<p><strong>ಪಾಲಕ್ಕಾಡ, ಕೇರಳ:</strong> ರೈಲೊಂದು ಡಿಕ್ಕಿಯಾಗಿ ಕಾಡಾನೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೇರಳದ ಪಾಲಕ್ಕಾಡ ಜಿಲ್ಲೆಯಲ್ಲಿ ನಡೆದಿದೆ.</p><p>ಗುರುವಾರ ಈ ಘಟನೆ ನಡೆದಿದ್ದು, ಗಾಯಗೊಂಡಿರುವ ಆನೆಗೆ ರೈಲು ಹಳಿ ಪಕ್ಕವೇ ಪಶು ವೈದ್ಯರು ಚಿಕಿತ್ಸೆ ಪ್ರಾರಂಭಿಸಿದ್ದಾರೆ. ಅಲ್ಲಿಯೇ ಆಹಾರ ನೀಡಿದ್ದಾರೆ. ಆದರೂ ಆನೆ ಚೇತರಿಸಿಕೊಳ್ಳುತ್ತಿಲ್ಲ.</p><p>‘ಆನೆಯ ಹಿಂಗಾಲುಗಳಿಗೆ ಗಂಭೀರ ಗಾಯಗಳಾಗಿವೆ. ಎದ್ದು ನಿಲ್ಲಲು ಆಗುತ್ತಿಲ್ಲ’ ಎಂದು ತ್ರಿಶೂರ್ ವಲಯದ ಅರಣ್ಯ ಪಶುವೈಧ್ಯಾಧಿಕಾರಿ ಡಾ. ಡೇವಿಡ್ ಅಬ್ರಾಂ ತಿಳಿಸಿದ್ದಾರೆ.</p><p>ರೈಲು ಡಿಕ್ಕಿಯಾಗಿ ಆನೆ ಗಾಯಗೊಂಡಿದೆ. ಆದರೆ ಯಾವ ರೈಲು ಎಂಬುದು ಇನ್ನೂ ತಿಳಿದು ಬಂದಿಲ್ಲ. ಅಪರಿಚಿತ ಲೋಕೊ ಪೈಲಟ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.</p><p>ಆನೆ ಶೀಘ್ರ ಚೇತರಿಸಿಕೊಳ್ಳಲು ಆಗದಿದ್ದರೇ ಅದನ್ನು ವಳಯಾರ್ ಪಶು ಆಸ್ಪತ್ರೆಗೆ ರವಾನಿಸಲಾಗುವುದು ಎಂದು ತಿಳಿಸಿದ್ದಾರೆ.</p>.ಮಹದೇಶ್ವರ ಬೆಟ್ಟ: ಕಾಲ್ನಡಿಗೆ ಬರುತ್ತಿದ್ದ ಭಕ್ತರ ಮೇಲೆ ಕಾಡಾನೆ ದಾಳಿ;ಮಹಿಳೆ ಸಾವು.ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ಮೂಡಿಗೆರೆ ನಕ್ಸಲ್ ಸುರೇಶ್ ಕೇರಳ ಪೊಲೀಸರಿಗೆ ಶರಣು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಲಕ್ಕಾಡ, ಕೇರಳ:</strong> ರೈಲೊಂದು ಡಿಕ್ಕಿಯಾಗಿ ಕಾಡಾನೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೇರಳದ ಪಾಲಕ್ಕಾಡ ಜಿಲ್ಲೆಯಲ್ಲಿ ನಡೆದಿದೆ.</p><p>ಗುರುವಾರ ಈ ಘಟನೆ ನಡೆದಿದ್ದು, ಗಾಯಗೊಂಡಿರುವ ಆನೆಗೆ ರೈಲು ಹಳಿ ಪಕ್ಕವೇ ಪಶು ವೈದ್ಯರು ಚಿಕಿತ್ಸೆ ಪ್ರಾರಂಭಿಸಿದ್ದಾರೆ. ಅಲ್ಲಿಯೇ ಆಹಾರ ನೀಡಿದ್ದಾರೆ. ಆದರೂ ಆನೆ ಚೇತರಿಸಿಕೊಳ್ಳುತ್ತಿಲ್ಲ.</p><p>‘ಆನೆಯ ಹಿಂಗಾಲುಗಳಿಗೆ ಗಂಭೀರ ಗಾಯಗಳಾಗಿವೆ. ಎದ್ದು ನಿಲ್ಲಲು ಆಗುತ್ತಿಲ್ಲ’ ಎಂದು ತ್ರಿಶೂರ್ ವಲಯದ ಅರಣ್ಯ ಪಶುವೈಧ್ಯಾಧಿಕಾರಿ ಡಾ. ಡೇವಿಡ್ ಅಬ್ರಾಂ ತಿಳಿಸಿದ್ದಾರೆ.</p><p>ರೈಲು ಡಿಕ್ಕಿಯಾಗಿ ಆನೆ ಗಾಯಗೊಂಡಿದೆ. ಆದರೆ ಯಾವ ರೈಲು ಎಂಬುದು ಇನ್ನೂ ತಿಳಿದು ಬಂದಿಲ್ಲ. ಅಪರಿಚಿತ ಲೋಕೊ ಪೈಲಟ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.</p><p>ಆನೆ ಶೀಘ್ರ ಚೇತರಿಸಿಕೊಳ್ಳಲು ಆಗದಿದ್ದರೇ ಅದನ್ನು ವಳಯಾರ್ ಪಶು ಆಸ್ಪತ್ರೆಗೆ ರವಾನಿಸಲಾಗುವುದು ಎಂದು ತಿಳಿಸಿದ್ದಾರೆ.</p>.ಮಹದೇಶ್ವರ ಬೆಟ್ಟ: ಕಾಲ್ನಡಿಗೆ ಬರುತ್ತಿದ್ದ ಭಕ್ತರ ಮೇಲೆ ಕಾಡಾನೆ ದಾಳಿ;ಮಹಿಳೆ ಸಾವು.ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ಮೂಡಿಗೆರೆ ನಕ್ಸಲ್ ಸುರೇಶ್ ಕೇರಳ ಪೊಲೀಸರಿಗೆ ಶರಣು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>