<p class="title"><strong>ಶ್ರೀನಗರ: </strong>ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯಮ, ಉದ್ಯಮ ಮತ್ತು ಇತರೆ ಕ್ಷೇತ್ರಗಳಿಗೆ ಚೇತರಿಕೆ ನೀಡಲು ₹ 1350 ಕೋಟಿ ಗಾತ್ರದ ಆರ್ಥಿಕ ಪ್ಯಾಕೇಜ್ ಅನ್ನು ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ ಘೋಷಿಸಿದರು. ‘ಇದು, ಆರಂಭ. ಮುಂದೆ ಇನ್ನಷ್ಟು ಕೊಡುಗೆ ನೀಡಲಾಗುವುದು’ ಎಂದು ಶನಿವಾರ ತಿಳಿಸಿದರು.</p>.<p class="title">ಎರಡು ದಶಕಗಳಿಂದಲೂ ಈ ಭಾಗದಲ್ಲಿ ನೊಂದಿರುವ ಸಾಗಣೆದಾರರು, ಹೌಸ್ಬೋಟ್ ಮಾಲೀಕರು, ಶಿಖರ ವಾಲಾಗಳು ಮತ್ತು ಇತರರಿಗೆ ನೆರವಾಗುವಂತೆ ವ್ಯವಸ್ಥಿತವಾದ ಪ್ಯಾಕೇಜ್ ಅನ್ನೂ ರೂಪಿಸಲಾಗುತ್ತಿದೆ ಎಂದೂ ಸಿನ್ಹಾ ತಿಳಿಸಿದರು.</p>.<p class="title">ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಘೋಷಿಸಿರುವ ₹ 1350 ಕೋಟಿ ಗಾತ್ರದ ಪ್ಯಾಕೇಜ್, ಆತ್ಮನಿರ್ಭರ ಅಭಿಯಾನದಡಿಘೋಷಿಸಲಾಗಿರುವ ₹ 14,000 ಕೋಟಿ ಪ್ಯಾಕೇಜ್ಗೆ ಹೊರತಾಗಿದೆ. ಉಳಿದಂತೆ, ಎಲ್ಲ ಸಾಲಗಳಿಗೆ ಮಾರ್ಚ್ 2021ರವರೆಗೂ ಸ್ಟಾಂಪ್ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ. ಉದ್ಯಮಿಗಳು, ಯುವಜನರಿಗೆ ನೆರವಾಗಲು ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಜಮ್ಮು ಮತ್ತು ಕಾಶ್ಮೀರದ ಎಲ್ಲ ಬ್ಯಾಂಕ್ಗಳಲ್ಲಿ ವಿಶೇಷ ಡೆಸ್ಕ್ ಆರಂಭಿಸಲಾಗುವುದು ಎಂದು ತಿಳಿಸಿದರು.</p>.<p class="title">ಈ ವರ್ಷದ ಆಗಸ್ಟ್ನಲ್ಲಿ ಲೆಫ್ಟಿನಂಟ್ ಗವರ್ನರ್ ಆಗಿ ನೇಮಕಗೊಂಡಿರುವ ಅವರು, ಕೇಂದ್ರಾಡಳಿತ ಪ್ರದೇಶದ ಪ್ರಗತಿಗೆ ಸರ್ಕಾರ ಬದ್ಧವಾಗಿದೆ. ಇಲ್ಲಿ 15–20 ವರ್ಷಗಳಿಂದಲೂ ಉದ್ಯಮ ನಲುಗಿದೆ. ಉದ್ಯಮಕ್ಕೆ ಚೇತರಿಕೆ ನೀಡಲು ಶೀಘ್ರವೇ ನೂತನ ನೀತಿಯನ್ನು ಪ್ರಕಟಿಸಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಶ್ರೀನಗರ: </strong>ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯಮ, ಉದ್ಯಮ ಮತ್ತು ಇತರೆ ಕ್ಷೇತ್ರಗಳಿಗೆ ಚೇತರಿಕೆ ನೀಡಲು ₹ 1350 ಕೋಟಿ ಗಾತ್ರದ ಆರ್ಥಿಕ ಪ್ಯಾಕೇಜ್ ಅನ್ನು ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ ಘೋಷಿಸಿದರು. ‘ಇದು, ಆರಂಭ. ಮುಂದೆ ಇನ್ನಷ್ಟು ಕೊಡುಗೆ ನೀಡಲಾಗುವುದು’ ಎಂದು ಶನಿವಾರ ತಿಳಿಸಿದರು.</p>.<p class="title">ಎರಡು ದಶಕಗಳಿಂದಲೂ ಈ ಭಾಗದಲ್ಲಿ ನೊಂದಿರುವ ಸಾಗಣೆದಾರರು, ಹೌಸ್ಬೋಟ್ ಮಾಲೀಕರು, ಶಿಖರ ವಾಲಾಗಳು ಮತ್ತು ಇತರರಿಗೆ ನೆರವಾಗುವಂತೆ ವ್ಯವಸ್ಥಿತವಾದ ಪ್ಯಾಕೇಜ್ ಅನ್ನೂ ರೂಪಿಸಲಾಗುತ್ತಿದೆ ಎಂದೂ ಸಿನ್ಹಾ ತಿಳಿಸಿದರು.</p>.<p class="title">ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಘೋಷಿಸಿರುವ ₹ 1350 ಕೋಟಿ ಗಾತ್ರದ ಪ್ಯಾಕೇಜ್, ಆತ್ಮನಿರ್ಭರ ಅಭಿಯಾನದಡಿಘೋಷಿಸಲಾಗಿರುವ ₹ 14,000 ಕೋಟಿ ಪ್ಯಾಕೇಜ್ಗೆ ಹೊರತಾಗಿದೆ. ಉಳಿದಂತೆ, ಎಲ್ಲ ಸಾಲಗಳಿಗೆ ಮಾರ್ಚ್ 2021ರವರೆಗೂ ಸ್ಟಾಂಪ್ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ. ಉದ್ಯಮಿಗಳು, ಯುವಜನರಿಗೆ ನೆರವಾಗಲು ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಜಮ್ಮು ಮತ್ತು ಕಾಶ್ಮೀರದ ಎಲ್ಲ ಬ್ಯಾಂಕ್ಗಳಲ್ಲಿ ವಿಶೇಷ ಡೆಸ್ಕ್ ಆರಂಭಿಸಲಾಗುವುದು ಎಂದು ತಿಳಿಸಿದರು.</p>.<p class="title">ಈ ವರ್ಷದ ಆಗಸ್ಟ್ನಲ್ಲಿ ಲೆಫ್ಟಿನಂಟ್ ಗವರ್ನರ್ ಆಗಿ ನೇಮಕಗೊಂಡಿರುವ ಅವರು, ಕೇಂದ್ರಾಡಳಿತ ಪ್ರದೇಶದ ಪ್ರಗತಿಗೆ ಸರ್ಕಾರ ಬದ್ಧವಾಗಿದೆ. ಇಲ್ಲಿ 15–20 ವರ್ಷಗಳಿಂದಲೂ ಉದ್ಯಮ ನಲುಗಿದೆ. ಉದ್ಯಮಕ್ಕೆ ಚೇತರಿಕೆ ನೀಡಲು ಶೀಘ್ರವೇ ನೂತನ ನೀತಿಯನ್ನು ಪ್ರಕಟಿಸಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>