<p><strong>ಶಿಮ್ಲಾ</strong>: ‘ರಾಜ್ಯ ರಾಜಕೀಯದಲ್ಲಿ ಬರುವ ದಿನಗಳಲ್ಲಿ ಏನಾದರೂ ಆಗಬಹುದು. ಹೀಗಾಗಿ, ಪಕ್ಷದ ಕಾರ್ಯಕರ್ತರು ಸಿದ್ಧರಾಗಿರಬೇಕು’ ಎಂದು ಬಿಜೆಪಿ ಮುಖಂಡ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್ ಭಾನುವಾರ ಹೇಳಿದ್ದಾರೆ.</p><p>ಈ ಮೂಲಕ, ಅವರು ಹಿಮಾಚಲ ಪ್ರದೇಶದಲ್ಲಿ ಸರ್ಕಾರ ಬದಲಾಗುವ ಸುಳಿವು ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.</p>.<p>‘ರಾಜ್ಯದಲ್ಲಿನ ಪ್ರಸಕ್ತ ರಾಜಕೀಯ ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲಕರವಾಗಿಲ್ಲ. ಸಚಿವರೇ ಸಂಪುಟದಿಂದ ಹೊರಗೆ ಹೋಗುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಮುಂದುವರಿಯುವುದು ಕಷ್ಟ’ ಎಂದು ಠಾಕೂರ್ ಹೇಳಿದ್ದಾರೆ.</p><p>ಶನಿವಾರ ಸಂಪುಟ ನಡೆಯುತ್ತಿದ್ದಾಗಿನ ನಾಟಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜೈರಾಮ್ ಠಾಕೂರ್ ಈ ಹೇಳಿಕೆ ನೀಡಿದ್ದಾರೆ.</p>.<div><blockquote>6 ಬಂಡಾಯ ಶಾಸಕರು ಸೇರಿದಂತೆ 9 ಶಾಸಕರು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸಿರುವ ಕಾರಣ ಕಾಂಗ್ರೆಸ್ಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ.</blockquote><span class="attribution">–ಜೈರಾಮ್ ಠಾಕೂರ್, ವಿಧಾನಸಭೆ ವಿರೋಧ ಪಕ್ಷ ನಾಯಕ</span></div>.<p>ಸಭೆ ನಡೆಯುತ್ತಿದ್ದಾಗಲೇ ಕಂದಾಯ ಸಚಿವ ಜಗತ್ ನೇಗಿ ಹೊರ ನಡೆದಿದ್ದರು. ಸಭೆ ವೇಳೆ ನಡೆದ ವಾಗ್ವಾದದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ರೋಹಿತ್ ಠಾಕೂರ್ ಸಭೆಯಿಂದ ಹೊರ ಹೋಗಿದ್ದರು.</p><p>‘ಪೂರ್ವ ನಿಗದಿತ ಕಾರ್ಯಕ್ರಮಗಳ ಕಾರಣದಿಂದ ಸಭೆಯಿಂದ ಅರ್ಧಕ್ಕೆ ಹೊರಟಿದ್ದಾಗಿ’ ಈ ಇಬ್ಬರು ಸಚಿವರು ನಂತರ ಹೇಳಿದ್ದರು. ಈ ಪೈಕಿ, ರೋಹಿತ್ ಠಾಕೂರ್ ಅವರು ಉಪಮುಖ್ಯಮಂತ್ರಿ ಮುಕೇಶ್ ಅಗ್ನಿಹೋತ್ರಿ ಮನವೊಲಿಸಿದ್ದರಿಂದಾಗಿ ಸಂಪುಟ ಸಭೆಗೆ ಮರಳಿದ್ದರು.</p>.ಹಿಮಾಚಲ ಬಿಕ್ಕಟ್ಟು | ಒತ್ತಡ ತಂತ್ರಗಳು ಸರ್ಕಾರವನ್ನು ಉಳಿಸಲಾರವು: ಪಕ್ಷೇತರ ಶಾಸಕ.