<p><strong>ಕಣ್ಣೂರು (ಕೇರಳ):</strong> ಮಾಜಿ ಸಚಿವ ಹಾಗೂ ಕೂತುಪರಂಬ ಕ್ಷೇತ್ರದ ಶಾಸಕ ಕೆ.ಪಿ ಮೋಹನನ್ ಅವರ ಮೇಲೆ ಕಣ್ಣೂರಿನ ಕರಿಯಾಡ್ನಲ್ಲಿ ಹಲ್ಲೆ ನಡೆಸಲಾಗಿದೆ ಎನ್ನುವ ಆರೋಪದ ಮೇಲೆ 10 ಮಂದಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.ಕೇರಳ | ‘ಕಲಾಮಂಡಲಂ’ನಲ್ಲಿ ಮೊದಲ ಬಾರಿಗೆ ಮುಸ್ಲಿಂ ಬಾಲಕಿಯ ರಂಗಪ್ರವೇಶ.<p>ಅಂಗನವಾಡಿಯೊಂದರ ಉದ್ಘಾಟನೆಗೆ ಪೆರಿಂಗತ್ತೂರಿನ ಕರಿಯಾಡ್ಗೆ ಗುರುವಾರ ಆಗಮಿಸಿದ್ದ ಆಡಳಿತರೂಢ ಎಲ್ಡಿಎಫ್ನ ಶಾಸಕ ಮೋಹನನ್ ಅವರ ಮೇಲೆ ಬೆಳಿಗ್ಗೆ ಸುಮಾರು 11.30ರ ವೇಳೆಗೆ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p><p>ದತ್ತಿ ಟ್ರಸ್ಟ್ ಒಂದರಿಂದ ನಡೆಸಲ್ಪಡುತ್ತಿರುವ ಡಯಾಲಿಸಿಸ್ ಕೇಂದ್ರವೊಂದರ ಸಮೀಪ ಅಂಗನವಾಡಿಯ ತ್ಯಾಜ್ಯವನ್ನು ಹಾಕಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರೇ ಪ್ರತಿಭಟನೆ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.</p>.ಕೇರಳ ಸರ್ಕಾರದಿಂದ ಅ.4 ರಂದು ನಟ ಮೋಹನ್ ಲಾಲ್ಗೆ ಸನ್ಮಾನ, ಅದ್ಧೂರಿ ಕಾರ್ಯಕ್ರಮ.<p>ಸುಮಾರು 15 ಮಂದಿ ಸೇರಿ ಶಾಸಕರನ್ನು ತಡೆದು, ಸ್ಥಳದಲ್ಲಿ ಸಂಚಾರಕ್ಕೆ ತೊಡಕುಂಟು ಮಾಡಿ, ಗಲಭೆಗೆ ಪ್ರಚೋದಿಸಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.</p><p>ಕಾರಿನಿಂದ ಇಳಿದು ಕಾರ್ಯಕ್ರಮದ ಸ್ಥಳಕ್ಕೆ ನಡೆದುಕೊಂಡು ಹೋಗುವ ವೇಳೆ, ಗುಂಪು ಅವರನ್ನು ಮತ್ತೆ ತಡೆದಿದ್ದು, ಈ ವೇಳೆ ನೂಕು ನುಗ್ಗಲು ಸಂಭವಿಸಿದೆ. ಇದರ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.</p>.ಕೇರಳ: ಕಾಣೆಯಾಗಿದ್ದ ಶಬರಿಮಲೆ ದ್ವಾರಪಾಲಕರ ಸ್ವರ್ಣಲೇಪಿತ ಪೀಠ ಪತ್ತೆ.<p>ಇದಾದ ಬಳಿಕವೂ ಕಾರ್ಯಕ್ರಮದಲ್ಲಿ ಶಾಸಕ ಕಾರ್ಯಕ್ರಮದಲ್ಲಿ ಭಾಗಿಯಾದರು. ಸ್ಥಳಕ್ಕೆ ತೆರಳಿದ ಪೊಲೀಸರು ಲಿಖಿತ ದೂರು ನೀಡುವಂತೆ ವಿನಂತಿಸಿದ್ದಾರೆ. ಆದರೆ ಅವರು ನಿರಕರಿಸಿದ್ದಾರೆ.</p><p>ಶಾಸಕರು ದೂರು ನೀಡಲು ನಿರಾಕರಿಸಿದ್ದರಿಂದ, ನಾವೇ ದೂರು ದಾಖಲಿಸಿಕೊಂಡು, 10 ಮಂದಿ ಮೇಲೆ ಪ್ರಕರಣ ಹಾಕಿದ್ದೇವೆ. ಭಾರತೀಯ ನ್ಯಾಯ ಸಂಹಿತೆ ವಿವಿಧ ಸೆಕ್ಷನ್ಗಳಡಿ ದೂರು ದಾಖಲಿಸಿಕೊಂಡಿದ್ದೇವೆ. ತನಿಖೆಯ ಭಾಗವಾಗಿ ಮೋಹನನ್ ಅವರ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.</p> .ಎಸ್ಐಆರ್ಗೆ ವಿರೋಧ: ಕೇರಳ ವಿಧಾನಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಅಂಗೀಕಾರ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಣ್ಣೂರು (ಕೇರಳ):</strong> ಮಾಜಿ ಸಚಿವ ಹಾಗೂ ಕೂತುಪರಂಬ ಕ್ಷೇತ್ರದ ಶಾಸಕ ಕೆ.