ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಈ ವಿಷಯವನ್ನು ಮೊದಲು ಸಭೆಯಲ್ಲಿ ಪ್ರಸ್ತಾಪಿಸಿದರು. ‘ಕೇಂದ್ರೀಯ ಶಾಲೆಗಳಲ್ಲಿನ 10 ಸೀಟುಗಳಿಗೆ ಶಿಫಾರಸು ಮಾಡುವುದಕ್ಕೆ ನಮಗೆ ಸಾರ್ವಜನಿಕರಿಗೆ ಹೆಚ್ಚಿನ ಮನವಿಗಳು ಬರುತ್ತಿವೆ. ಹಾಗಾಗಿ ಈ ಕೋಟಾವನ್ನು ಹೆಚ್ಚಿಸಿ ಇಲ್ಲವೇ, ಕೋಟಾವನ್ನೇ ಕೊನೆಗೊಳಿಸಿ’ ಎಂದು ತಿವಾರಿ ಹೇಳಿದರು.