ಹಿಮಾಚಲ ಪ್ರದೇಶ: ಹಿಂತಿರುಗಲ್ಲ, 9 ಶಾಸಕರು ಸಂಪರ್ಕದಲ್ಲಿದ್ದಾರೆ- ಅನರ್ಹ MLA ರಾಣಾ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಮ್ಲಾ</strong>: ‘ರಾಜ್ಯ ರಾಜಕೀಯದಲ್ಲಿ ಬರುವ ದಿನಗಳಲ್ಲಿ ಏನಾದರೂ ಆಗಬಹುದು. ಹೀಗಾಗಿ, ಪಕ್ಷದ ಕಾರ್ಯಕರ್ತರು ಸಿದ್ಧರಾಗಿರಬೇಕು’ ಎಂದು ಬಿಜೆಪಿ ಮುಖಂಡ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್ ಭಾನುವಾರ ಹೇಳಿದ್ದಾರೆ.</p><p>ಈ ಮೂಲಕ, ಅವರು ಹಿಮಾಚಲ ಪ್ರದೇಶದಲ್ಲಿ ಸರ್ಕಾರ ಬದಲಾಗುವ ಸುಳಿವು ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.</p>.<p>‘ರಾಜ್ಯದಲ್ಲಿನ ಪ್ರಸಕ್ತ ರಾಜಕೀಯ ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲಕರವಾಗಿಲ್ಲ. ಸಚಿವರೇ ಸಂಪುಟದಿಂದ ಹೊರಗೆ ಹೋಗುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಮುಂದುವರಿಯುವುದು ಕಷ್ಟ’ ಎಂದು ಠಾಕೂರ್ ಹೇಳಿದ್ದಾರೆ.</p><p>ಶನಿವಾರ ಸಂಪುಟ ನಡೆಯುತ್ತಿದ್ದಾಗಿನ ನಾಟಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜೈರಾಮ್ ಠಾಕೂರ್ ಈ ಹೇಳಿಕೆ ನೀಡಿದ್ದಾರೆ.</p>.<div><blockquote>6 ಬಂಡಾಯ ಶಾಸಕರು ಸೇರಿದಂತೆ 9 ಶಾಸಕರು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸಿರುವ ಕಾರಣ ಕಾಂಗ್ರೆಸ್ಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ.</blockquote><span class="attribution">–ಜೈರಾಮ್ ಠಾಕೂರ್, ವಿಧಾನಸಭೆ ವಿರೋಧ ಪಕ್ಷ ನಾಯಕ</span></div>.<p>ಸಭೆ ನಡೆಯುತ್ತಿದ್ದಾಗಲೇ ಕಂದಾಯ ಸಚಿವ ಜಗತ್ ನೇಗಿ ಹೊರ ನಡೆದಿದ್ದರು. ಸಭೆ ವೇಳೆ ನಡೆದ ವಾಗ್ವಾದದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ರೋಹಿತ್ ಠಾಕೂರ್ ಸಭೆಯಿಂದ ಹೊರ ಹೋಗಿದ್ದರು.</p><p>‘ಪೂರ್ವ ನಿಗದಿತ ಕಾರ್ಯಕ್ರಮಗಳ ಕಾರಣದಿಂದ ಸಭೆಯಿಂದ ಅರ್ಧಕ್ಕೆ ಹೊರಟಿದ್ದಾಗಿ’ ಈ ಇಬ್ಬರು ಸಚಿವರು ನಂತರ ಹೇಳಿದ್ದರು. ಈ ಪೈಕಿ, ರೋಹಿತ್ ಠಾಕೂರ್ ಅವರು ಉಪಮುಖ್ಯಮಂತ್ರಿ ಮುಕೇಶ್ ಅಗ್ನಿಹೋತ್ರಿ ಮನವೊಲಿಸಿದ್ದರಿಂದಾಗಿ ಸಂಪುಟ ಸಭೆಗೆ ಮರಳಿದ್ದರು.</p>.ಹಿಮಾಚಲ ಬಿಕ್ಕಟ್ಟು | ಒತ್ತಡ ತಂತ್ರಗಳು ಸರ್ಕಾರವನ್ನು ಉಳಿಸಲಾರವು: ಪಕ್ಷೇತರ ಶಾಸಕ.ಹಿಮಾಚಲ ಪ್ರದೇಶ: ಹಿಂತಿರುಗಲ್ಲ, 9 ಶಾಸಕರು ಸಂಪರ್ಕದಲ್ಲಿದ್ದಾರೆ- ಅನರ್ಹ MLA ರಾಣಾ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>