<p><strong>ಮುಂಬೈ</strong>: ಸೆ.1 ಶುಕ್ರವಾರ ಮುಂಬೈನಲ್ಲಿ ಇಂಡಿಯಾ ಒಕ್ಕೂಟದ ಮಹತ್ವದ ಮೂರನೇ ಸಭೆ ನಡೆಯಿತು. ಈ ಸಭೆಯಲ್ಲಿ ನಡೆದ ಆಶ್ಚರ್ಯಕರ ಘಟನೆಯೊಂದು ಚರ್ಚೆಗೆ ಗ್ರಾಸವಾಗಿದೆ.</p><p>ಕಳೆದ ವರ್ಷ ಕಾರಣಾಂತರಗಳಿಂದ ಕಾಂಗ್ರೆಸ್ ತೊರೆದಿರುವ ರಾಜ್ಯಸಭಾ ಸದಸ್ಯ, ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಆಹ್ವಾನವಿಲ್ಲದೇ ಇಂಡಿಯಾ ಸಭೆಗೆ ಹಾಜರಾಗಿದ್ದರು. ಇದರಿಂದ ಅನೇಕ ಕಾಂಗ್ರೆಸ್ ನಾಯಕರು ಮುಜುಗರಕ್ಕೊಳಗಾದರು ಎಂದು ತಿಳಿದು ಬಂದಿದೆ.</p><p>ಸಭೆಗೆ ಸಿಬಲ್ ಅವರ ಪ್ರವೇಶದಿಂದ ಕಸಿವಿಸಿಗೆ ಒಳಗಾದ ಕಾಂಗ್ರೆಸ್ ನಾಯಕ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು, ಸಭೆಯ ಉಸ್ತುವಾರಿಯಾಗಿದ್ದ ಉದ್ಧವ್ ಠಾಕ್ರೆಗೆ ದೂರು ನೀಡಿದರು.</p>.<p>ಆದರೆ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ನ ಫಾರೂಕ್ ಅಬ್ದುಲ್ಲಾ ಕೆ.ಸಿ ವೇಣುಗೋಪಾಲ್ ಅವರಿಗೆ ಮನವಿ ಮಾಡಿ, ವಿರೋಧ ಪಕ್ಷಗಳ ಒಗ್ಗಟ್ಟಿನ ಹಿನ್ನೆಲೆಯಲ್ಲಿ ಇದನ್ನೆಲ್ಲ ದೊಡ್ಡದು ಮಾಡುವುದು ಬೇಡ ಎಂದು ಗಮನಕ್ಕೆ ತಂದರು ಎನ್ನಲಾಗಿದೆ.</p><p>ಇದೇ ವೇಳೆ ರಾಹುಲ್ ಗಾಂಧಿ ಕೂಡ ಸಿಬಲ್ ಪ್ರವೇಶದ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಬಳಿಕ ಇಂಡಿಯಾ ನಾಯಕರ ಗ್ರೂಪ್ ಫೋಟೊ ಸೆಷನ್ ಕಾರ್ಯಕ್ರಮದಲ್ಲೂ ಕಪಿಲ್ ಹಾಜರಾಗಿದ್ದು ಕಂಡು ಬಂದಿದೆ.</p><p>2022ರ ಮೇನಲ್ಲಿ ಕಪಿಲ್ ಸಿಬಲ್ ಅವರು ಕಾಂಗ್ರೆಸ್ಗೆ ರಾಜೀನಾಮೆ ನೀಡಿದರು. ನಂತರ ಸಮಾಜವಾದಿ ಪಕ್ಷದ ಬಾಹ್ಯ ಬೆಂಬಲದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಇಂಡಿಯಾ ಮೈತ್ರಿಕೂಟ ಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಪಿಲ್ ಸಿಬಲ್ ಅವರ ಈ ನಡೆ ಕುತೂಹಲ ಮೂಡಿಸಿದೆ ಎಂದು ಚರ್ಚೆಯಾಗುತ್ತಿದೆ.</p><p>ಪಟ್ನಾ, ಬೆಂಗಳೂರು ನಂತರ ಮುಂಬೈನಲ್ಲಿ ಸಭೆ ಸೇರಿದ ಇಂಡಿಯಾ ಒಕ್ಕೂಟದ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದಾರೆ.</p><p>ಕಪಿಲ್ ಸಿಬಲ್ ಅವರು, ಶಿವಸೇನಾ ಬಣಗಳ ಕಿತ್ತಾಟದ ಪ್ರಕರಣದ ಬಗ್ಗೆ ಉದ್ಧವ್ ಠಾಕ್ರೆ ಪರವಾಗಿ ಸುಪ್ರಿಂಕೋರ್ಟ್ನಲ್ಲಿ ವಾದಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಸೆ.1 ಶುಕ್ರವಾರ ಮುಂಬೈನಲ್ಲಿ ಇಂಡಿಯಾ ಒಕ್ಕೂಟದ ಮಹತ್ವದ ಮೂರನೇ ಸಭೆ ನಡೆಯಿತು. ಈ ಸಭೆಯಲ್ಲಿ ನಡೆದ ಆಶ್ಚರ್ಯಕರ ಘಟನೆಯೊಂದು ಚರ್ಚೆಗೆ ಗ್ರಾಸವಾಗಿದೆ.