<p><strong>ಚೆನ್ನೈ</strong>: ಎಐಎಡಿಎಂಕೆ ಉಚ್ಚಾಟಿತ ಶಾಸಕ ಕೆ. ಎ. ಸೆಂಗೊಟ್ಟೆಯನ್ ಮತ್ತು ಅವರ ಬೆಂಬಲಿಗರು ಗುರುವಾರ ನಟ, ರಾಜಕಾರಣಿ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.</p><p>ಪನೈಯೂರ್ನಲ್ಲಿರುವ ಟಿವಿಕೆ ಪ್ರಧಾನ ಕಚೇರಿಗೆ ಆಗಮಿಸಿದ ಸೆಂಗೊಟ್ಟೆಯನ್, ಮಾಜಿ ಎಐಎಡಿಎಂಕೆ ಸಂಸದೆ ವಿ. ಸತ್ಯಭಾಮ ಸೇರಿದಂತೆ ಹಲವಾರು ಬೆಂಬಲಿಗರೊಂದಿಗೆ ವಿಜಯ್ ಅವರ ಸಮ್ಮುಖದಲ್ಲಿ ಟಿವಿಕೆ ಸೇರಿದ್ದಾರೆ.</p><p>ಸೆಂಗೊಟ್ಟೆಯನ್ ಅವರಿಗೆ ಪಕ್ಷದ ಶಾಲು ಹೊದಿಸಿ ಸ್ವಾಗತಿಸಿ ವಿಜಯ್, ಅವರನ್ನು ಕೊಯಮತ್ತೂರು, ಈರೋಡ್, ತಿರುಪ್ಪೂರು ಮತ್ತು ನೀಲಗಿರಿ ಜಿಲ್ಲೆಗಳಿಗೆ ಸಂಘಟನಾ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ.</p><p>ಸೆಂಗೊಟ್ಟೆಯನ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಕೊಂಗು ಪ್ರದೇಶದಲ್ಲಿ ವಿಶೇಷವಾಗಿ ಅವರ ಹುಟ್ಟೂರಾದ ಈರೋಡ್ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಟಿವಿಕೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.</p><p>ಒಂಬತ್ತು ಬಾರಿ ಶಾಸಕರಾಗಿರುವ ಸೆಂಗೊಟ್ಟೆಯನ್, ನವೆಂಬರ್ 26ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಿ.ಎಚ್. ಮನೋಜ್ ಪಾಂಡಿಯನ್ ನಂತರ ರಾಜೀನಾಮೆ ನೀಡಿದ ಎರಡನೇ ಎಐಎಡಿಎಂಕೆ ಶಾಸಕರಾಗಿದ್ದಾರೆ. ಪಾಂಡಿಯನ್ ಆಡಳಿತಾರೂಢ ಡಿಎಂಕೆ ಸೇರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ</strong>: ಎಐಎಡಿಎಂಕೆ ಉಚ್ಚಾಟಿತ ಶಾಸಕ ಕೆ. ಎ. ಸೆಂಗೊಟ್ಟೆಯನ್ ಮತ್ತು ಅವರ ಬೆಂಬಲಿಗರು ಗುರುವಾರ ನಟ, ರಾಜಕಾರಣಿ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.</p><p>ಪನೈಯೂರ್ನಲ್ಲಿರುವ ಟಿವಿಕೆ ಪ್ರಧಾನ ಕಚೇರಿಗೆ ಆಗಮಿಸಿದ ಸೆಂಗೊಟ್ಟೆಯನ್, ಮಾಜಿ ಎಐಎಡಿಎಂಕೆ ಸಂಸದೆ ವಿ. ಸತ್ಯಭಾಮ ಸೇರಿದಂತೆ ಹಲವಾರು ಬೆಂಬಲಿಗರೊಂದಿಗೆ ವಿಜಯ್ ಅವರ ಸಮ್ಮುಖದಲ್ಲಿ ಟಿವಿಕೆ ಸೇರಿದ್ದಾರೆ.</p><p>ಸೆಂಗೊಟ್ಟೆಯನ್ ಅವರಿಗೆ ಪಕ್ಷದ ಶಾಲು ಹೊದಿಸಿ ಸ್ವಾಗತಿಸಿ ವಿಜಯ್, ಅವರನ್ನು ಕೊಯಮತ್ತೂರು, ಈರೋಡ್, ತಿರುಪ್ಪೂರು ಮತ್ತು ನೀಲಗಿರಿ ಜಿಲ್ಲೆಗಳಿಗೆ ಸಂಘಟನಾ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ.</p><p>ಸೆಂಗೊಟ್ಟೆಯನ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಕೊಂಗು ಪ್ರದೇಶದಲ್ಲಿ ವಿಶೇಷವಾಗಿ ಅವರ ಹುಟ್ಟೂರಾದ ಈರೋಡ್ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಟಿವಿಕೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.</p><p>ಒಂಬತ್ತು ಬಾರಿ ಶಾಸಕರಾಗಿರುವ ಸೆಂಗೊಟ್ಟೆಯನ್, ನವೆಂಬರ್ 26ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಿ.ಎಚ್. ಮನೋಜ್ ಪಾಂಡಿಯನ್ ನಂತರ ರಾಜೀನಾಮೆ ನೀಡಿದ ಎರಡನೇ ಎಐಎಡಿಎಂಕೆ ಶಾಸಕರಾಗಿದ್ದಾರೆ. ಪಾಂಡಿಯನ್ ಆಡಳಿತಾರೂಢ ಡಿಎಂಕೆ ಸೇರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>