<p><strong>ಇಂದೋರ್:</strong> ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಗುಮಾಸ್ತ ಕೇವಲ 3 ವರ್ಷ ಅವಧಿಯಲ್ಲಿ ₹ 5 ಕೋಟಿ ಲಪಟಾಯಿಸಿ, ಸಂಬಂಧಿಕರ ಖಾತೆಗಳಿಗೆ ವರ್ಗವಾಣೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.</p>.<p>ಗುಮಾಸ್ತನನ್ನು ಮಿಲಪ್ ಸಿಂಗ್ ಚೌಹಾಣ್ ಎಂದು ಗುರುತಿಸಲಾಗಿದೆ. ಆತನಿಗೆ ಅಮಿತ್ ನಿಂಬಾಳ್ಕರ್ ಮತ್ತು ರಂಜಿತ್ ಕಿರೋಡೆ ಎಂಬ ಇನ್ನಿಬ್ಬರು ನೌಕರರು ನೆರವಾಗಿದ್ದಾರೆ. ಕೀಟಬಾಧೆ ಅಥವಾ ಇತರ ಕಾರಣಗಳಿಂದ ಹಾಳಾದ ರೈತರ ಬೆಳೆ ಪರಿಹಾರಕ್ಕಾಗಿ ಸರ್ಕಾರದಿಂದ ಬಿಡುಗಡೆಯಾದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.</p>.<p>ಆರೋಪಿಗಳು ತಮ್ಮ ಪತ್ನಿಯರು ಹಾಗೂ ಸಂಬಂಧಿಕರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿರುವುದಲ್ಲದೆ, ಭಾರಿ ಹಣವನ್ನು ಕಾಲ್ ಗರ್ಲ್ಸ್ ಹಾಗೂ ಬಾರ್ ಖರ್ಚಿಗೆ ಬಳಸಿದ್ದಾರೆ.</p>.<p>ಜಿಲ್ಲಾಧಿಕಾರಿ ಇಳೈ ರಾಜ ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜೇಶ್ ರಾಥೋರ್ ಮತ್ತು ಅವರ ತಂಡ ಸರ್ಕಾರದ ಅನುದಾನದಲ್ಲಿ ₹ 5 ಕೋಟಿಗೂ ಹೆಚ್ಚು ಕಳುವಾಗಿರುವುದನ್ನು ಗಮನಿಸಿದ್ದಾರೆ. ತನಿಖೆ ವೇಳೆ, ಸಿಬ್ಬಂದಿಯ ಬ್ಯಾಂಕ್ ವಿವರಗಳನ್ನೂ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.</p>.<p>ಈ ಸಂಬಂಧ ರವೋಜಿ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 29 ಮಂದಿಯನ್ನು ಆರೋಪಿಗಳನ್ನಾಗಿಸಲಾಗಿದೆ. ಚೌಹಾಣ್ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂದೋರ್:</strong> ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಗುಮಾಸ್ತ ಕೇವಲ 3 ವರ್ಷ ಅವಧಿಯಲ್ಲಿ ₹ 5 ಕೋಟಿ ಲಪಟಾಯಿಸಿ, ಸಂಬಂಧಿಕರ ಖಾತೆಗಳಿಗೆ ವರ್ಗವಾಣೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.</p>.<p>ಗುಮಾಸ್ತನನ್ನು ಮಿಲಪ್ ಸಿಂಗ್ ಚೌಹಾಣ್ ಎಂದು ಗುರುತಿಸಲಾಗಿದೆ. ಆತನಿಗೆ ಅಮಿತ್ ನಿಂಬಾಳ್ಕರ್ ಮತ್ತು ರಂಜಿತ್ ಕಿರೋಡೆ ಎಂಬ ಇನ್ನಿಬ್ಬರು ನೌಕರರು ನೆರವಾಗಿದ್ದಾರೆ. ಕೀಟಬಾಧೆ ಅಥವಾ ಇತರ ಕಾರಣಗಳಿಂದ ಹಾಳಾದ ರೈತರ ಬೆಳೆ ಪರಿಹಾರಕ್ಕಾಗಿ ಸರ್ಕಾರದಿಂದ ಬಿಡುಗಡೆಯಾದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.</p>.<p>ಆರೋಪಿಗಳು ತಮ್ಮ ಪತ್ನಿಯರು ಹಾಗೂ ಸಂಬಂಧಿಕರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿರುವುದಲ್ಲದೆ, ಭಾರಿ ಹಣವನ್ನು ಕಾಲ್ ಗರ್ಲ್ಸ್ ಹಾಗೂ ಬಾರ್ ಖರ್ಚಿಗೆ ಬಳಸಿದ್ದಾರೆ.</p>.<p>ಜಿಲ್ಲಾಧಿಕಾರಿ ಇಳೈ ರಾಜ ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜೇಶ್ ರಾಥೋರ್ ಮತ್ತು ಅವರ ತಂಡ ಸರ್ಕಾರದ ಅನುದಾನದಲ್ಲಿ ₹ 5 ಕೋಟಿಗೂ ಹೆಚ್ಚು ಕಳುವಾಗಿರುವುದನ್ನು ಗಮನಿಸಿದ್ದಾರೆ. ತನಿಖೆ ವೇಳೆ, ಸಿಬ್ಬಂದಿಯ ಬ್ಯಾಂಕ್ ವಿವರಗಳನ್ನೂ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.</p>.<p>ಈ ಸಂಬಂಧ ರವೋಜಿ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 29 ಮಂದಿಯನ್ನು ಆರೋಪಿಗಳನ್ನಾಗಿಸಲಾಗಿದೆ. ಚೌಹಾಣ್ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>