<p><strong>ನವದೆಹಲಿ</strong>: ‘ತೈವಾನ್ ಕುರಿತಂತೆ ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಸರ್ಕಾರದ ಮೂಲಗಳು ಮಂಗಳವಾರ ಸ್ಪಷ್ಟಪಡಿಸಿವೆ.</p>.<p>‘ವಿಶ್ವದ ಇತರ ರಾಷ್ಟ್ರಗಳಂತೆ, ಭಾರತ ಕೂಡ ತೈವಾನ್ ಜೊತೆ ದ್ವಿಪಕ್ಷೀಯ ಸಂಬಂಧ ಹೊಂದಿದೆ. ಆರ್ಥಿಕತೆ, ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಒಪ್ಪಂದಗಳ ಮೇಲೆ ಈ ಸಂಬಂಧ ಕೇಂದ್ರೀಕೃತವಾಗಿದೆ’ ಎಂದು ಕೇಂದ್ರ ಸರ್ಕಾರ ಹೇಳಿದ್ದಾಗಿ ಇವೇ ಮೂಲಗಳು ತಿಳಿಸಿವೆ.</p>.<p>ಸಚಿವ ಎಸ್.ಜೈಶಂಕರ್ ಅವರು ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಸೋಮವಾರ ಮಾತುಕತೆ ನಡೆಸಿದ ಬಳಿಕ ಚೀನಾ ವಿದೇಶಾಂಗ ಸಚಿವಾಲಯ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು.</p>.<p>‘ಭಾರತವು ತೈನಾನ್ಅನ್ನು ಚೀನಾದ ಭಾಗವೆಂದು ಭಾರತ ಪರಿಗಣಿಸುತ್ತದೆ ಎಂಬುದಾಗಿ ಜೈಶಂಕರ್ ಅವರ ವಾಂಗ್ ಯಿ ಅವರಿಗೆ ಸೋಮವಾರದ ಸಭೆಯಲ್ಲಿ ಹೇಳಿದ್ದರು’ ಎಂಬುದಾಗಿ ಈ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಈ ಸ್ಪಷ್ಟನೆ ನೀಡಿದೆ. </p>.<p>ಈ ಬೆಳವಣಿಗೆಗಳ ನಂತರ, ‘ಜೈಶಂಕರ್ ಅವರ ಹೇಳಿಕೆಯನ್ನು ಚೀನಾ ವಿದೇಶಾಂಗ ಸಚಿವಾಲಯ ತಪ್ಪಾಗಿ ಉಲ್ಲೇಖಿಸಿತ್ತು’ ಎಂದೂ ಮೂಲಗಳು ಹೇಳಿವೆ.</p>.<p>ಚೀನಾ ಹೇಳಿಕೆ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದ ಸಚಿವ ಜೈಶಂಕರ್, ‘ಗಡಿ ವಿಚಾರವಾಗಿ ಭಾರತದೊಂದಿಗೆ ಯಾವ ರೀತಿ ಚೀನಾ ವ್ಯವಹರಿಸುತ್ತಿದೆಯೋ ಅದೇ ರೀತಿ ತೈವಾನ್ನೊಂದಿಗೂ ವ್ಯವಹರಿಸುತ್ತಿದೆ’ ಎಂದು ಪ್ರತಿಕ್ರಿಯಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ತೈವಾನ್ ಕುರಿತಂತೆ ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಸರ್ಕಾರದ ಮೂಲಗಳು ಮಂಗಳವಾರ ಸ್ಪಷ್ಟಪಡಿಸಿವೆ.</p>.<p>‘ವಿಶ್ವದ ಇತರ ರಾಷ್ಟ್ರಗಳಂತೆ, ಭಾರತ ಕೂಡ ತೈವಾನ್ ಜೊತೆ ದ್ವಿಪಕ್ಷೀಯ ಸಂಬಂಧ ಹೊಂದಿದೆ. ಆರ್ಥಿಕತೆ, ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಒಪ್ಪಂದಗಳ ಮೇಲೆ ಈ ಸಂಬಂಧ ಕೇಂದ್ರೀಕೃತವಾಗಿದೆ’ ಎಂದು ಕೇಂದ್ರ ಸರ್ಕಾರ ಹೇಳಿದ್ದಾಗಿ ಇವೇ ಮೂಲಗಳು ತಿಳಿಸಿವೆ.</p>.<p>ಸಚಿವ ಎಸ್.ಜೈಶಂಕರ್ ಅವರು ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಸೋಮವಾರ ಮಾತುಕತೆ ನಡೆಸಿದ ಬಳಿಕ ಚೀನಾ ವಿದೇಶಾಂಗ ಸಚಿವಾಲಯ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು.</p>.<p>‘ಭಾರತವು ತೈನಾನ್ಅನ್ನು ಚೀನಾದ ಭಾಗವೆಂದು ಭಾರತ ಪರಿಗಣಿಸುತ್ತದೆ ಎಂಬುದಾಗಿ ಜೈಶಂಕರ್ ಅವರ ವಾಂಗ್ ಯಿ ಅವರಿಗೆ ಸೋಮವಾರದ ಸಭೆಯಲ್ಲಿ ಹೇಳಿದ್ದರು’ ಎಂಬುದಾಗಿ ಈ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಈ ಸ್ಪಷ್ಟನೆ ನೀಡಿದೆ. </p>.<p>ಈ ಬೆಳವಣಿಗೆಗಳ ನಂತರ, ‘ಜೈಶಂಕರ್ ಅವರ ಹೇಳಿಕೆಯನ್ನು ಚೀನಾ ವಿದೇಶಾಂಗ ಸಚಿವಾಲಯ ತಪ್ಪಾಗಿ ಉಲ್ಲೇಖಿಸಿತ್ತು’ ಎಂದೂ ಮೂಲಗಳು ಹೇಳಿವೆ.</p>.<p>ಚೀನಾ ಹೇಳಿಕೆ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದ ಸಚಿವ ಜೈಶಂಕರ್, ‘ಗಡಿ ವಿಚಾರವಾಗಿ ಭಾರತದೊಂದಿಗೆ ಯಾವ ರೀತಿ ಚೀನಾ ವ್ಯವಹರಿಸುತ್ತಿದೆಯೋ ಅದೇ ರೀತಿ ತೈವಾನ್ನೊಂದಿಗೂ ವ್ಯವಹರಿಸುತ್ತಿದೆ’ ಎಂದು ಪ್ರತಿಕ್ರಿಯಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>