೆ ಒಳಪಟ್ಟಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>