ಪ್ರಕರಣವನ್ನು ರಾಜ್ಯ ಸರ್ಕಾರ ಸರಿಯಾಗಿ ನಿಭಾಯಿಸುತ್ತಿದೆಯೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ಪ್ರಶ್ನೆಗೆ ಉತ್ತರಿಸಲು ಇದು ಸರಿಯಾದ ಸಮಯವಲ್ಲ. ಏನಾದರೂ ಲೋಪಗಳಾದಲ್ಲಿ ಭವಿಷ್ಯದಲ್ಲಿ ಈ ಪ್ರಶ್ನೆಯನ್ನು ನೀವು ಕೇಳಬಹು’ ಎಂದರು.
‘ಈಗ ಎರಡು ಸಂಗತಿಗಳಿವೆ. ಒಂದು ಸಹಾನುಭೂತಿ ವ್ಯಕ್ತಪಡಿಸುವುದು. ಎರಡನೆಯದು ಹಿಂಸೆಯ ಸಂಸ್ಕೃತಿಯನ್ನು ನಾವು ಸಹಿಸಿಕೊಳ್ಳಬಾರದು. ಇದು ಪ್ರಜಾಪ್ರಭುತ್ವಕ್ಕೆ ಅಸಹ್ಯ. ಕಾನೂನಿಗೆ ಮತ್ತು ನಾಗರಿಕ ಸಮಾಜಕ್ಕೂ ಇದು ಅಸಹ್ಯ. ಕಾನೂನು ಕೈಗೆತ್ತಿಕೊಂಡು ಜನರ ಜೀವದ ಜತೆ ಆಟವಾಡಲು ಬಿಡಬಾರದು’ ಎಂದು ಅವರು ಹೇಳಿದರು.