ಪಿ ಮೋಹನನ್ ಅವರ ಮೇಲೆ ಕಣ್ಣೂರಿನ ಕರಿಯಾಡ್ನಲ್ಲಿ ಹಲ್ಲೆ ನಡೆಸಲಾಗಿದೆ ಎನ್ನುವ ಆರೋಪದ ಮೇಲೆ 10 ಮಂದಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.ಕೇರಳ | ‘ಕಲಾಮಂಡಲಂ’ನಲ್ಲಿ ಮೊದಲ ಬಾರಿಗೆ ಮುಸ್ಲಿಂ ಬಾಲಕಿಯ ರಂಗಪ್ರವೇಶ.<p>ಅಂಗನವಾಡಿಯೊಂದರ ಉದ್ಘಾಟನೆಗೆ ಪೆರಿಂಗತ್ತೂರಿನ ಕರಿಯಾಡ್ಗೆ ಗುರುವಾರ ಆಗಮಿಸಿದ್ದ ಆಡಳಿತರೂಢ ಎಲ್ಡಿಎಫ್ನ ಶಾಸಕ ಮೋಹನನ್ ಅವರ ಮೇಲೆ ಬೆಳಿಗ್ಗೆ ಸುಮಾರು 11.30ರ ವೇಳೆಗೆ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p><p>ದತ್ತಿ ಟ್ರಸ್ಟ್ ಒಂದರಿಂದ ನಡೆಸಲ್ಪಡುತ್ತಿರುವ ಡಯಾಲಿಸಿಸ್ ಕೇಂದ್ರವೊಂದರ ಸಮೀಪ ಅಂಗನವಾಡಿಯ ತ್ಯಾಜ್ಯವನ್ನು ಹಾಕಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರೇ ಪ್ರತಿಭಟನೆ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.</p>.ಕೇರಳ ಸರ್ಕಾರದಿಂದ ಅ.4 ರಂದು ನಟ ಮೋಹನ್ ಲಾಲ್ಗೆ ಸನ್ಮಾನ, ಅದ್ಧೂರಿ ಕಾರ್ಯಕ್ರಮ.<p>ಸುಮಾರು 15 ಮಂದಿ ಸೇರಿ ಶಾಸಕರನ್ನು ತಡೆದು, ಸ್ಥಳದಲ್ಲಿ ಸಂಚಾರಕ್ಕೆ ತೊಡಕುಂಟು ಮಾಡಿ, ಗಲಭೆಗೆ ಪ್ರಚೋದಿಸಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.</p><p>ಕಾರಿನಿಂದ ಇಳಿದು ಕಾರ್ಯಕ್ರಮದ ಸ್ಥಳಕ್ಕೆ ನಡೆದುಕೊಂಡು ಹೋಗುವ ವೇಳೆ, ಗುಂಪು ಅವರನ್ನು ಮತ್ತೆ ತಡೆದಿದ್ದು, ಈ ವೇಳೆ ನೂಕು ನುಗ್ಗಲು ಸಂಭವಿಸಿದೆ. ಇದರ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.</p>.ಕೇರಳ: ಕಾಣೆಯಾಗಿದ್ದ ಶಬರಿಮಲೆ ದ್ವಾರಪಾಲಕರ ಸ್ವರ್ಣಲೇಪಿತ ಪೀಠ ಪತ್ತೆ.<p>ಇದಾದ ಬಳಿಕವೂ ಕಾರ್ಯಕ್ರಮದಲ್ಲಿ ಶಾಸಕ ಕಾರ್ಯಕ್ರಮದಲ್ಲಿ ಭಾಗಿಯಾದರು. ಸ್ಥಳಕ್ಕೆ ತೆರಳಿದ ಪೊಲೀಸರು ಲಿಖಿತ ದೂರು ನೀಡುವಂತೆ ವಿನಂತಿಸಿದ್ದಾರೆ. ಆದರೆ ಅವರು ನಿರಕರಿಸಿದ್ದಾರೆ.</p><p>ಶಾಸಕರು ದೂರು ನೀಡಲು ನಿರಾಕರಿಸಿದ್ದರಿಂದ, ನಾವೇ ದೂರು ದಾಖಲಿಸಿಕೊಂಡು, 10 ಮಂದಿ ಮೇಲೆ ಪ್ರಕರಣ ಹಾಕಿದ್ದೇವೆ. ಭಾರತೀಯ ನ್ಯಾಯ ಸಂಹಿತೆ ವಿವಿಧ ಸೆಕ್ಷನ್ಗಳಡಿ ದೂರು ದಾಖಲಿಸಿಕೊಂಡಿದ್ದೇವೆ. ತನಿಖೆಯ ಭಾಗವಾಗಿ ಮೋಹನನ್ ಅವರ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.</p> .ಎಸ್ಐಆರ್ಗೆ ವಿರೋಧ: ಕೇರಳ ವಿಧಾನಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಅಂಗೀಕಾರ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>