ಈ ಹಡಗು ಇರಾನ್ ಉದ್ಯಮಿಯೊಬ್ಬರಿಗೆ ಸೇರಿದಾಗಿದ್ದು, ತಮಿಳುನಾಡು ಮೂಲದ ಮೀನುಗಾರರಿಗೆ ಗುತ್ತಿಗೆ ನೀಡಿದ್ದರು. ಆದರೆ, ಈ ಮೀನುಗಾರರಿಗೆ ಅಗತ್ಯ ಸೌಕರ್ಯಗಳನ್ನು ನಿರಾಕರಿಸಲಾಗಿತ್ತು. ಜೊತೆಗೆ ಅವರ ಪಾಸ್ಪೋರ್ಟ್ ಅನ್ನು ತಮ್ಮ ಸ್ವಾಧೀನ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅದೇ ಹಡಗಿನಲ್ಲಿ ಇರಾನ್ನಿಂದ ತಾಯ್ನಾಡು ಭಾರತ ತಲುಪಲು ಮೀನುಗಾರರು ಬರುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ತಿಳಿದುಬಂದಿದೆ.