<p class="title"><strong>ನವದೆಹಲಿ</strong>: ಭಯೋತ್ಪಾದಕ ಕೃತ್ಯಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸುವ ನಿಟ್ಟಿನಲ್ಲಿ ಭಾರತ ಮತ್ತು ಶ್ರೀಲಂಕಾ 12 ದಿನ ಅವಧಿಯ ದೊಡ್ಡ ಸೇನಾ ಕಾರ್ಯಾಚರಣೆಯೊಂದನ್ನು ಹಮ್ಮಿಕೊಂಡಿವೆ.</p>.<p class="title">‘ಮಿತ್ರ ಶಕ್ತಿ’ ಹೆಸರಿನ ಸೇನಾ ಕಾರ್ಯಾಚರಣೆಯ 8ನೇ ಆವೃತ್ತಿಯು ಅಕ್ಟೋಬರ್ 4ರಿಂದ 15ರವರೆಗೆ ಶ್ರೀಲಂಕಾದ ಅಂಪಾರದಲ್ಲಿರುವ ಯುದ್ಧ ತರಬೇತಿ ಶಾಲೆಯಲ್ಲಿ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ಶನಿವಾರ ಹೇಳಿದೆ.</p>.<p class="title">‘ಉಭಯ ರಾಷ್ಟ್ರಗಳ ಸೇನೆಗಳ ನಡುವೆ ಬಾಂಧವ್ಯ ವೃದ್ಧಿಸುವುದು ಮತ್ತು ಆಂತರಿಕ ಕಾರ್ಯಾಚರಣೆ ಬಲಪಡಿಸುವುದು ಭಯೋತ್ಪಾದನೆ ನಿಗ್ರಹದ ಮಾಹಿತಿ ಹಂಚಿಕೊಳ್ಳುವುದು ಕಾರ್ಯಾಚರಣೆಯ ಉದ್ದೇಶವಾಗಿದೆ’ ಎಂದು ತಿಳಿಸಿದೆ.</p>.<p class="bodytext">ಭಾರತೀಯ ಸೇನೆಯ ಎಲ್ಲ ವಿಭಾಗದ 120 ಸಿಬ್ಬಂದಿಯ ತಂಡವು ಶ್ರೀಲಂಕಾ ಸೇನೆಯ ಬೆಟಾಲಿಯನ್ ಬಲದ ತುಕಡಿಯೊಂದಿಗೆ ಭಾಗವಹಿಸಲಿದೆ. ಭಯೋತ್ಪಾದನೆ ವಿರುದ್ಧದ ವಾತಾವರಣದಲ್ಲಿ ಸೇನಾ ಉಪ ಘಟಕದ ಹಂತದಲ್ಲಿ ಯುದ್ಧತಂತ್ರದ ಮಟ್ಟದ ಕಾರ್ಯಾಚರಣೆಯನ್ನು ಇದು ಒಳಗೊಂಡಿರುತ್ತದೆ’ ಎಂದು ಸಚಿವಾಲಯದ ಹೇಳಿಕೆಯು ತಿಳಿಸಿದೆ.</p>.<p class="bodytext">ದಕ್ಷಿಣ ಏಷಿಯಾ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ಮುಖ್ಯವಾಗಿದೆ. ಎರಡೂ ಸೇನೆಗಳ ನಡುವೆ ಸಹಭಾಗಿತ್ವ ಮತ್ತು ಸಹಕಾರ ವೃದ್ಧಿಗೆ ಇದು ಸಹಕಾರಿಯಾಗಿದೆ ಎಂದು ಸಚಿವಾಲಯ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ</strong>: ಭಯೋತ್ಪಾದಕ ಕೃತ್ಯಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸುವ ನಿಟ್ಟಿನಲ್ಲಿ ಭಾರತ ಮತ್ತು ಶ್ರೀಲಂಕಾ 12 ದಿನ ಅವಧಿಯ ದೊಡ್ಡ ಸೇನಾ ಕಾರ್ಯಾಚರಣೆಯೊಂದನ್ನು ಹಮ್ಮಿಕೊಂಡಿವೆ.</p>.<p class="title">‘ಮಿತ್ರ ಶಕ್ತಿ’ ಹೆಸರಿನ ಸೇನಾ ಕಾರ್ಯಾಚರಣೆಯ 8ನೇ ಆವೃತ್ತಿಯು ಅಕ್ಟೋಬರ್ 4ರಿಂದ 15ರವರೆಗೆ ಶ್ರೀಲಂಕಾದ ಅಂಪಾರದಲ್ಲಿರುವ ಯುದ್ಧ ತರಬೇತಿ ಶಾಲೆಯಲ್ಲಿ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ಶನಿವಾರ ಹೇಳಿದೆ.</p>.<p class="title">‘ಉಭಯ ರಾಷ್ಟ್ರಗಳ ಸೇನೆಗಳ ನಡುವೆ ಬಾಂಧವ್ಯ ವೃದ್ಧಿಸುವುದು ಮತ್ತು ಆಂತರಿಕ ಕಾರ್ಯಾಚರಣೆ ಬಲಪಡಿಸುವುದು ಭಯೋತ್ಪಾದನೆ ನಿಗ್ರಹದ ಮಾಹಿತಿ ಹಂಚಿಕೊಳ್ಳುವುದು ಕಾರ್ಯಾಚರಣೆಯ ಉದ್ದೇಶವಾಗಿದೆ’ ಎಂದು ತಿಳಿಸಿದೆ.</p>.<p class="bodytext">ಭಾರತೀಯ ಸೇನೆಯ ಎಲ್ಲ ವಿಭಾಗದ 120 ಸಿಬ್ಬಂದಿಯ ತಂಡವು ಶ್ರೀಲಂಕಾ ಸೇನೆಯ ಬೆಟಾಲಿಯನ್ ಬಲದ ತುಕಡಿಯೊಂದಿಗೆ ಭಾಗವಹಿಸಲಿದೆ. ಭಯೋತ್ಪಾದನೆ ವಿರುದ್ಧದ ವಾತಾವರಣದಲ್ಲಿ ಸೇನಾ ಉಪ ಘಟಕದ ಹಂತದಲ್ಲಿ ಯುದ್ಧತಂತ್ರದ ಮಟ್ಟದ ಕಾರ್ಯಾಚರಣೆಯನ್ನು ಇದು ಒಳಗೊಂಡಿರುತ್ತದೆ’ ಎಂದು ಸಚಿವಾಲಯದ ಹೇಳಿಕೆಯು ತಿಳಿಸಿದೆ.</p>.<p class="bodytext">ದಕ್ಷಿಣ ಏಷಿಯಾ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ಮುಖ್ಯವಾಗಿದೆ. ಎರಡೂ ಸೇನೆಗಳ ನಡುವೆ ಸಹಭಾಗಿತ್ವ ಮತ್ತು ಸಹಕಾರ ವೃದ್ಧಿಗೆ ಇದು ಸಹಕಾರಿಯಾಗಿದೆ ಎಂದು ಸಚಿವಾಲಯ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>