ಈ ಕುರಿತು ಪ್ರತಿಕ್ರಿಯಿಸಿರುವ ಕೇರಳದ ಕಾಂಗ್ರೆಸ್ ಅಧ್ಯಕ್ಷ ಕೆ. ಸುಧಾಕರ್ ಅವರು, ‘ರಾಜ್ಯಪಾಲರಂಥ ಹಿರಿಯರು ಇಂಥ ಸಾಮಾಜಿಕ ಪಿಡುಗಿನ ವಿರುದ್ಧ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಕ್ಕೆ ಕೇರಳ ಇಂದು ಸಾಕ್ಷಿಯಾಗಿದೆ. ರಾಜ್ಯಪಾಲರು ಎತ್ತಿರುವ ಈ ವಿಚಾರವು, ವರದಕ್ಷಿಣೆ ಪಿಡುಗಿನ ವಿರುದ್ಧ ಕ್ರಮ ಕೈಗೊಳ್ಳಲು ಆಡಳಿತಾರೂಢ ಸರ್ಕಾರದ ಕಣ್ಣು ತೆರೆಸುವಂತಾಗಲಿ’ ಎಂದು ಹೇಳಿದ್ದಾರೆ.