</p><p>ಕಳೆದ ವರ್ಷ ಕಾರಣಾಂತರಗಳಿಂದ ಕಾಂಗ್ರೆಸ್ ತೊರೆದಿರುವ ರಾಜ್ಯಸಭಾ ಸದಸ್ಯ, ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಆಹ್ವಾನವಿಲ್ಲದೇ ಇಂಡಿಯಾ ಸಭೆಗೆ ಹಾಜರಾಗಿದ್ದರು. ಇದರಿಂದ ಅನೇಕ ಕಾಂಗ್ರೆಸ್ ನಾಯಕರು ಮುಜುಗರಕ್ಕೊಳಗಾದರು ಎಂದು ತಿಳಿದು ಬಂದಿದೆ.</p><p>ಸಭೆಗೆ ಸಿಬಲ್ ಅವರ ಪ್ರವೇಶದಿಂದ ಕಸಿವಿಸಿಗೆ ಒಳಗಾದ ಕಾಂಗ್ರೆಸ್ ನಾಯಕ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು, ಸಭೆಯ ಉಸ್ತುವಾರಿಯಾಗಿದ್ದ ಉದ್ಧವ್ ಠಾಕ್ರೆಗೆ ದೂರು ನೀಡಿದರು.</p>.<p>ಆದರೆ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ನ ಫಾರೂಕ್ ಅಬ್ದುಲ್ಲಾ ಕೆ.ಸಿ ವೇಣುಗೋಪಾಲ್ ಅವರಿಗೆ ಮನವಿ ಮಾಡಿ, ವಿರೋಧ ಪಕ್ಷಗಳ ಒಗ್ಗಟ್ಟಿನ ಹಿನ್ನೆಲೆಯಲ್ಲಿ ಇದನ್ನೆಲ್ಲ ದೊಡ್ಡದು ಮಾಡುವುದು ಬೇಡ ಎಂದು ಗಮನಕ್ಕೆ ತಂದರು ಎನ್ನಲಾಗಿದೆ.</p><p>ಇದೇ ವೇಳೆ ರಾಹುಲ್ ಗಾಂಧಿ ಕೂಡ ಸಿಬಲ್ ಪ್ರವೇಶದ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಬಳಿಕ ಇಂಡಿಯಾ ನಾಯಕರ ಗ್ರೂಪ್ ಫೋಟೊ ಸೆಷನ್ ಕಾರ್ಯಕ್ರಮದಲ್ಲೂ ಕಪಿಲ್ ಹಾಜರಾಗಿದ್ದು ಕಂಡು ಬಂದಿದೆ.</p><p>2022ರ ಮೇನಲ್ಲಿ ಕಪಿಲ್ ಸಿಬಲ್ ಅವರು ಕಾಂಗ್ರೆಸ್ಗೆ ರಾಜೀನಾಮೆ ನೀಡಿದರು. ನಂತರ ಸಮಾಜವಾದಿ ಪಕ್ಷದ ಬಾಹ್ಯ ಬೆಂಬಲದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಇಂಡಿಯಾ ಮೈತ್ರಿಕೂಟ ಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಪಿಲ್ ಸಿಬಲ್ ಅವರ ಈ ನಡೆ ಕುತೂಹಲ ಮೂಡಿಸಿದೆ ಎಂದು ಚರ್ಚೆಯಾಗುತ್ತಿದೆ.</p><p>ಪಟ್ನಾ, ಬೆಂಗಳೂರು ನಂತರ ಮುಂಬೈನಲ್ಲಿ ಸಭೆ ಸೇರಿದ ಇಂಡಿಯಾ ಒಕ್ಕೂಟದ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದಾರೆ.</p><p>ಕಪಿಲ್ ಸಿಬಲ್ ಅವರು, ಶಿವಸೇನಾ ಬಣಗಳ ಕಿತ್ತಾಟದ ಪ್ರಕರಣದ ಬಗ್ಗೆ ಉದ್ಧವ್ ಠಾಕ್ರೆ ಪರವಾಗಿ ಸುಪ್ರಿಂಕೋರ್ಟ್ನಲ್ಲಿ ವಾದಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>